ಮಧುಗಿರಿ: ಗಾಂಧಿ ಜಯಂತಿ ಹಬ್ಬದ ಪ್ರಯುಕ್ತವಾಗಿ ಮಧುಗಿರಿ ದಂಡಿ ಮಾರಮ್ಮನ ಸನ್ನಿಧಿಯ ಸುತ್ತಮುತ್ತ ಬಿಜೆಪಿ ಜಿಲ್ಲಾ ಮತ್ತು ತಾಲೂಕು ಯುವ ಮೋರ್ಚಾ ಬಳಗದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ದೇವಸ್ಥಾನದ ಆವರಣದಲ್ಲಿ ಮತ್ತು ಸುತ್ತಮುತ್ತ ಕಸವನ್ನು ಹಾಕದೆ, ತಾಯಿ ದಂಡಿ ಮಾರಮ್ಮನ ಸನ್ನಿಧಿಯನ್ನು ಸಾರ್ವಜನಿಕರು ಯಾವಾಗಲೂ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಬಿಜೆಪಿ ಯುವ ಮೋರ್ಚಾ ಶಿವಕುಮಾರ್ ಸ್ವಾಮಿ ಹೇಳಿದರು.
15 ದಿನಗಳಿಂದ ಆರೋಗ್ಯ ಕ್ಷೇಮ ರಕ್ತದಾನ ಇಂದು ಸ್ವಚ್ಛತಾ ಕಾರ್ಯಕ್ರಮ ಮಾಡಿಕೊಂಡು ಬರುತ್ತಿದ್ದೇವೆ. ಎಲ್ಲರಿಗೂ ಗಾಂಧಿ ಜಯಂತಿ ಹಾಗೂ ಶಾಸ್ತ್ರಿ ಜಯಂತಿಯ ಶುಭಾಶಯಗಳು ಎಂದು ಜಿಲ್ಲಾ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಮಾಲಿ ಭರತ್ ಕೋರಿದರು.
ಈ ಸಂದರ್ಭದಲ್ಲಿ ಮಾಲಿ ಭರತ್ ಜಿಲ್ಲಾಧ್ಯಕ್ಷರು, ಶಿವಕುಮಾರ ಸ್ವಾಮಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ರುದ್ರೇಶ್ ಟಿ.ಎನ್.ರಾಜ್ಯ ಕಾರ್ಯಕಾರಿ ಸದಸ್ಯರು, ಮಂಡಲ ಅಧ್ಯಕ್ಷರು ಕಾರ್ತಿಕ ಆರಾಧ್ಯ, ಕೊರಟಗೆರೆ ಮಂಡಲ ಅಧ್ಯಕ್ಷ ಅರುಣ್ ಕೆ.ಎಸ್., ಪ್ರಧಾನ ಕಾರ್ಯದರ್ಶಿ ದೀಕ್ಷಿತ್, ತೇಜಸ್ ಗೌಡ ಸುರೇಶ್, ಲಕ್ಷ್ಮಿಪತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಣ್ಣ ಹಾಗೂ ಜಿಲ್ಲಾ ಮತ್ತು ತಾಲೂಕು ಮಂಡಲ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ದೊಡ್ಡೇರಿ ಮಹಾಲಿಂಗಯ್ಯ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy