ಸರಗೂರು: ತಾಲೂಕಿನ ಎಂಎಂಕೆ ಕಾಲೇಜಿನಲ್ಲಿ ಪರಿಸರ ದಿನಾಚರಣೆಯನ್ನು ಬಹಳ ಅರ್ಥಪೂರ್ಣವಾಗಿ ಶುಕ್ರವಾರ ದಂದು ಆಚರಿಸಲಾಯಿತು.
ಪರಿಸರ ಸಂರಕ್ಷಣೆಯನ್ನು ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ತುಂಬ ಸೊಗೆ ಗ್ರಾಮಕ್ಕೆ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಜಾಥಾ ಮೂಲಕ ಪೋಷಕರಲ್ಲಿ ಜಾಗೃತಿಯನ್ನು ಮಾಡಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಾಗರಹೊಳೆ ವನ್ಯಜೀವಿ ಅರಣ್ಯ ಅಧಿಕಾರಿ ರಶ್ಮಿರವರು ಮಾತನಾಡಿ ಪರಿಸರ ಮತ್ತು ಜೀವವೈವಿಧ್ಯತೆ ಬಗ್ಗೆ ವಿದ್ಯಾರ್ಥಿಗಳಿಗೆ ಸವಿವರವಾಗಿ ವಿವರಿಸಿದರು. ಪರಿಸರದ ಮಾಲಿನ್ಯದಿಂದ ಜೀವವೈವಿಧ್ಯ ನಶಿಸುತ್ತಿದೆ. ಹಾಗೆ ಪರಿಸರದ ನಾಶ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಇದಕ್ಕೆ ಪ್ರಮುಖ ಕಾರಣ ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ತಾಪಮಾನ ಹೆಚ್ಚಾಗುತ್ತಿರುವುದು ಪರಿಸರವನ್ನು ಹಾಳು ಮಾಡುತ್ತಿರುವುದು ಕಾರಣ ಇದರಿಂದ ಮನುಷ್ಯ ಕಾಯಿಲೆಗಳಿಗೆ ಗೊತ್ತಾಗುತ್ತೆನೆ ಹಾಗೂ ಪ್ಲಾಸ್ಟಿಕ್ ನ ಅತಿಯಾದ ಬಳಕೆ ಅದರ ಉತ್ಪಾದನೆ ಉಪಯೋಗ ಎಲ್ಲವೂ ಮನುಷ್ಯನಿಂದಲೇ ಆಗಿದೆ. ಅದನ್ನು ಮರುಬಳಕೆ ಮಾಡದೆ ಪರಿಸರದಲ್ಲೇ ಉಳಿಯುತ್ತಿರುವುದು ಅದು ಭೂಮಿಯಲ್ಲಿ ಕೊಳೆಯದೆ ಹಾಗೂ ಕರಗದ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ಪ್ಲಾಸ್ಟಿಕ್ ನ ಮರುಬಳಕೆ ಆಗಬೇಕಾಗಿದೆ. ಪಶ್ಚಿಮ ಘಟ್ಟದಲ್ಲಿ ಕಂಡುಬರುವ ಬಹಳ ಅಪರೂಪದ ಪಕ್ಷಿ ಆರ್ನ್ ಬಿಲ್ ಬಗ್ಗೆ ವಿವರಿಸಿದರು. ಈ ಪಕ್ಷಿ ಸುಮಾರು 40 ಜಾತಿಯ ಮರಗಳ ಹಣ್ಣಿನ ಬೀಜಗಳನ್ನು ತಿಂದು ಬೀಜಗಳನ್ನು ಪ್ರಸರಣ ಮಾಡುತ್ತಿದೆ. ಇದರಲ್ಲಿ ಗಂಡು ಪಕ್ಷಿಯ ಕೊಂಬಿಗೋಸ್ಕರ ಬೇಟೆಯಾಡಿ ಅದರ ಸಂತತಿಯನ್ನು ಹಾಳು ಮಾಡುತ್ತಿದೆ. ಹೀಗಾಗಿ 40 ಜಾತಿಯ ಮರಗಳ ಬೀಜ ಪ್ರಸರಣ ನಿಂತು ಹೋಗುತ್ತಿದೆ. ಇದರಿಂದ ಮರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಮನುಷ್ಯರು ಯಾರು? ಅರಣ್ಯವನ್ನು ಬೆಳೆಸಿರುವುದಿಲ್ಲ ಇದು ಜೀವವೈವಿಧ್ಯತೆ ಆಗಿರುವುದು ಇದನ್ನ ಅರ್ಥ ಮಾಡಿಕೊಂಡು ವಿದ್ಯಾರ್ಥಿಗಳು ಪರಿಸರವನ್ನು ಉತ್ತಮವಾಗಿ ಕಾಪಾಡಿಕೊಳ್ಳುವುದು ಎಲ್ಲರ ಜವಾಬ್ದಾರಿ ಎಂದು ತಿಳಿಸಿದರು.
ವರದಿ: ಹಾದನೂರು ಚಂದ್ರ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4