ಮಧುಗಿರಿ: ಕುಂಚಿಟಿಗರ ಕುಲಶಾಸ್ರ ಅಧ್ಯಯನವನ್ನು ಯಥಾವತ್ ಜಾರಿ ಮಾಡಿ ಓಬಿಸಿ ಮೀಸಲಾತಿಗೆ ಸೇರಿಸುವಂತೆ ಆಗ್ರಹಿಸಿ ಪಟ್ಟಣದ ತಾಲೂಕು ಆಡಳಿತದ ಸೌಧ ಮುಂಭಾಗ ತಾಲೂಕು ಕುಂಚಿಟಿಗ ಸಮುದಾಯದ ವತಿಯಿಂದ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ಕುಂಚಿಟಿಗರ ಒಕ್ಕೂಟದ ಅಧ್ಯಕ್ಷ ಗಾಂಧಿವಾದಿ ಕಸುವನಹಳ್ಳಿ ರಮೇಶ್ ಮಾತನಾಡಿ, ರಾಜ್ಯದ 18 ಜಿಲ್ಲೆ ಹಾಗೂ 46 ತಾಲೂಕುಗಳಲ್ಲಿ ಕೃಷಿ ಮತ್ತು ಬುಡಕಟ್ಟು ಸಂಪ್ರದಾಯವನ್ನು ಹೊಂದಿರುವ ಕುಂಚಿಟಿಗರನ್ನು ದೇಶಕ್ಕೆ ಸ್ವತಂತ್ರ ಬಂದು 77 ವರ್ಷಗಳು ಕಳೆದರು ಸಹ ಇನ್ನೂ ನಮ್ಮ ಸಮುದಾಯವನ್ನು ಮೀಸಲಾತಿಯಿಂದ ವಂಚಿಸಲಾಗಿದೆ ಎಂದರು.
ಇಂದೂ ನಾವುಗಳು ಕೂಲಿ ಮಾಡುವಂತಹ ಪರಿಸ್ಥಿತಿ ತಲುಪಿದ್ದು. ನಮ್ಮ ಸಮುದಾಯದ ಜನರು ವಾಸ ವಿರುವ ಪ್ರದೇಶಗಳು ನಗರ ಪ್ರದೇಶಗಳಿಂದ ದೂರವಿದ್ದು ಈ ಪ್ರದೇಶಗಳು ಬಯಲು ಸೀಮೆ , ಗುಡ್ಡಗಾಡು ಹಾಗೂ ಮಳೆಯಾಶ್ರಿತ ಪ್ರದೇಶಗಳಾಗಿಂದ ಕೂಡಿದ್ದು ನೀರಾವರಿ ಸೌಲಭ್ಯಗಳಿಂದ ವಂಚಿತವಾಗಿವೆ ಎಂದು ಹೇಳಿದರು.
ರಾಜ್ಯ ಸರಕಾರದ ಪ್ರವರ್ಗ 3 ರಲ್ಲಿ 101 ಜಾತಿಗಳನ್ನು ಕೇಂದ್ರ ಸರಕಾರವು ಓಬಿಸಿಯಲ್ಲಿ ಮೀಸಲಾತಿ ಪಟ್ಟಿಯಲ್ಲಿ ವಕ್ಕಲಿಗ ,ಹಳ್ಳಿಕಾರ , ರೆಡ್ಡಿ ಸಮುದಾಯಗಳನ್ನು ಸೇರಿಸಲಾಗಿದ್ದು ನಮ್ಮ ಕುಂಚಿಟಿಗರನ್ನು ಈ ಪಟ್ಟಿಯಿಂದ ಕೈ ಬಿಡಲಾಗಿದೆ ಎಂದು ಆರೋಪಿಸಿದರು.
ರಾಜ್ಯ ಮಹಾ ಮಂಡಲದ ಮಹಿಳಾ ಅಧ್ಯಕ್ಷೆ ಲಲಿತ ಮಲ್ಲಪ್ಪ ಮಾತನಾಡಿ ಇಂದಿನ ಸರಕಾರಗಳ ಇಚ್ಚಾ ಶಕ್ತಿಯ ಕೊರತೆಯಿಂದ ಹಾಗೂ ನಮ್ಮಗಳ ಪ್ರತಿಭಟನೆ ಮತ್ತು ಹೋರಾಟವು ಮೀಸಲಾತಿಯ ಬಗ್ಗೆ ನಡೆಯುತ್ತಿದ್ದರು ಸಹ ಏನೂ ಪ್ರಯೋಜನವಾಗಿಲ್ಲ ರಾಜಕಾರಣಿಗಳು , ಮುಖಂಡರು ಮೀಸಲಾತಿಯ ಬಗ್ಗೆ ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದು ಗೊಂದಲ ಸೃಷ್ಟಿಸುತ್ತಿದ್ದಾರೆ. ಈ ಹಿಂದಿನ ಮೀಸಲಾತಿ ಪಟ್ಟಿಯನ್ನು ಕೇಂದ್ರಕ್ಕೆ ಕಳುಹಿಸಿದ್ದಾರೆಯೋ ಅಥವಾ ಬಿಟ್ಟಿದ್ದಾರೆಯೋ ಅದೇ ನಮಗೆ ತಿಳಿಯುತ್ತಿಲ್ಲಾ ಇನ್ನಾದರೂ ಸಂಬಂಧಪಟ್ಟವರು ನಮ್ಮ ಸಮುದಾಯದ ಮಕ್ಕಳ ಹಿತಾದೃಷ್ಟಿಯಿಂದಾದರೂ ಕುಂಚಿಟಿಗರಿಗೆ ಓಬಿಸಿ ಪಟ್ಟಿಗೆ ಮೀಸಲಾತಿಯನ್ನು ನೀಡಬೇಕೆಂದು ಆಗ್ರಹಿಸಿದರು.
ಪಿ.ಎನ್ ರಾಜಶೇಖರ್ , ಜಗದೀಶ್ ಕುಮಾರ್ , ಮೋಹನ್ , ದೇವಿ , ರಂಗನಾಥ್ ಕುಂಚಿಟಿಗ , ನರಸಪ್ಪ , ಲಕ್ಷ್ಮಿದೇವಮ್ಮ , ಕೀರ್ತಿ , ಹಿರಿಯೂರು ಶಶಿಕಲಾ , ಚೆನ್ನಲಿಂಗಪ್ಪ , ಸಾವಿತ್ರಮ್ಮ , ರಾಮಚಂದ್ರಪ್ಪ , ಉಮೇಶಣ್ಣ , ಸಿದ್ದಪ್ಪ , ರಾಮಚಂದ್ರಪ್ಪ , ವಕೀಲ ದೇವರಾಜು , ಬಸವರಾಜು , ಕಾಳೇಗೌಡ , ಜಯರಾಮ್.ಜಿ , ವಿ.ಹೆಚ್ ಚಂದ್ರಕಾಂತ್ ಹಾಗೂ ಮತ್ತಿತರರು ಇದ್ದರು.
ವರದಿ: ಅಬಿದ್ ಮಧುಗಿರಿ