ತುಮಕೂರು: ಚಿತ್ರಕಲೆ ಕ್ಷೇತ್ರ ಅವನತಿಯತ್ತ ಸಾಗುತ್ತಿದ್ದು, ಕಲೆ ಉಳಿಯುವತ್ತಾ ತಾವು ಕೆಲಸ ಮಾಡಬೇಕು. ಕಾಲೇಜು ಶಿಕ್ಷಣ ಇಲಾಖೆಯು ಚಿತ್ರಕಲಾ ಕ್ಷೇತ್ರದ ಅಭಿವೃದ್ದಿಗೆ ಬದ್ದವಾಗಿರುತ್ತದೆ ಎಂದು ಕಾಲೇಜು ಶಿಕ್ಷಣ ಪ್ರಾದೇಶಿಕ ಕಛೇರಿ ನಿರ್ದೇಶಕ ಡಾ.ರಾಮಕೃಷ್ಣರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಸರ್ಕಾರಿ ಚಿತ್ರಕಲಾ ಪದವಿ ಕಾಲೇಜಿನಲ್ಲಿ ಗುರುವಾರ ಆಯೋಜಿಸಲಾಗಿದ್ದ ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸರ್ಕಾರದ ಬಗ್ಗೆ ಅಸಡ್ಡೆ ಪಡಬೇಡಿ, ಅಂತಹ ಸರ್ಕಾರಗಳಿಂದಲೇ ನಾವಿಂದು ಉನ್ನತ ಹುದ್ದೆಯಲ್ಲಿ ಇರೋಕೆ ಸಾಧ್ಯ. ನಮ್ಮ ಶ್ರಮಕ್ಕೆ ತಕ್ಕ ಫಲ ಸಿಕ್ಕೆಸಿಗುತ್ತದೆ. ನಾನು ಕೂಡ ಬಡತನ ಕುಟುಂಬದಿಂದ ಬಂದವನು, ಸರ್ಕಾರಿ ಶಾಲಾ-ಕಾಲೇಜಿನಲ್ಲಿ ಓದಿ ಬೆಳೆದವನು. ಕಲಿಯುವ ಹಂತದಲ್ಲಿ ಕಷ್ಟಪಟ್ಟು ಅಭ್ಯಾಸ ಮಾಡಿದ್ದರ ಪರಿಣಾಮ ಸರ್ಕಾರಿ ಕೆಲಸ ಸಿಕ್ಕದೆ. ಹಾಗಾಗಿ ಸರ್ಕಾರ ನೀಡುವಂತಹ ಸೌಲಭ್ಯಗಳನ್ನು ವ್ಯವಸ್ಥಿತವಾಗಿ ವಿದ್ಯಾರ್ಥಿಗಳು ಬಳಸಿಕೊಳ್ಳಬೇಕಿದೆ ಎಂದು ಕಿವಿ ಮಾತು ಹೇಳಿದರು.
ಸರ್ಕಾರಿ ಕಾಲೇಜು ನಮ್ಮದು ಎನ್ನುವ ಭಾವನೆ ಎಲ್ಲರಲ್ಲಿ ಮೂಡಬೇಕು. ಪ್ರಾಂಶುಪಾಲರ ಹೊರತಾಗಿಯೂ ಎಲ್ಲಾರೂ ಕಾಲೇಜಿನ ಸುತ್ತಮುತ್ತ ಸ್ವಚ್ಚವಾಗಿಟ್ಟುಕೊಳ್ಳುವ ಕಾರ್ಯಮಾಡಬೇಕು. ನನ್ನ ಜವಾಬ್ದಾರಿಯನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದೇನೆ ಮುಂದೆ ತಾವು ಉತ್ತಮ ಕಲಾವಿದರಾಗಿ ಸ್ವಯಂ ಉದ್ಯೋಗ ಮಾಡುವ ಮೂಲಕ ಬದುಕು ಕಟ್ಟಿಕೊಳ್ಳುತ್ತಾ ಮುಖ ಮಾಡಬೇಕು ಎಂದು ಹೇಳಿದರು.
ಸರ್ಕಾರಿ ಚಿತ್ರಕಲಾ ಪದವಿ ಕಾಲೇಜು ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ನಟರಾಜು ಜಿ.ಎಲ್ ಮಾತನಾಡಿ, ಕಳೆದ 30 ವರ್ಷಗಳಿಂದಲೂ ಪಿಯು ಕ್ಯಾಂಪಸ್ ನಲ್ಲಿದ್ದ ಸರ್ಕಾರಿ ಚಿತ್ರಕಲಾ ಪದವಿ ಕಾಲೇಜು ಅಭಿವೃದ್ದಿ ಮಾಡುವಲ್ಲಿ ಇಲಾಖೆಗಳು ಹಿಂದೇಟು ಹಾಕುತ್ತಿದ್ದ ಹಲವು ಘಟನೆಗಳನ್ನು ನಾವು ಕಂಡಿದ್ದೇವೆ. ತೀರಾ ಇತ್ತೀಚೆಗೆ ಇದೇ ನಮ್ಮ ಜಂಟಿ ನಿರ್ದೇಶಕರಾದ ಡಾ.ರಾಮಕೃಷ್ಣರೆಡ್ಡಿ ಅವರು ಹಳೆ ಕಾಲೇಜಿಗೆ ಖುದ್ದು ಭೇಟಿ ನೀಡಿ ವಿವಿಧ ಸೌಲಭ್ಯ ವಂಚಿತ ಸ್ಥಿತಿಯನ್ನು ಕಂಡು ತಕ್ಷಣ ಸ್ಪಂದಿಸಿದ ಪರಿಣಾಮ ನಾವಿಲ್ಲಿ ಉತ್ತಮ ಕಟ್ಟಡದಲ್ಲಿದ್ದೇವೆ. ಇದು ಇಲಾಖೆಗೆ ಹಾಗೂ ಹಿರಿಯ ಅಧಿಕಾರಿಗಳಿಗೆ ಕಲೆ ಮತ್ತು ಕಲಾ ವಿದ್ಯಾರ್ಥಿಗಳ ಬಗ್ಗೆ ಇರುವ ಕಾಳಜಿ ಎಂದು ಹೇಳಿದರು.
ತುಮಕೂರಿನ ಕಾಳಜಿ ಸಂಸ್ಥೆಯು ನಮ್ಮ ಜೊತೆ ಕೈಜೊಡಿಸಿ ಕೆಲಸ ಮಾಡಿದ್ದರ ಪರಿಣಾಮದಿಂದ ಇಂದು ಕಲಾ ವಿದ್ಯಾರ್ಥಿಗಳಿಗೆ ಹಲವು ಮೂಲಭೂತ ಸೌಲಭ್ಯಗಳು ದೊರಕಿವೆ. ಕಾಳಜಿ ತಂಡಕ್ಕೆ ಈ ಸಂದರ್ಭದಲ್ಲಿ ಅಭಿನಂದನೆಗಳನ್ನು ಸಲ್ಲಿಸಬೇಕು. ಹಾಗೂ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಕೊಡಿಸುವಲ್ಲಿ ಮುಂದಾಗಬೇಕು ಎಂದು ಕೇಳಿಕೊಂಡರು.
ಸರ್ಕಾರಿ ಚಿತ್ರಕಲಾ ಪದವಿ ಕಾಲೇಜಿನ ಪ್ರಾಚಾರ್ಯ ಸಿ.ಸಿ.ಬಾರಕೇರ ಮಾತನಾಡಿ, ಕಳೆದ 10 ವರ್ಷಗಳಿಂದಲೂ ಈ ಕಾಲೇಜಿನಲ್ಲಿ ಕರ್ತವ್ಯ ನಿಭಾಯಿಸಿಕೊಂಡು ಬಂದಿದ್ದೇನೆ. ಎಲ್ಲಾ ತರಹದ ಘಟನೆಗಳನ್ನು ಕಂಡಿದ್ದೇನೆ. ಕೆಲವು ಸಿಗದಿದ್ದನ್ನು ನನ್ನದೇ ದಾರಿಯಲ್ಲಿ ನಡೆದು ಪಡೆದುಕೊಂಡಿದ್ದೇನೆ. ಈ ಕಾಲೇಜು ಉತ್ತಮ ಕಟ್ಟಡದಲ್ಲಿರಬೇಕು ಎನ್ನುವ ಭಾವನೆ ನನ್ನದಾಗಿತ್ತು. ಬಹಳ ದಿನದ ಕನಸು ಯಶಸ್ಸಾಗಿದೆ. ಮುಂದಿನ ದಿನಗಳಲ್ಲಿ ಈ ಕಾಲೇಜಿಗೆ ಸ್ವಂತ ನಿವೇಶನ ಹಾಗೂ ಸ್ವಂತ ಕಟ್ಟಡ ಆಗುವಂತಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ ತರುನ್ನಂ, ಕಾಲೇಜು ಶಿಕ್ಷಣ ಇಲಾಖೆ ವಿಶೇಷಾಧಿಕಾರಿ ಬಸವರಾಜು, ಪ್ರಾಧ್ಯಪಕರಾದ ಪ್ರೊ.ತಿಪ್ಪೇಸ್ವಾಮಿ, ಪ್ರೊ.ಯೋಗೀಶ್, ಡಾ.ಡಿ.ಆರ್.ಸುರೇಂದ್ರನಾಥ್, ಡಾ.ಸಂತೋಷಕುಮಾರ್, ಡಾ.ಶ್ವೇತ ಡಿ.ಎಸ್ ಹಾಗೂ ವಿದ್ಯಾರ್ಥಿಗಳು ಇದ್ದರು.
ಈ ಹಿಂದೆ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಡಾ.ರಾಮಕೃಷ್ಣರೆಡ್ಡಿ ಅವರು ಸರ್ಕಾರಿ ಚಿತ್ರಕಲಾ ಪದವಿ ಕಾಲೇಜಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಆ ಕಾಲೇಜು ಶಿಥಿಲಾವಸ್ಥೆಯ ಕೊಠಡಿಯಲ್ಲಿ ನಡೆಯುತ್ತಿದೆಯೆಂದು ಕಾಳಜಿ ತಂಡದ ಸದಸ್ಯರು ಜಂಟಿ ನಿರ್ದೇಶಕರ ಗಮನಕ್ಕೆ ತಂದಾಗ ಸದರಿ ಜಂಟಿ ನಿರ್ದೇಶಕರು ಕೂಡಲೇ ಕಾರ್ಯ ಪ್ರವೃತ್ತರಾಗಿ ಸುಸಜ್ಜಿತ ಕೊಠಡಿಗಳನ್ನು ಕೊಡಿಸುವಲ್ಲಿ ಸಫಲರಾಗಿದ್ದರು. ಹೀಗಾಗಿ ಸಾಂವಿಧಾನಿಕವಾಗಿ ಬಂದಂತಹ ಅಧಿಕಾರವನ್ನು ಚಲಾಯಿಸುವ ಮೂಲಕ ಕುಂಠಿತವಾಗಿದ್ದ ಕಾಲೇಜಿಗೆ ಮರುಪೂರಣ ಮಾಡಿ ಸುಸಜ್ಜಿತ ಕಟ್ಟಡ ನೀಡುವಲ್ಲಿ ಯಶಸ್ವಿಯಾಗಿದ್ದರಿಂದ ಜಂಟಿ ನಿರ್ದೇಶಕರಿಗೆ ಕಾಳಜಿ ತಂಡದ ಸದಸ್ಯರಿಂದ ತುಂಬು ಹೃದಯದ ಅಭಿನಂದನೆಗಳು.
— ಶಿವಕುಮಾರ್ ಮೇಷ್ಟ್ರುಮನೆ, ನಿರ್ದೇಶಕರು, ಕಾನೂನು ಸಲಹೆಗಾರರು, ಕಾಳಜಿ ಪೌಂಡೇಶನ್, ತುಮಕೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA