ಕೊರಟಗೆರೆ ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಬೂದಗವಿ (ಸಿದ್ದರಬೆಟ್ಟ) ಗ್ರಾಮದ ಶ್ರೀ ಸಿದ್ದೇಶ್ವರ ಸ್ವಾಮಿ ದೇವಸ್ಥಾನದ ಬಳಿ ಮೇಕೆ ಆಹಾರ ಹುಡುಕಿಕೊಂಡು ಹೋದ ಸಂದರ್ಭದಲ್ಲಿ ಕೈಗೆಟಕುವ ರೀತಿಯಲ್ಲಿ ವಿದ್ಯುತ್ ತಂತಿಯು ನೆಲ ಭಾಗಕ್ಕೆ ಬಾಗಿದ್ದು ಮೇಕೆಗೆ ತಗಲಿ ಮೇಕೆ ಸಾವನಪ್ಪಿನ ಘಟನೆ ನಡೆದಿದೆ.
ಶ್ರೀ ಕ್ಷೇತ್ರದ ದೇವಸ್ಥಾನವು ಮುಜರಾಯಿ ಇಲಾಖೆಗೆ ಸೇರಿದ್ದು ಶ್ರೀ ಸಿದ್ದೇಶ್ವರ ಸ್ವಾಮಿಯ ದೇವಸ್ಥಾನದ ಅವರಣದಲ್ಲಿ ಇರುವ ಐ ಮಸ್ಕ್ ಲೈಟ್ ಕಂಬದಿಂದ ಮೋಟರ್ ಪಂಪಿಗೆ ವೈರ್ ಅಳವಡಿಸಿಕೊಂಡಿದ್ದು, ಯಾವುದೇ ಮಂಜಾಗ್ರತೆ ವಹಿಸದ ಕಾರಣ ಈ ದುರ್ಘಟನೆ ಕಾರಣವಾಗಿದೆ.
ಈ ಹಿಂದೆಯೂ ಸಹ ಇಂತಹ ಘಟನೆಗಳು ನಡೆದಿರುವುದಾಗಿ ಸ್ಥಳೀಯರು ಆರೋಪ ಮಾಡಿದ್ದಾರೆ. ಹಿಂದೆ ಹಲವು ಬಾರಿ ಅಲ್ಲಿನ ಜನುವಾರುಗಳಿಗೆ ವಿದ್ಯುತ್ ತಂತಿ ಸ್ಪರ್ಶಿಸಿ ಜಾನುವಾರುಗಳು ಪಾರಾಗಿರುವ ಘಟನೆ ಗೊತ್ತಿದ್ದರೂ ಸಹ ಯಾವುದೇ ಕ್ರಮ ವಹಿಸದೆ ಅಲ್ಲಿನ ಆದಾಯ ಕಷ್ಟ ಸೀಮಿತ ಎಂಬುವಂತೆ ವರ್ತಿಸುತ್ತಾರೆ ಎಂದು ಅಲ್ಲಿನ ಗ್ರಾಮಸ್ಥರು ಮಾತಗಿದೆ.
ಶನಿವಾರ ಸಂಜೆ ನಡೆದ ಘಟನೆಯ ವಿಚಾರವಾಗಿ ದೇವಸ್ಥಾನದ ಅಧಿಕಾರಿಯದ ಸೌಭಾಗ್ಯಮ್ಮಗೆ ಅಲ್ಲಿನ ಸಾರ್ವಜನಿಕರು ದೂರವಾಣಿ ಕರೆ ಮಾಡಿ ವಿಚಾರ ತಿಳಿಸಿದಾಗ ನಮಗೂ ಆ ಘಟನೆಗೂ ಸಂಬಂಧವಿಲ್ಲವೆಂದು ಫೋನ್ ಕಟ್ ಮಾಡಿ ಅಸಡ್ಡೆ ತೋರುತ್ತಿದ್ದರೆಂದು ನೊಂದ ರೈತ ತನ್ನ ಅಳಲನ್ನು ವ್ಯಕ್ತಪಡಿಸಿದ್ದಾರೆ..
ಶ್ರೀ ಕ್ಷೇತ್ರದ ಪರೂಪತ್ತೆದಾರ ಯಾರೆಂದು ಇಲ್ಲಿಯ ವರೆಗೂ ಸ್ಥಳೀಯರಿಗೆ ಭಕ್ತಧಿಗಳಿಗೆ ಗೊತ್ತಿಲ್ಲ ಹೆಸರಿಗೆ ಮಾತ್ರ ಪರು ಪತ್ತೆದಾರರ ಹುದ್ದೆ ಇದೆ ಅವರ ಪತ್ತೆಯೇ ಇಲ್ಲವೆಂದು ಭಕ್ತಾಧಿಗಳು ತಿಳಿಸಿದ್ದಾರೆ.
ಶ್ರಾವಣ ಮಾಸದ ಅಂಗವಾಗಿ ಶ್ರೀ ಕ್ಷೇತ್ರ ಸಿದ್ದರಬೆಟ್ಟಕ್ಕೆ ಭಕ್ತಾದಿಗಳು ಬರುತ್ತಿದ್ದು ಭಕ್ತಾದಿಗಳಿಗೆ ಯಾವುದೇ ರೀತಿಯ ಅನಾಹುತ ಮತ್ತೆ ನಡೆಯದಂತೆ ಮುಂಜಾಗ್ರತೆ ವಹಿಸಬೇಕೆಂದು ತಾಲ್ಲೂಕು ಆಡಳಿತ ಹಾಗೂ ಮುಜರಾಯಿ ಇಲಾಖೆಯ ಮೇಲಾಧಿಕಾರಿಗಳು ಗಮನ ಹರಿಸಿ ಬೇಜವಾಬ್ದಾರಿ ತನದಿಂದ ವರ್ತಿಸುವ ಇಂತಹ ಅಧಿಕಾರಿಯನ್ನು ಬೇರೊಂದು ಕಡೆ ವರ್ಗಾವಣೆ ಮಾಡಬೇಕೆಂದು ಸ್ಥಳೀಯರ ಒತ್ತಾಯವಾಗಿದೆ..
ಇನ್ನಾದರೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕ್ಷೇತ್ರದ ನೂರಾರು ಜ್ವಲಂತ ಸಮಸ್ಯೆಗಳಿಗೆ ಮುಕ್ತಿ ಕೊಟ್ಟು ಕ್ಷೇತ್ರದ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಮತ್ತು ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟ ಮೇಕೆಯ ಮಾಲೀಕನಿಗೆ ಸೂಕ್ತ ಪರಿಹಾರ ಒದಗಿಸಿ ಕೊಡಬೇಕೆಂದು ನಮ್ಮ ತುಮಕೂರು ವಾಹಿನಿ ಮನವಿ ಮಾಡುತ್ತದೆ…
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ.