ಕೊರಟಗೆರೆ: ಕೇಂದ್ರ ಮತ್ತು ರಾಜ್ಯ ಸರಕಾರ ಹೈನುಗಾರಿಕೆಗೆ ಪ್ರಮುಖ ಆಧ್ಯತೆ ನೀಡಿದರೇ ರೈತರ ಆರ್ಥಿಕವಾಗಿ ಅನುಕೂಲ ಆಗಲಿದೆ. ರೈತರಿಗೆ ನೀಡುವ ಹಾಲಿನ ಧರ ಮತ್ತು ಪ್ರೋತ್ಸಾಹ ಧನವನ್ನು ಇನ್ನಷ್ಟು ಹೆಚ್ಚಿಸಿ ಸರಕಾರ ರೈತರ ಪರವಾಗಿ ನಿಲ್ಲಬೇಕಿದೆ ಎಂದು ಶಕುನಿತಿಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷ ವಿಜಯಶಂಕರ್ ಆಗ್ರಹ ಮಾಡಿದರು.
ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಗ್ರಾಪಂ ವ್ಯಾಪ್ತಿಯ ಶಕುನಿತಿಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಮಂಗಳವಾರ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯ ಆಯ್ಕೆಯ ನಂತರ ಮಾತನಾಡಿದರು.
ಶಕುನಿತಿಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನ ಕಟ್ಟಡದ ಅವಶ್ಯಕತೆ ಇದೆ. ಹಾಲು ಉತ್ಪಾದಕ ರೈತರಿಗೆ ಡೈರಿಯಿಂದ ಮತ್ತು ಸರಕಾರದಿಂದ ಬರುವ ಸೌಲಭ್ಯವನ್ನು ನೇರವಾಗಿ ತಲುಪಿಸುವ ಗುರಿ ಇದೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ಸಹಕಾರ ಸಚಿವ ಕೆ.ಎನ್.ರಾಜಣ್ಣ ಸಹಕಾರದಿಂದ ಸಂಘದ ಅಭಿವೃದ್ದಿಗೆ ಶ್ರಮಿಸುತ್ತೇನೆ. ಚುನಾವಣೆಯಲ್ಲಿ ನನ್ನನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ ನಿರ್ದೇಶಕರಿಗೆ ತುಂಬು ಹೃದಯಧ ಧನ್ಯವಾದ ಅರ್ಪಿಸುತ್ತೇನೆ ಎಂದು ತಿಳಿಸಿದರು.
ಸಹಕಾರ ಇಲಾಖೆಯ ಚುನಾವಣಾ ಅಧಿಕಾರಿ ವೆಂಕಟೇಶ್ ಮಾತನಾಡಿ ಶಕುನಿತಿಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ನಾಮಪತ್ರ ಸಲ್ಲಿಸಿ ಸ್ಪರ್ಧಿಸಿದ್ದು ವಿಜಯ್ಶಂಕರ್ಗೆ 7 ಮತ. ಒಂದು ಮತ ಅಂತರದಲ್ಲಿ ವಿಜಯಶಂಕರ್ ಅಧ್ಯಕ್ಷರಾಗಿ ಆಯ್ಕೆಯಾದರೇ ಉಪಾಧ್ಯಕ್ಷರಾಗಿ ಸಕ್ರಮ್ಮ ಅವಿರೋಧವಾಗಿ ಮುಂದಿನ ೫ವರ್ಷದ ಅವಧಿಗೆ ಆಯ್ಕೆ ಆಗಿದ್ದಾರೆ ಎಂದು ತಿಳಿಸಿದರು.
ಶಕುನಿತಿಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ವಿಜಯಶಂಕರ್, ಉಪಾಧ್ಯಕ್ಷರಾಗಿ ಸಕ್ರಮ್ಮ, ನಿರ್ದೇಶಕರಾಗಿ ವೀರಮಲ್ಲಯ್ಯ, ನಾಗರಾಜು, ರಾಜಣ್ಣ, ಶ್ರೀನಿವಾಸ್, ಗೋವಿಂದರಾಜು, ಗಿರಿರಾಜು, ದೊಡ್ಡಯ್ಯ, ರಂಗರಾಜು, ಆನಂದ, ಮಧುಶಂಕರ್, ಗಂಗಮ್ಮ ನೂತನವಾಗಿ 2024 ರಿಂದ 2029ರ ಮುಂದಿನ 5 ವರ್ಷದ ಅವಧಿಗೆ ಆಯ್ಕೆ ಆಗಿದ್ದಾರೆ.
ಚುನಾವಣೆ ವೇಳೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ರಂಗನಾಥ, ಗ್ರಾ.ಪಂ. ಮಾಜಿ ಅಧ್ಯಕ್ಷೆ ವೆಂಕಟಲಕ್ಷ್ಮಮ್ಮ, ಉಪಾಧ್ಯಕ್ಷೆ ಲಕ್ಷ್ಮಿಭಾಯಿ, ಮಾಜಿ ಸದಸ್ಯ ಕಾಳಿಚರಣ್, ಮುಖಂಡರಾದ ರಂಗಧಾಮಯ್ಯ, ಶಿವಣ್ಣ, ಚಲಪತಿನಾಯ್ಕ, ದಾಸಗಿರಿಯಪ್ಪ, ಭದ್ರೇಶ್, ರಂಗಶಾಮಯ್ಯ, ಶಿವಕುಮಾರ, ವೀರಣ್ಣ, ಲಚ್ಚಿರಾಮನಾಯ್ಕ, ಶಂಕರನಾಯ್ಕ ಸೇರಿದಂತೆ ಇತರರು ಇದ್ದರು.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