- ಮಂಜುಸ್ವಾಮಿ ಎಂ.ಎನ್. ಕೊರಟಗೆರೆ.
ಕೊರಟಗೆರೆ : ಗ್ರಾಮೀಣ ಮಕ್ಕಳಿಗೆ ಶಿಕ್ಷಣ ಸೀಗಲೆಂದು ಪೋಷಕರು ಹಗಲುರಾತ್ರಿ ಎನ್ನದೇ ದುಡಿದು ಕಷ್ಟಪಡ್ತಾರೇ.. ಶಾಲಾ–ಕಾಲೇಜಿನಲ್ಲಿ ಶಿಕ್ಷಕರು ಮಕ್ಕಳ ಉತ್ತಮ ಶಿಕ್ಷಣಕ್ಕಾಗಿ ಶ್ರಮಿಸ್ತಾರೇ. ಆದರೇ ಇಲ್ಲೊಂದು ವಸತಿ ಶಾಲೆಯಲ್ಲಿ ತಡರಾತ್ರಿ ವಿದ್ಯಾರ್ಥಿಯೇ ಗೇಟ್ ಹತ್ತಿ ಹೊರಗಡೆ ಹೋಗ್ತಾಳೇ.. ರಾತ್ರಿಯಿಡಿ ಹೊರಗಡೆ ಇದ್ದು ಮತ್ತೇ ಅದೇ ನಿಲಯಕ್ಕೆ ಯಾರ ಭಯವು ಇಲ್ಲದೇ ಮುಂಜಾನೇ ವಾಪಸ್ ಬರ್ತಾಳೇ.. ಹಾಗಾದ್ರೇ ಸಮಾಜ ಕಲ್ಯಾಣ ಇಲಾಖೆಯ ಪಾತ್ರವೇನು ಎಂಬುದೇ ಯಕ್ಷಪ್ರಶ್ನೆ..?
ಕೊರಟಗೆರೆ ಪಟ್ಟಣದ ಹೃದಯ ಭಾಗದಲ್ಲಿನ ಸರಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಶುಕ್ರವಾರ ತಡರಾತ್ರಿ 11ಗಂಟೆ 21 ನಿಮಿಷಕ್ಕೆ ಇಂತಹದೊಂದು ಘಟನೆ ನಡೆದಿದೆ. ವಸತಿ ನಿಲಯದ ವಾರ್ಡನ್ ಶೃತಿ.ಜಿ ತಮ್ಮ ಕರ್ತವ್ಯ ಮುಗಿಸಿ 6ಗಂಟೆಗೆ ಮನೆಗೆ ಹೋದ ನಂತರ ಕಾವಲುಗಾರ ಇರುವ ವೇಳೆ ಲೋಪ ಉಂಟಾಗಿದೆ. ಖಾಸಗಿ ವ್ಯಕ್ತಿ ಚಿತ್ರಿಕರಣ ಮಾಡಿರುವ ವಿಡೀಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ವಿದ್ಯಾರ್ಥಿನಿಗಾಗಿ ರಾತ್ರಿಯಿಡಿ ಹುಡುಕಾಟ..
ವಿದ್ಯಾರ್ಥಿ ನಿಲಯದಿಂದ ಎಸ್ಕೇಪ್ ಆದ ಕೇಲವೇ ಕ್ಷಣದಲ್ಲಿಯೇ ಕಾವಲುಗಾರ್ತಿ ಲಲಿತಮ್ಮಗೆ ದೂರವಾಣಿ ಕರೆ ಬರುತ್ತೇ. ತಕ್ಷಣ ಎಚ್ಚೇತ್ತ ವಾರ್ಡನ್ ಶೃತಿ ಸ್ಥಳಕ್ಕೆ ಆಗಮಿಸಿ ಕೊರಟಗೆರೆ ಪಟ್ಟಣದ ಕಾಲೇಜು ಮೈದಾನ, ಗೊರವನಹಳ್ಳಿ ರಸ್ತೆ, ಊರ್ಡಿಗೆರೆ ಕ್ರಾಸ್, ಡಿಗ್ರಿ ಕಾಲೇಜು ಸೇರಿದಂತೆ ಹತ್ತಾರು ಕಡೆಯಲ್ಲಿ ರಾತ್ರಿಯಿಡಿ ಹುಡುಕಾಟ ನಡೆಸಿದ್ರು ಸಿಕ್ಕಿಲ್ಲ. ನಂತರ ಮುಂಜಾನೆ 5 ಗಂಟೆ 15 ನಿಮಿಷಕ್ಕೆ ಯಾರ ಭಯವು ಇಲ್ಲದೇ ಮತ್ತೇ ನಿಲಯಕ್ಕೆ ಹಿಂದಕ್ಕೆ ಬಂದು ಕೊಠಡಿಯೊಳಗೆ ಸೇರಿಕೊಂಡಿದ್ದಾಳೆ.
ಕೊರಟಗೆರೆ ತಹಶೀಲ್ದಾರ್ ಮುನಿಶಾಮಿರೆಡ್ಡಿ, ಸಮಾಜ ಕಲ್ಯಾಣ ಇಲಾಖೆಯ ಮಲ್ಲಿಕಾರ್ಜುನ್, ಕೊರಟಗೆರೆ ಪಿಎಸೈ ಚೇತನ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿಲಯದಲ್ಲಿದ್ದ ವಿದ್ಯಾರ್ಥಿಯನ್ನು ಸಮಾಜ ಕಲ್ಯಾಣ ಇಲಾಖೆ ಪೋಷಕರ ಜವಾಬ್ದಾರಿಗೆ ನೀಡಿದೆ. ಕೊರಟಗೆರೆ ತಾಲೂಕು ದುಗ್ಗೆನಹಳ್ಳಿಯ ಆಟೋ ಚಾಲಕ ಆರ್ಯಗೌಡ(26) ಮತ್ತು ಟಾಟಾ ಎಸಿ ಆಟೋ ಪೊಲೀಸರ ಅತಿಥಿಯಾಗಿದ್ದಾನೆ. ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್ ದೂರಿನ ಅನ್ವಯ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
358 ಜನ ವಿದ್ಯಾರ್ಥಿಗಳ ರಕ್ಷಣೆ ಯಾರದ್ದು..?
ಕೊರಟಗೆರೆ ಪಟ್ಟಣದ ಸರಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ–50, ಬಾಲಕರ ವಿದ್ಯಾರ್ಥಿ ನಿಲಯ–70, ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ–90, ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ–90 ಮತ್ತು ಅಕ್ಕಿರಾಂಪುರದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ–58ಜನ ಸೇರಿ ಒಟ್ಟು 358 ಜನ ಇರುವ ವಸತಿ ನಿಲಯದಲ್ಲಿ ಸಿಸಿಟಿವಿ ಲಭ್ಯವಿದ್ರು, ವಿದ್ಯಾರ್ಥಿಗಳಿಗೆ ರಾತ್ರಿ ಪಾಳೇಯದ ಭದ್ರತೆಯಲ್ಲಿ ಲೋಪ ಉಂಟಾಗಿದೆ.
ರಾತ್ರಿ ವೇಳೆ ವಿದ್ಯಾರ್ಥಿ ನಿಲಯಕ್ಕೆ ಅಭದ್ರತೆ:
ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಕೊರಟಗೆರೆ ಪಟ್ಟಣ ಮತ್ತು ಅಕ್ಕಿರಾಂಪುರ ಸೇರಿ ಒಟ್ಟು 5 ವಿದ್ಯಾರ್ಥಿ ನಿಲಯಗಳಿವೆ. ಪ್ರಸ್ತುತ ವಾಸವಿರುವ 358 ಜನ ವಿದ್ಯಾರ್ಥಿಗಳಿಗೆ ಸಿಸಿಟಿವಿಯ ಭದ್ರತೆ ನೆಪಮಾತ್ರ ಅಷ್ಟೆ. ಮಕ್ಕಳ ಜವಾಬ್ದಾರಿ ಹೊತ್ತ ವಾರ್ಡನ್ ಸಂಜೆ 6 ಗಂಟೆಗೆ ಜಾಗ ಖಾಲಿ ಮಾಡ್ತಾರೇ. 6 ಗಂಟೆ ನಂತರ ಬರುವ ಕಾವಲುಗಾರ ಊಟ ಮಾಡಿದ ನಂತರ ಮಕ್ಕಳು ಮಲಗುವ ಮುಂಚೆಯೇ ಕೊಠಡಿ ಸೇರಿಕೊಳ್ತಾರೇ. ವಿದ್ಯಾರ್ಥಿಗಳಿಗೆ ರಕ್ಷಣೆಯ ಜೊತೆಗೆ ಅಧಿಕಾರಿಗಳ ಭಯವು ಸಹ ಇಲ್ಲದೇ ಅಭದ್ರತೆ ಸೃಷ್ಟಿಯಾಗಿದೆ.
