ಕೊರಟಗೆರೆ: ಸಿದ್ದರಬೆಟ್ಟ ರೋಟರಿ ಕ್ಲಬ್ ಹಾಗೂ ಫ್ಯೂಚರ್ ಫೌಂಡೇಶನ್ ಇಂಡಿಯಾ ವತಿಯಿಂದ ಸರ್ಕಾರಿ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲಕ್ಕಾಗಿ ಕೊರಟಗೆರೆ ತಾಲೂಕಿನ ಬೋಡ ಬಂಡೇನಹಳ್ಳಿ, ಪಾತಗನಹಳ್ಳಿ, ಅಂಚಿಹಳ್ಳಿ,ಅಕ್ಕಿರಾಂಪುರ ಸರ್ಕಾರಿ ಶಾಲೆಯ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ಸ್, ಲೇಖನಿ, ಇನ್ನಿತರ ವಸ್ತುಗಳ ವಿತರಣೆ ಮಾಡಲಾಯಿತು.
ಇದೇ ವೇಳೆ ಮಾತನಾಡಿದ ರೋಟರಿ ಕ್ಲಬ್ ಸದಸ್ಯ ಬಾಲಾಜಿ ಟೆಕ್ಸ್ಟೈಲ್ ದರ್ಶನ್, ಸಿದ್ದರಬೆಟ್ಟ ರೋಟರಿ ಸಂಸ್ಥೆ ಹಾಗೂ ಫ್ಯೂಚರ್ ಫೌಂಡೇಶನ್ ಇಂಡಿಯಾದ ಮುಖ್ಯ ಉದ್ದೇಶ ಗ್ರಾಮೀಣ ಭಾಗದ ಪ್ರತಿಭೆಗಳು ಉತ್ತಮ ಭವಿಷ್ಯವನ್ನು ಹೊಂದಬೇಕು ಎನ್ನುವುದಷ್ಟೇ ನಮ್ಮ ಉದ್ದೇಶ ಎಂದು ತಿಳಿಸಿದರು.
ಪ್ರತಿ ಸರ್ಕಾರಿ ಶಾಲೆಯ ಎಲ್ಲಾ ಮಕ್ಕಳಿಗೂ ನೋಟ್ ಬುಕ್ಸ್, ಪೆನ್ಸಿಲ್, ಪೆನ್, ಜಾಮಿಟರಿ ಸೇರಿದಂತೆ ಕೆಲವು ಶಾಲೆಗಳಿಗೆ ಲ್ಯಾಬ್ ಟಾಪ್, ಟ್ಯಾಬ್, ಆಟದ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು.
ಸಿದ್ದರಬೆಟ್ಟ ರೋಟರಿ ಕ್ಲಬ್ ಹಾಗೂ ಫ್ಯೂಚರ್ ಫೌಂಡೇಶನ್ ಇಂಡಿಯಾ ಸದಸ್ಯರಾದ ರಾಮು, ರಮೇಶ್, ಮಂಜುನಾಥ್, ಬಾಬು, ಬದ್ರಿ ಸಚಿನ್, ಮಧು, ರಾಜು, ಬಾಲಾಜಿ ಟೆಕ್ಸ್ಟೈಲ್ ಬಾಲಾಜಿ ದರ್ಶನ್, ರೀತು, ಸೇರಿದಂತೆ ಇನ್ನಿತರ ಸದಸ್ಯರು ಸದಾ ಜೊತೆಯಾಗಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಉತ್ತಮ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗಿದ್ದಾರೆ ಎಂದು ಬೋಡಬಂಡೆನಹಳ್ಳಿಯ ಸರ್ಕಾರಿ ಶಾಲಾ ಶಿಕ್ಷಕರು ತಿಳಿಸಿದರು.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA