ತುಮಕೂರು: ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಆಗಮಿಸದೇ ಬಂಜಾರ ಸಮುದಾಯಕ್ಕೆ ಅವಮಾನ ಮಾಡಿದ್ದಾರೇ ಎಂದು ನಿವೃತ್ತ ನ್ಯಾಯಾಧೀಶರಾದ ಗಣೇಶ್ ನಾಯಕ್ ಆಕ್ರೋಶ ವ್ಯಕ್ತಪಡಿಸಿದರು.
ತುಮಕೂರಿನ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಜಿಲ್ಲಾ ಬಂಜಾರ ಸೇವಾಲಾಲ್ ಸೇವಾ ಸಂಘದಿಂದ ಶನಿವಾರ ನಡೆದ ಪವಾಡ ಪರುಷ ಸಂತಾ ಸೇವಾಲಾಲ್ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
ಸೇವಾಲಾಲ್ ಜಯಂತಿಗೆ ಸರಕಾರ ನೀಡುವ ಭಿಕ್ಷೆಯ ಹಣ ನಮಗೇ ಬೇಡ. ಕಾರ್ಯಕ್ರಮಕ್ಕೆ ಜಿಲ್ಲಾಮಟ್ಟದ ಅಧಿಕಾರಿವರ್ಗ ಮತ್ತು ಜನ ಪ್ರತಿನಿಧಿಗಳು ಗೈರಾಗಿ ಜಯಂತಿಗೆ ಅವಮಾನ ಮಾಡಿದ್ದಾರೆ. ಇಂತಹ ದುಸ್ಥಿತಿಗೆ ತಕ್ಕ ಉತ್ತರವನ್ನ ನಾವು ಶಿಕ್ಷಣದಿಂದ ನೀಡಬೇಕಿದೆ ಎಂದರು.
ತುಮಕೂರು ಉಪವಿಭಾಗ ಅಧಿಕಾರಿ ಗೌರವಗುಪ್ತ ಮಾತನಾಡಿ 18ನೇ ಶತಮಾನದಲ್ಲೇ 300ವರ್ಷದ ಹಿಂದೇ ಮೌಡ್ಯತೆಯ ವಿರುದ್ದ ಹೋರಾಟ ಮಾಡಿದ ಮಹಾನ್ ನಾಯಕ ಶ್ರೀಸಂತ ಸೇವಾಲಾಲ್ ಮಹಾರಾಜರು ನಮ್ಮ ರಾಜ್ಯದವರು ಅನ್ನುವುದೇ ನಮಗೇ ಹೆಮ್ಮೆಯ ವಿಷಯ. ಅವರ ಜೀವನದ ಆದರ್ಶವು ನಮಗೇಲ್ಲರಿಗು ಮಾದರಿ ಆಗಲಿ ಎಂದು ತಿಳಿಸಿದರು.
ತುಮಕೂರು ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷ ನಾರಾಯಣನಾಯ್ಕ ಮಾತನಾಡಿ, ಭಿಕ್ಷೆಬೇಡಿ ಕಟ್ಟಿರುವ ತುಮಕೂರು ನಗರದ ಬಂಜಾರ ಸಮುದಾಯ ಭವನದ ಉದ್ಘಾಟನೆ ಆಗದೇ ಮೂಲೆ ಗುಂಪಾಗಿದೆ. ನಾವು ನಮ್ಮ ಬಂಜಾರ ಸಮುದಾಯ ಒಗ್ಗಟ್ಟಾಗಿದ್ದರೇ ಮಾತ್ರ ನಮ್ಮ ಜನರಿಗೆ ಶಕ್ತಿ ಬರಲಿದೆ. ಈಗಾಗಲೇ ನಮ್ಮ ಸಮುದಾಯವನ್ನ ಕಾಣದ ಕೈಗಳು ತುಳಿಯುವ ಕೆಲಸ ಮಾಡ್ತಿದೆ ಎಂದು ಮನವಿ ಮಾಡಿದರು.
ಇದೇ ಸಂಧರ್ಭದಲ್ಲಿ ಬಂಜಾರ ಸಮಾಜದಲ್ಲಿ ಸಾಧನೆಗೈದ ತುಮಕೂರು ಜಿಲ್ಲೆಯ 10ತಾಲೂಕಿನ ಸಾಧಕರಾದ ಶ್ರೀರಾಮುಲುನಾಯಕ್, ಗಾಯತ್ರಿಬಾಯಿ, ಹರೀಶ್, ಶೇಷನಾಯಕ್, ಸುರೇಶ್, ಶಿವಣ್ಣ, ಭೂಮಿಕಾ, ಎನ್.ಮೂರ್ತಿ, ಪುಟ್ಟಮ್ಮ, ಕುಮಾರ್, ಗಂಗಾಧರ್, ಮತ್ರಾನಾಯಕ್, ಬಸವರಾಜು, ಶಿವಣ್ಣ, ರಮೇಶ್ ಅವರಿಗೆ ತುಮಕೂರು ಜಿಲ್ಲಾಮಟ್ಟದ ಶ್ರೀಸೇವಾಲಾಲ್ ಜಿಲ್ಲಾಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಬಂಜಾರ ಸಂಘದ ಗೌರವಧ್ಯಕ್ಷ ದೇನಾನಾಯಕ್, ಕಾರ್ಯಧ್ಯಕ್ಷ ಕುಮಾರನಾಯಕ್, ಉಪಾಧ್ಯಕ್ಷ ಕುಬೇಂದ್ರ ನಾಯಕ್, ಯತೀಂದ್ರ ನಾಯಕ್, ಪ್ರಧಾನ ಕಾರ್ಯದರ್ಶಿ ಶಂಕರ್.ಬಿ, ಉಪನ್ಯಾಸ ಕೆಇಬಿ ಕೃಷ್ಣನಾಯ್ಕ ಸೇರಿದಂತೆ ಇತರರು ಇದ್ದರು.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4