ಪಾವಗಡ: ಪಾವಗಡ ಪಟ್ಟಣದ ಅಪ್ ಬಂಡೆ ಬಳಿ ಇಂದು ಹೆಲ್ಪ್ ಸೊಸೈಟಿ ವತಿಯಿಂದ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನವನ್ನು ಆಚರಿಸಲಾಯಿತು.
ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್ ಸ್ಥಳೀಯ ಬಾಲಕರ ಪೋಷಕರೊಂದಿಗೆ ವಿಚಾರ ವಿನಮಯ ನಡೆಸಿ, ಮಕ್ಜಳನ್ನು ತಪ್ಪದೆ ಶಾಲೆಗೆ ಕಳುಹಿಸಿ ವಿದ್ಯಾವಂತರನ್ನಾಗಿ ಮಾಡುವಂತೆ ವಿನಂತಿಸಿದರು.
ಬಾಲ ಮಕ್ಕಳನ್ನು ಯಾವುದೇ ಕಾರಣಕ್ಕೂ ದುಡಿಯಲು ಪ್ರೇರಪಿಸಬೇಡಿ, ಅಂತಹ ಕೆಟ್ಟ ದುಸ್ಸಾಹಕ್ಜೆ ಕೈ ಹಾಕಿದ್ದಲ್ಲಿ, ಕಾನೂನು ರೀತ್ಯ ಅಪರಾಧವಾಗುತ್ತದೆ ಎಂದು ಅವರು ಸ್ಥಳೀಯ ನಾಗರಿಕರಿಗೆ ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಮಕ್ಜಳೊಂದಿಗೆ ಸಿಹಿ ಹಂಚಿ ಆತ್ಮೀಯತೆಯೊಂದಿಗೆ ಬಾಲ ಕಾರ್ಮಿಕ ವಿರೋಧಿ ದಿನ ವನ್ನು ಆಚರಿಸಿದರು. ಈ ವೇಳೆ ಸಾಗರ್,ವೀರ, ಗೌತಮ್, ಬಾಬಾ, ಸಾಯಿ ಕುಮಾರ್, ಮೋಹನ್, ಇದ್ದರು.
ವರದಿ: ರಾಮಪ್ಪ ಸಿ.ಕೆ.ಪುರ, ಪಾವಗಡ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz