ಮಧುಗಿರಿ: ಪಟ್ಟಣದ ಶ್ರೀ ಮಲ್ಲೇಶ್ವರ ಸ್ವಾಮಿ ಹಾಗೂ ವೆಂಕಟರಮಣ ಸ್ವಾಮಿ ದೇವಸ್ಥಾನದ ಪಕ್ಕದ ಬಾಲ ಗಂಗಾಧರನಾಥ ತಿಲಕ್ ಮಂಟಪದಲ್ಲಿ ಶ್ರೀ ವಿದ್ಯಾ ಗಣಪತಿ ಮಹಾಮಂಡಳಿ ಮಧುಗಿರಿ ಇವರ ವತಿಯಿಂದ ಗಣೇಶೋತ್ಸವ ನಡೆಯಿತು.
ಸುಮಾರು 9 ದಿನಗಳ ಕಾಲ ವಿಜೃಂಭಣೆಯಿಂದ ನಡೆದ ಗಣೇಶೋತ್ಸವದಲ್ಲಿ ಪ್ರತಿದಿನವೂ ಕೂಡ ಒಂದೊಂದು ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಕೊನೆ ದಿನ ವಿಶೇಷ ಮೆರವಣಿಗೆಯೊಂದಿಗೆ ಶ್ರೀ ವಿದ್ಯ ಗಣಪತಿ ಮಹಾಮಂಡಳಿ ಸಮಿತಿ ಅಧ್ಯಕ್ಷರು ಉಪಾಧ್ಯಕ್ಷರು ಎಲ್ಲಾ ಪದಾಧಿಕಾರಿಗಳು ನಗರದ ಯುವಕರು ವಿನಾಯಕನನ್ನು ಪೂಜಿಸಿ ನಂತರ, ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಹಾಗೂ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿ ರಾಹುಲ್ ಕುಮಾರ್ ರವರಿಗೆ ಮಧುಗಿರಿ ನಗರದ ಜನತೆ ಹಾಗೂ ಪಕ್ಕದೂರಿನ ಗ್ರಾಮಸ್ಥರು ಸ್ವಾಗತಿಸಿ ವಿಶೇಷವಾಗಿ ಸನ್ಮಾನಿಸಲಾಯಿತು.
ಅದ್ದೂರಿ ಮೆರವಣಿಗೆಯಲ್ಲಿ ನಾಸಿಕ್ ಡೋಲು, ಬೊಂಬೆ ಕುಣಿತ ಸದ್ದಿಗೆ ಮಕ್ಕಳು,ಯುವಕರು ಹಾಗೂ ಯುವತಿಯರು ಸಂಭ್ರಮದಿಂದ ಕುಣಿದು ಕುಪ್ಪಳಿಸಿದರು. ತದನಂತರ ಒಕ್ಕಲಿಗರ ಭವನ ನೀರಿನ ತಟ್ಟಿಯಲ್ಲಿ ಗಣೇಶನನ್ನು ಶ್ರದ್ದಾ ಭಕ್ತಿಯಿಂದ ವಿಸರ್ಜನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ತಿಮರಾಜು ಧಾರ್ಮಿಕ ಮುಖಂಡರಾದ ಎಂ.ಜಿ. ಶ್ರೀನಿವಾಸ್ ಮೂರ್ತಿ, ಗೋವಿಂದರಾಜು, ಯತೀಶ್ ಬಾಬು, ಆರ್.ಎಲ್. ಎಸ್. ರಮೇಶ್ , ಧನಪಾಲ್ ಶೆಟ್ಟಿ, ಡೋಲಿ ಬಾಬು, ಶ್ರೀನಿವಾಸ್, ಮಂಜುನಾಥ್ ಆಚಾರ್ ಲಾಲಾ ಪೇಟೆ, ಮಂಜುನಾಥ್, ನಾರಾಯಣ್, ಗಂಗರಾಜು, ಗೋಪಾಲ್, ರಘು ಯಾದವ್, ರಾಘವೇಂದ್ರ, ಎಸ್.ವಿ.ಎಲ್.ಶ್ರೀಧರ್, ಪ್ರಧಾನ ಅರ್ಚಕ ನಟರಾಜ್ ಹಾಜರಿದ್ದರು.
ವರದಿ: ಅಬಿದ್, ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz