ಪಾವಗಡ: ತಾಲ್ಲೂಕಿನ ನಿಡಗಲ್ಲು ಹೋಬಳಿಯ ಸಿ.ಕೆ.ಪುರ ಗ್ರಾಮದ ಹನುಮಂತ ದೇವರ ಕೆರೆಯು ಕಳೆದ 18 ವರ್ಷಗಳಲ್ಲಿ 2 ನೇ ಬಾರಿ ಕೋಡಿ ಹರಿಯುತ್ತಿದ್ದು, ಶಾಸಕರಾದ ವೆಂಕಟರಮಣಪ್ಪ ಹಾಗೂ ಸಿ.ಎನ್.ಆನಂದರಾವ್ ಗಂಗಾಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.
ನಂತರ ಮಾತನಾಡಿದ ಅವರು, ಈ ಕೆರೆ ಕೊಡಿ ಬಿದ್ದು ಸುಮಾರು18 ವರ್ಷಗಳಾಗಿದೆ. ಈ ಊರಿನ ಗ್ರಾಮಸ್ಥರಿಗೆ ಎಲ್ಲರಿಗೂ ಒಳ್ಳೆಯದಾಗಲಿ ರೈತರು ಜಮೀನುಗಳಲ್ಲಿ ಎಲ್ಲರೂ ಬೆಳೆ ಬೆಳೆಯಲು ಇಂದು ನಾನು ಶುಭ ಹಾರೈಸುತ್ತೇನೆ ಎಂದು ತಿಳಿಸಿದರು.
ಶಾಸಕರಾದ ವೆಂಕಟರಮಣಪ್ಪನವರು ಮಾತನಾಡಿ, 2018ರಲ್ಲಿ ಕೆರೆ ಕೋಡಿ ಬಿದ್ದಿದ್ದು, ಆಗ ಬಂದು ನಾನು ಈ ಕೆರೆಗೆ ಬಾಗಿನ ಅರ್ಪಿಸಿದ್ದೆ. ಇಂದು ಈ ಕೆರೆ ಕೊಡಿ ಬಿದ್ದಿರುವುದರಿಂದ ನನಗೆ ಸಂತೋಷವಾಗಿದೆ. ಸಿ.ಕೆ.ಪುರ ಕೆರೆ, ಬ್ಯಾಡನೂರ ಕೆರೆ, ಇವೆಲ್ಲ ನೀರು ಸೇರಿ ಪಳವಳ್ಳಿ ಕೆರೆಗೆ ನೀರು ಹೋದರೆ, ಆ ಕೆರೆ ಸಹ ಕೋಡಿ ಬೀಳುತ್ತದೆ. ತುಂಬಿದ ಕೆರೆ ಕಟ್ಟೆಗಳಿಗೆ , ಕೃತಜ್ಞತಾ ಅರ್ಪಣಾ ಮನೋಭಾವದಿಂದ ಪೂಜೆ ಸಲ್ಲಿಸುವುದು ನಮ್ಮ ಭಾರತೀಯ ಸಂಸ್ಕೃತಿಯಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ . ಹೆಚ್. ವಿ.ವೆಂಕಟೇಶ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು. ಶಂಕರ್ ರೆಡ್ಡಿ ಗುತ್ತಿಗೆದಾರ. ಯರ್ರಪ್ಪ ಕೆಇಬಿ. ಗೋಪಾಲ್ ರಾವ್. ಅಜಯ್ ನಾಗೇಶ್. ಬಿಂದು ಮಾಧವ ರಾವ್. ನಾಗರಾಜ್ ರಾವ್. ಗ್ರಾಮ ಪಂಚಾಯತಿ ಅಧ್ಯಕ್ಷರು ಲಕ್ಷ್ಮಮ್ಮ ಈರಣ್ಣ. ಎಪಿಎಂಸಿ ಮಾಜಿ ಉಪಾಧ್ಯಕ್ಷರು ಶಿವಮೂರ್ತಿ . ಪಾಂಡುರಂಗಪ್ಪ. ಶಿವಣ್ಣ ದೇವರಹಟ್ಟಿ. ಊರಿನ ಗ್ರಾಮಸ್ಥರು ಹಾಗೂ ಅಕ್ಕ ಪಕ್ಕದ ಗ್ರಾಮಸ್ಥರು ಭಾಗವಹಿಸಿದ್ದರು.
ವರದಿ: ರಾಮಪ್ಪ. ಸಿ.ಕೆ.ಪುರ, ಪಾವಗಡ ತಾಲ್ಲೂಕು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz