ಭಾರೀ ಮಳೆಗೆ ನೇಪಾಳದಲ್ಲಿ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಮತ್ತು ಭೂ ಕುಸಿತದ ಪರಿಣಾಮ 59 ಮಂದಿ ಬಲಿಯಾಗಿದ್ದಾರೆ. ಒಟ್ಟು 59 ಸಾವು ಸಂಭವಿಸಿದ್ದು, ಈ ಪೈಕಿ ಕಠ್ಮಂಡು ಕಣಿವೆಯಲ್ಲಿಯೇ 34 ಸಾವುಗಳು ಸಂಭವಿಸಿದೆ.
ಘಟನೆಯಲ್ಲಿ 36 ಜನರು ಗಾಯಗೊಂಡಿದ್ದಾರೆ, ಕಠ್ಮಂಡುವಿನಲ್ಲಿ 16 ಜನರು ಸೇರಿದಂತೆ ದೇಶಾದ್ಯಂತ 44 ಜನರು ಕಣ್ಮರೆಯಾಗಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಿಂದ 1,000ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ.
ದೇಶಾದ್ಯಂತ 44 ಸ್ಥಳಗಳಲ್ಲಿ ಹೆದ್ದಾರಿಗಳಲ್ಲಿ ಸಂಪರ್ಕ ಸ್ಥಗಿತಗೊಂಡಿದೆ. ಕಠ್ಮಂಡುವಿನಲ್ಲಿ, ಮುಖ್ಯ ಪ್ರಸರಣ ಮಾರ್ಗಕ್ಕೆ ಹಾನಿಯಾದ ಕಾರಣ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿತ್ತು. ಆದರೆ ಬಳಿಕ ದುರಸ್ತಿಗೊಳಿಸಿ, ಸಂಜೆಯ ವೇಳೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296