ರಾತ್ರಿ11ಕ್ಕೆ ಹೊರಕ್ಕೆ ಮುಂಜಾನೆ 5ಕ್ಕೆ ಒಳಗೆ:
ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ವಾಸವಿರುವ 17 ವರ್ಷದ ವಿದ್ಯಾರ್ಥಿನಿ ಶುಕ್ರವಾರ ತಡರಾತ್ರಿ 11 ಗಂಟೆ 21ನಿಮಿಷಕ್ಕೆ ನಿಲಯದ ಬಾಗಿಲಿನ ಗೇಟ್ ಹತ್ತಿ ಹೊರಗಡೆ ಹೋಗ್ತಾಳೆ. ಮತ್ತೇ ಮುಂಜಾನೆ 5 ಗಂಟೆ 15 ನಿಮಿಷಕ್ಕೆ ಮತ್ತೇ ಅದೇ ಗೇಟ್ ಹತ್ತಿ ಒಳಗಡೆ ಬರ್ತಾಳೆ. ವಿದ್ಯಾರ್ಥಿ ಹೊರಗಡೆ ಹೋಗುವ ದೃಶ್ಯ ನಿಲಯದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೊರಗಡೆ ಬಂದ ನಂತರ ಆಟೋ ಹತ್ತಿ ಹೋಗುವ ದೃಶ್ಯ ಖಾಸಗಿ ವ್ಯಕ್ತಿಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಎರಡು ವಿಡೀಯೊಗಳು ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ವೈರಲ್ ಆಗಿದೆ.
ವಿದ್ಯಾರ್ಥಿ ನಿಲಯದ ವಾರ್ಡನ್ ಮತ್ತು ಕಾವಲುಗಾರರಿಂದ ಭದ್ರತೆಯ ಲೋಪ ಆಗಿದೆ. ನಿಲಯದ ಇಬ್ಬರ ಮೇಲೆ ಕ್ರಮಕ್ಕೆ ಇಲಾಖೆಗೆ ಸೂಚಿಸಲಾಗಿದೆ. ಪೊಲೀಸರಿಂದ ಸಿಸಿಟಿವಿ ಮತ್ತು ಖಾಸಗಿ ವಿಡೀಯೊ ದೃಶ್ಯಾವಳಿ ಪರಿಶೀಲನೆ ನಡೆದಿದೆ. ಟಾಟಾ ಎಸಿ ಆಟೋ ಮತ್ತು ಆರೋಪಿ ಪೊಲೀಸರ ವಶದಲ್ಲಿ ಇದ್ದಾನೆ. ಕೊರಟಗೆರೆ ಪೊಲೀಸರ ತನಿಖೆಯಿಂದ ಸತ್ಯಾಂಶ ಹೊರಗಡೆ ಬರಲಿದೆ.
-ಮುನಿಶಾಮಿ ರೆಡ್ಡಿ. ತಹಶೀಲ್ದಾರ್. ಕೊರಟಗೆರೆ.
ವಿದ್ಯಾರ್ಥಿಯೇ ತಡರಾತ್ರಿ 11 ಗಂಟೆ ವೇಳೆ ಗೇಟ್ ಹತ್ತಿ ಇಳಿದು ಕಾರಿಗೆ ಹತ್ತಿರುವ ವಿಡೀಯೊ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಾರ್ಡನ್ ಕರ್ತವ್ಯ ಮುಗಿಸಿ ಮನೆಗೆ ತೆರಳಿದ ನಂತರ ಕಾವಲುಗಾರ್ತಿ ಬಂದಿದ್ದಾರೆ. ರಾತ್ರಿವೇಳೆ ನಿದ್ದೆ ಟೈಂನಲ್ಲಿ ಇಂತಹ ಘಟನೆ ನಡೆದಿದೆ. ಆರೋಪಿ ಆಟೋ ಡ್ರೈವರ್ ಈಗ ಪೊಲೀಸರ ವಶದಲ್ಲಿ ಇದ್ದಾನೆ. ಪೊಲೀಸರ ತನಿಖೆಯಿಂದ ನಿಲಯದ ಇನ್ನಷ್ಟು ಸತ್ಯಾಂಶ ಹೊರಗಡೆ ಬರಲಿದೆ.
–ಕೃಷ್ಣಪ್ಪ.ಎಸ್. ಜಂಟಿ ನಿರ್ದೇಶಕ. ಸಮಾಜ ಕಲ್ಯಾಣ ಇಲಾಖೆ. ತುಮಕೂರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA