nammatumakuru

    Subscribe to Updates

    Get the latest creative news from FooBar about art, design and business.

    What's Hot

    ದಕ್ಷಿಣ ಕರ್ನಾಟಕದ ಏಕೈಕ ಚಿತ್ರಕಲಾ ಕಾಲೇಜನ್ನು ಉಳಿಸಿ ಬೆಳೆಸಿದವರು ಸಿ.ಸಿ.ಬಾರಕೇರ:  ಡಾ.ಕರಿಯಣ್ಣ ಬಿ.

    July 1, 2025

    ಎಷ್ಟು ಹಣ ಕೊಟ್ಟರೂ ಆ ಒಂದು ಕೆಲಸ ಮಾಡುವುದಿಲ್ಲ ಎಂದ ರಶ್ಮಿಕಾ ಮಂದಣ್ಣ!

    July 1, 2025

    ಬೀದರ್ | ಭ್ರಷ್ಟಾಚಾರ ಆರೋಪ; ದ್ವಿತೀಯ ದರ್ಜೆ ಸಹಾಯಕ ಅಮಾನತು

    July 1, 2025
    Facebook Twitter Instagram
    ಟ್ರೆಂಡಿಂಗ್
    • ದಕ್ಷಿಣ ಕರ್ನಾಟಕದ ಏಕೈಕ ಚಿತ್ರಕಲಾ ಕಾಲೇಜನ್ನು ಉಳಿಸಿ ಬೆಳೆಸಿದವರು ಸಿ.ಸಿ.ಬಾರಕೇರ:  ಡಾ.ಕರಿಯಣ್ಣ ಬಿ.
    • ಎಷ್ಟು ಹಣ ಕೊಟ್ಟರೂ ಆ ಒಂದು ಕೆಲಸ ಮಾಡುವುದಿಲ್ಲ ಎಂದ ರಶ್ಮಿಕಾ ಮಂದಣ್ಣ!
    • ಬೀದರ್ | ಭ್ರಷ್ಟಾಚಾರ ಆರೋಪ; ದ್ವಿತೀಯ ದರ್ಜೆ ಸಹಾಯಕ ಅಮಾನತು
    • ತುಮಕೂರು: ವಿವಿಧ ಪದವಿ ಕೋರ್ಸ್ ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
    • ಜುಲೈ 1:  ರಾಷ್ಟ್ರೀಯ ಪತ್ರಿಕಾ ದಿನ: ಪತ್ರಿಕಾ ದಿನಾಚರಣೆಯ ಶುಭಾಶಯಗಳು
    • ಮನೆ ಮುಂದೆ ಕಸ ಹಾಕಿದ್ದನ್ನು ಪ್ರಶ್ನಿಸಿದ್ದಕ್ಕೆ ಕಂಬಕ್ಕೆ ಕಟ್ಟಿಹಾಕಿ ಮಹಿಳೆಗೆ ಹಲ್ಲೆ!
    • ಬಿಗ್ ಬಾಸ್ ಸೀಸನ್ 12ಕ್ಕೂ ಕಿಚ್ಚ ಸುದೀಪ್ ನಿರೂಪಣೆ ಫಿಕ್ಸ್!
    • ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ: 8 ಕಾರ್ಮಿಕರು ಸಾವು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಭಾರತೀಯ ಜೈನ್ ಮಿಲನ್ ವಲಯ — 8ರ  ಜಿನ ಭಜನಾ ಸೀಸನ್– 8 ಸಂಪನ್ನ
    ಜಿಲ್ಲಾ ಸುದ್ದಿ January 7, 2025

    ಭಾರತೀಯ ಜೈನ್ ಮಿಲನ್ ವಲಯ — 8ರ  ಜಿನ ಭಜನಾ ಸೀಸನ್– 8 ಸಂಪನ್ನ

    By adminJanuary 7, 2025No Comments2 Mins Read
    jain

    ಭಾರತೀಯ ಜೈನ್ ಮಿಲನ್ ವಲಯ –8 ರ ಜಿನ ಭಜನಾ ಮಾಲಿಕೆ ಬೆಂಗಳೂರಿನಲ್ಲಿ ವೈಭವಯುತವಾಗಿ ನಡೆಯುವುದರ ಮೂಲಕ ಸಂಪನ್ನಗೊಂಡಿತು.

    ಭಾರತೀಯ  ಜೈನ್ ಮಿಲನ್ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಧರ್ಮಸ್ಥಳ ಸುರೇಂದ್ರ ಕುಮಾರ್ ಹಾಗೂ ಉಪಾಧ್ಯಕ್ಷರು ಹಾಗೂ ಬೆಂಗಳೂರು ತ್ಯಾಗಿ ಸೇವಾ ಸಮಿತಿ ಅಧ್ಯಕ್ಷರಾದ ಅನಿತಾ ಸುರೇಂದ್ರ ಕುಮಾರ್ ಅವರ ಪರಿಕಲ್ಪನೆಯ ಈ ಜೈನ ಭಜನೆ , ಎರಡು ದಿನಗಳ ಕಾಲ ಸೆಮಿ ಫೈನಲ್ ಹಾಗೂ ಫೈನಲ್ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದವು .


    Provided by

    ಕಾರ್ಯಕ್ರಮದಲ್ಲಿ ಭಾರತೀಯ ಜೈನ ಮಿಲನ್ ರಾಷ್ಟ್ರೀಯ ಕಾರ್ಯ ಅಧ್ಯಕ್ಷರಾದ ಧರ್ಮಸ್ಥಳ ಸುರೇಂದ್ರ ಕುಮಾರ್ ಮಾತನಾಡಿ,  ಜಿನ ಭಜನೆ ಭಾರತೀಯ ಸಂಸ್ಕೃತಿ– ಸಂಸ್ಕಾರದ ಮೂಲಬೇರಾಗಿದ್ದು, ಇದನ್ನು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ  ಕೊಂಡೊಯ್ಯಬೇಕಿದೆ  ಇದು  ಸಾಹಸಮಯ ಕೆಲಸವಾಗಿದ್ದು, ಇದಕ್ಕೆ  ಭರದ ಸಿದ್ಧತೆ ನಡೆಸುವುದು, ತೀರ್ಪು ನೀಡುವುದು ಕಷ್ಟದ ಕೆಲಸವೇ ಆಗಿದೆ ಎಂದರು.

    ಭಾರತೀಯ  ಜೈ ನ್ ಮಿಲನ್ ವಲಯ –8 ರ ರಾಷ್ಟ್ರೀಯ ಉಪಾಧ್ಯಕ್ಷರಾದ  ಅನಿತಾ ಸುರೇಂದ್ರ ಕುಮಾರ್ ಮಾತನಾಡಿ, ಜಿನ ಭಜನೆ ಪರಂಪರೆ ಉಳಿಸುವ ಕೆಲಸವಾಗುತ್ತಿದ್ದು, ಇದೊಂದು ಪುರಾತನ ಸಂಸ್ಕೃತಿಯಾಗಿದೆ .ವರ್ಷದಿಂದ ವರ್ಷಕ್ಕೆ ಸುಧಾರಣೆ ಕಾಣುತ್ತಿದ್ದು, ಇಲ್ಲಿ ಎಲ್ಲರನ್ನು  ಪ್ರೋತ್ಸಾ ಹಿಸಲಾಗುತ್ತಿದೆ ಎಂದರು.

    ಚಲನಚಿತ್ರ ನಟಿ ಶ್ರುತಿ ಮಾತನಾಡಿ, ಮನೋರಂಜನೆಗೆ ಒತ್ತುಕೊಟ್ಟ, ಜಿನ ಭಜನ ಪರಂಪರೆಯ ಕಲ್ಪನೆ ಅಮೋಘವಾದದ್ದು, ಸಂಗೀತದಿಂದ ನಮ್ಮ ಮನೆತನ ಬದುಕು ಕಟ್ಟಿಕೊಳ್ಳಲು ಕಾರಣವಾಯಿತು. ಕಳೆದು 8 ವರ್ಷಗಳಿಂದ ಈ ಜಿನ ಭಜನಾ ಕಾರ್ಯಕ್ರಮ ನಡೆದದ್ದು  ಅವಿಸ್ಮರಣೆಯ ಎಂದರು.

    ಭಜನೆ ಇದ್ದರೆ ವಿಭಜನೆ ಅಸಾಧ್ಯ ಇದರಿಂದ ಸಂಸ್ಕಾರ ಪರಂಪರೆ ಉಳಿಯಲು ಸಾಧ್ಯ, ಭಾರತೀಯ ಸಂಸ್ಕಾರ ಪರಂಪರೆಯಲ್ಲಿ ಮೌಲ್ಯಗಳು ಬೆರೆತಿದ್ದು ಇದು ವಿಶ್ವಮಾನ್ಯ ವಾಗಿದೆ ಎಂದರು.

    ಖ್ಯಾತ ಹಿನ್ನೆಲೆ ಗಾಯಕಿ ಸಂಗೀತ ಕುಟ್ಟಿ ರವರ ಸಂಗೀತ ರಸ ದೌತಣ ,ನೆರೆದಿದ್ದ ಜನರ ಮನಸೂರೆಗೊಂಡಿತು. ನೃತ್ಯ ಪ್ರದರ್ಶನ ದೊಂದಿಗೆ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.

    ” ಸ್ವಯಂ ಭೂ ಸ್ತೋತ್ರ”  ರೂಪಕ ಪ್ರದರ್ಶನದ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿತು.  ಇದೇ ಸಂದರ್ಭದಲ್ಲಿ ಅನಂತ ಕುಮಾರಿ ಬರೆದು ಜಿನ ಭಜನಾ ಪುಸ್ತಕ ಬಿಡುಗಡೆಗೊಳಿಸಲಾಯಿತು.

    ಚಿತ್ರ ಕಲಾವಿದ  ಚಿತ್ತ ಎಂ. ಜಿನೇಂದ್ರರವರು ಸಿದ್ದಪಡಿಸಿದ್ದ ಕಾರ್ಯಕ್ರಮದ ವೇದಿಕೆ ಹೆಚ್ಚು ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ರಾಜ್ಯದ ಏಳು ಜೈನ್ ಮಿಲನ್ ವಲಯಗಳ ಅಧ್ಯಕ್ಷರು, ಪದಾಧಿಕಾರಿಗಳು, ತಂಡದ ಸದಸ್ಯರುಗಳು, ಕಲಾವಿದರು ಭಾಗವಹಿಸಿದ್ದರು.

    ಕಾರ್ಯಕ್ರಮದಲ್ಲಿ ಜಿನಭಜನ ಕೇಂದ್ರ ಸಮಿತಿಯ ಶ್ರದ್ಧಾ ಅಮಿತ್, ಸೋನಿ ವರ್ಮಾ, ಪ್ರೇಮ ಸುಖಾನಂದ, ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಕಾರ್ಯಧ್ಯಕ್ಷರಾದ ಪದ್ಮಪ್ರಕಾಶ್, ಉಪಾಧ್ಯಕ್ಷರಾದ ಡಾ. ನೀರಜಾ ನಾಗೇಂದ್ರ ಕುಮಾರ್,  ಜೈನ್ ಮಿಲನ್ ವಲಯ ಮುಖಂಡರುಗಳಾದ ವಿಲಾಸ್ ಪಾಸಣ್ಣನವರ್,   ಡಾ.ಭರತೇಶ್ ಜಗಶೆಟ್ಟಿ, ಎಂ.ರತ್ನರಾಜು, ಪಿ.ಅಜಿತ್ ಕುಮಾರ್, ಶ್ಯಾಮಲಾ ಧರಣಿಂದ್ರಯ್ಯ,   ಯುವರಾಜ್ ಭಂಡಾರಿ, ಶೀಲಾ ಅನಂತರಾಜು, ಸೋಮಶೇಖರ ಶೆಟ್ಟಿ,  ಕೆ.ಪ್ರಸನ್ನ ಕುಮಾರ್ , ಉದ್ಯಮಿ ಹರೀಶ್ ಜೈನ್, ಸುದರ್ಶನ್ ಜೈನ್ ,ಸುಭಾಷ್ ಚಂದ್ರ ಜೈನ್,  ವಿ .ಜೀವoದರ್ ಕುಮಾರ್, ಪ್ರಶಾಂತ್ ಉಪಾಧ್ಯಾಯ, ಅಶೋಕ್ ಬಾಳೆಕಾಯಿ, ಎಚ್‌.ಪಿ. ಸುಮತಿ ಕುಮಾರ್,  ಭರತರಾಜ ಹಚಾರಿ ,ಯಶೋಧರ ಹೆಗಡೆ , ಪೂರ್ಣಿಮ ಅಶೋಕ್ ಕುಮಾರ್,  ವಾಸುದೇವ್, ಮಹಾವೀರ್ ಶಹಾಪುರ್, ಸಿ.ಎಸ್ .ನಾಗರಾಜ್, ಜಿ.ಪಿ.ಚಂದ್ರು ಪ್ರಕಾಶ್,  ಎಂ.ಧೀರಜಕುಮಾರ್ , ಎ.ಪಿ. ಕುಮಾರ್,  ದೀಪಾಂಜಲಿ  ಗೌರಜ್, ಸುಖಾ ನಂದ, ಜಿನೇಂದ್ರ ಹೊಸ ಮನಿ, ಸೇರಿದಂತೆ   ಜಿನ ಭಜನಾ ಕೇಂದ್ರ ಸಮಿತಿಯ ಪದಾಧಿಕಾರಿಗಳು  ಪದ್ಮಾವತಿ ಬಸ್ತಿ, ವಿಜಯ್ ಕುಮಾರ್, ಜಿನೇಂದ್ರಪ್ಪ, ಅಖಿಲ ಪ್ರಕಾಶ್, ಪ್ರತಿಭಾ  ಮಹಿಂದ್ರ, ಅನಂತಕುಮಾರಿ ,  ವಜ್ರ ಕುಮಾರ್ ಜೈನ್.    ಬಿ.ಟಿ.ಸುದರ್ಶನ್.ಎಂ.ಎಂ .ಜಿನೇಂದ್ರ, ಮಾಳ ಹರ್ಷಿಂದ್ರಜೈನ್ ,  ಬ್ರಾಹ್ಮೀಲ ಮದನ್ ,ಮoಚೇನಹಳ್ಳಿ ರಾಜೇಶ್ ಇನ್ನಿತರ ಪದಾಧಿಕಾರಿಗಳು ರಾಜ್ಯದ ವಿವಿಧ ಜೈನ ಸಂಘಟನೆಗಳ ಮುಖಂಡರುಗಳು ಮಹಿಳಾ ಜೈನ ಘಟಕಗಳ ಪದಾಧಿಕಾರಿಗಳು  ಶ್ರಾವಕ –ಶ್ರಾವಕಿಯರು ಭಾಗವಹಿಸಿದ್ದರು .  ಟಿ.ವಿ.ನಿರೂಪಕಿ ನಮಿತಾ ಜೈನ್ ಕಾರ್ಯಕ್ರಮ ನಿರೂಪಿಸಿದರು.

    ವರದಿ: ಜೆ.ರಂಗನಾಥ, ತುಮಕೂರು


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

    admin
    • Website

    Related Posts

    ಬೀದರ್ | ಭ್ರಷ್ಟಾಚಾರ ಆರೋಪ; ದ್ವಿತೀಯ ದರ್ಜೆ ಸಹಾಯಕ ಅಮಾನತು

    July 1, 2025

    ಜುಲೈ 1:  ರಾಷ್ಟ್ರೀಯ ಪತ್ರಿಕಾ ದಿನ: ಪತ್ರಿಕಾ ದಿನಾಚರಣೆಯ ಶುಭಾಶಯಗಳು

    July 1, 2025

    ಆಷಾಢ ಏಕಾದಶಿ ಪ್ರಯುಕ್ತ ಪಂಢರಪುರಕ್ಕೆ ವಿಶೇಷ ರೈಲು

    June 30, 2025
    Our Picks

    ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ: 8 ಕಾರ್ಮಿಕರು ಸಾವು

    June 30, 2025

    ಇಸ್ರೇಲ್ ಪರ ಬೇಹುಗಾರಿಕೆ: ಮೂವರನ್ನು ಗಲ್ಲಿಗೇರಿಸಿದ ಇರಾನ್

    June 25, 2025

    ಕೆಲವರಿಗೆ ಮೋದಿಯೇ ಮೊದಲು: ಶಶಿ ತರೂರ್ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಟೀಕೆ

    June 25, 2025

    ಏಳು ಪ್ರಮುಖ ಮಸೂದೆಗಳಿಗೆ ಅನುಮೋದನೆ ನೀಡಲು ರಾಷ್ಟ್ರಪತಿಗೆ ಸಿಎಂ ಸಿದ್ದರಾಮಯ್ಯ ಮನವಿ

    June 24, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ದಕ್ಷಿಣ ಕರ್ನಾಟಕದ ಏಕೈಕ ಚಿತ್ರಕಲಾ ಕಾಲೇಜನ್ನು ಉಳಿಸಿ ಬೆಳೆಸಿದವರು ಸಿ.ಸಿ.ಬಾರಕೇರ:  ಡಾ.ಕರಿಯಣ್ಣ ಬಿ.

    July 1, 2025

    ತುಮಕೂರು :  ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತುಮಕೂರು ಮತ್ತು ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ, ತುಮಕೂರು ಇವರ ಸಂಯುಕ್ತ ಆಶ್ರಯದಲ್ಲಿ…

    ಎಷ್ಟು ಹಣ ಕೊಟ್ಟರೂ ಆ ಒಂದು ಕೆಲಸ ಮಾಡುವುದಿಲ್ಲ ಎಂದ ರಶ್ಮಿಕಾ ಮಂದಣ್ಣ!

    July 1, 2025

    ಬೀದರ್ | ಭ್ರಷ್ಟಾಚಾರ ಆರೋಪ; ದ್ವಿತೀಯ ದರ್ಜೆ ಸಹಾಯಕ ಅಮಾನತು

    July 1, 2025

    ತುಮಕೂರು: ವಿವಿಧ ಪದವಿ ಕೋರ್ಸ್ ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

    July 1, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.