ತುರುವೇಕೆರೆ: ಮಾಯಸಂದ್ರದವರಾದ ಚಿತ್ರನಟ ಜಗ್ಗೇಶ್ ಅವರನ್ನು ಬಿಜೆಪಿ ಪಕ್ಷ ರಾಜ್ಯಸಭೆಗೆ ಆಯ್ಕೆ ಮಾಡಿರೋದು ನನಗೆ ತುಂಬಾ ಸಂತೋಷವಾಗಿದೆ.ಅವರಿಗೆ ನಮ್ಮ ತಾಲ್ಲೂಕಿನ ಜನರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಮಾತನಾಡಿದ ಶಾಸಕ ಮಸಾಲೆ ಜಯರಾಮ್ ತಿಳಿಸಿದರು.
ತಾಲ್ಲೂಕಿನ ಮಾಯಸಂದ್ರದಲ್ಲಿ ಕಲ್ಪತರು ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಕಛೇರಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಮಸಾಲೆ ಜಯರಾಮ್, ಕುರಿ ಸಾಕಾಣೆಯಲ್ಲಿ ನಮ್ಮ ದೇಶ ಎರಡನೇಯ ಸ್ಥಾನದಲ್ಲಿದೆ. ಕುರಿ ಸಾಗಾಣಿಕೆಗೆ ಹೆಚ್ಚಿನ ಉತ್ತೇಜನ ನೀಡಬೇಕಿದೆ ಎಂದು ಹೇಳಿದರು.
ರೈತರ ಒಳಿತಿಗಾಗಿ ಈ ಸಂಘ ತೆಗೆದುಕೊಳ್ಳುವ ಕಾರ್ಯಕ್ರಮಗಳಿಗೆ ನನ್ನ ಸಹಕಾರ ಇರಲಿದೆ. ಸದಾ ನಿಮ್ಮ ಜೊತೆ ನಾನು ಇರುತ್ತೇನೆ ಎಂದು ಹೇಳಿದರು.
ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಕುರಿ ಸಾಗಾಣಿಕೆಯಿಂದ ಪ್ರತಿ ಹಂತದಲ್ಲೂ ಲಾಭ ಕಾಣಬಹುದು. ಕುರಿಯ ಮಾಂಸಕ್ಕೆ ಉತ್ತಮ ಬೇಡಿಕೆ ಇದೆ. ಅದರ ಉಣ್ಣೆಯಲ್ಲೂ ಹಣ ಗಳಿಸಬಹುದು ಜೊತೆಗೆ ಅದರ ಗೊಬ್ಬರದಲ್ಲೂ ರೈತನಿಗೆ ಲಾಭವಿದೆ ಎಂದರು. ರೈತರು ಸರ್ಕಾರದ ಸವಲತ್ತುಗಳನ್ನು ಪಡೆಯುವ ಮೂಲಕ ಕುರಿ ಸಾಗಾಣಿಕೆಯನ್ನು ಉತ್ತೇಜಿಸಿಕೊಳ್ಳಬೇಕು ಎಂದರು.
ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಮಹಾಲಿಂಗಯ್ಯ ಮಾತನಾಡಿ, ಕುರಿ ಸಾಕಾಣಿಕೆ ಮತ್ತು ಹೈನುಗಾರಿಕೆ ಮಾಡುವ ರೈತರಿಗೆ ಸರ್ಕಾರದಿಂದ ಉತ್ತಮವಾದ ಸವಲತ್ತುಗಳು ದೊತೆಯುತ್ತಿವೆ. ಜಿಲ್ಲೆಯಲ್ಲಿ ಹೈನುಗಾರಿಕೆಯಿಂದ ಅತಿಹೆಚ್ಚು ಹಾಲು ಉತ್ಪಾದನೆಯಾಗುತ್ತಿದೆ ಇದು ಹೆಮ್ಮೆಯ ವಿಚಾರ ಎಂದು ತಿಳಿಸಿದರು.
ಮಾಜಿ ವಿಧಾನಪರಿಷತ್ ಸದಸ್ಯ ಬೆಮೆಲ್ ಕಾಂತರಾಜು ಮಾತನಾಡಿ, ಜಿಲ್ಲೆಯ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೀರಿ, ನಿಮ್ಮಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ ರೈತರು ಅವಶ್ಯವಿದ್ದಾಗ ಪಶು ಡಾಕ್ಟರ್ ಗಳಿಗೆ ಕರೆ ಮಾಡಿದಾಗ ಅವರಿಗೆ ತಕ್ಷಣವೇ ಸ್ಪಂದಿಸಬೇಕು. ಆಗ ಮಾತ್ರ ರೈತರು ಕುರಿ ಮತ್ತು ಹೈನುಗಾರಿಕೆಗೆ ಹೆಚ್ಚಿನ ಒಲವು ತೋರುತ್ತಾರೆ ಎಂದರು. ಹೊರದೇಶಗಳಲ್ಲಿ ಕುರಿ ಸಾಗಾಣಿಕೆ ಮಾಡಲು ಹೆಚ್ಚಿನದಾಗಿ ಸಹಕಾರ ಸಿಗಲಿದೆ ಅದ್ದರಿಂದ ಅಲ್ಲಿ ಹೆಚ್ಚು ಕುರಿ ಸಾಗಾಣಿಕೆ ಮಾಡುತ್ತಾರೆ.
ಕುರಿ ಮತ್ತು ಉಣ್ಣೆ ನಿಗಮದ ಸಹಾಯಕ ನಿರ್ದೇಶಕರಾದ ಡಾ.ಕೆ. ನಾಗಣ್ಣ ಅವರು ಕಾರ್ಯಕ್ರಮದ ಉದ್ಘಾಟನಾ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಎನ್.ಆರ್.ಜಯರಾಮ್, ಗ್ರಾ.ಪಂ. ಅಧ್ಯಕ್ಷರಾದ ಮಂಗಳ ಗೌರಮ್ಮಹೊನ್ನಪ್ಪ, ಉಪಾಧ್ಯಕ್ಷರು ಸರ್ವ ಸದಸ್ಯರುಗಳು, ಡಾ.ಸದಾಶಿವಮೂರ್ತಿ ಸಹಾಯಕ ನಿರ್ದೇಶಕರು ಪಶು ಆಸ್ಪತ್ರೆ, ಡಾ. ನಾಗೇಶ್ ಕುಮಾರ್ ಜಿಲ್ಲಾ ಅನುಷ್ಠಾನ ಅಧಿಕಾರಿ ಕ.ಕು. ಮತ್ತು ಈ.ಅ.ನಿ. ತುಮಕೂರು. ಅಜಯ್ ಅಧೀಕ್ಷಕರು ತರಬೇತಿ ಕೇಂದ್ರ ಸಂಘದ ಅಧ್ಯಕ್ಷ ಕೆಂಪೇಗೌಡ, ಸದಸ್ಯ ಗಂಗಾಧರ ಗೌಡ, ಅಜಯ್, ಶಾಂತಮ್ಮ, ಶಬೀನ ಮುಂತಾದ ಪದಾಧಿಕಾರಿಗಳು, ಮೆಡಿಕಲ್ ಸ್ಟೋರ್ ಯೋಗಾನಂದ, ಮಂಜುನಾಥ್, ರೈತ ಮುಖಂಡರು, ಗ್ರಾಮದ ಗ್ರಾಮಸ್ಥರು ಅಕ್ಕಪಕ್ಕದ ಹಳ್ಳಿಯ ಗ್ರಾಮಸ್ಥರು, ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ನಂಜುಂಡಪ್ಪನವರು ನೆರವೇರಿಸಿದರು.
ವರದಿ: ಸಚಿನ್ ಮಾಯಸಂದ್ರ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz