ಮೊದಲು ಜೆಡಿಎಸ್ ರಾಜ್ಯಕ್ಕೆ ಸೀಮಿತವಾಗಿತ್ತು. ನಂತರ ಮಂಡ್ಯ, ಹಾಸನಕ್ಕೆ ಸೀಮಿತವಾಗಿದೆ. ಹೆಚ್.ಡಿ ಕುಮಾರಸ್ವಾಮಿ ಹೆಚ್.ಡಿ ದೇವೇಗೌಡರು ಒಂದು ವರ್ಗಕ್ಕೆ ಸೀಮಿತರಾಗಿದ್ದಾರೆ. ಜೆಡಿಎಸ್ ಇನ್ನಷ್ಟು ಕುಗ್ಗಿ ಜಿಲ್ಲೆಗೆ ಸೀಮಿತವಾಗೋದು ಬೇಡ ಎಂದು ಕಂದಾಯ ಸಚಿವ ಆರ್.ಅಶೋಕ್ ವ್ಯಂಗ್ಯವಾಡಿದರು.
ಉರಿಗೌಡ ನಂಜೇಗೌಡ ಸಿನಿಮಾಗೆ ಎಚ್ ಡಿಕೆ ವಿರೋಧ ಕುರಿತು ಮಾತನಾಡಿದ ಆರ್. ಅಶೋಕ್, ಒಕ್ಕಲಿಗರನ್ನು ಹೀಯಾಳಿಸುವ ಉದ್ದೇಶವಿಲ್ಲ ನಾವೂ ಒಕ್ಕಲಿಗ ಸಮಾಜದಿಂದ ಬಂದವರು ಬಿಜೆಪಿ ಇತಿಹಾಸ ಪರವಾಗಿ ನಿಲ್ಲುತ್ತದೆ. ಇತಿಹಾಸ ಏನು ಅಂತಾ ನೋಡುತ್ತೇನೆ. ಹೆಚ್ ಡಿಕುಮಾರಸ್ವಾಮಿಗೆ ಅನುಮಾನವಿದ್ದರೇ ಇತಿಹಾಸವನ್ನ ಮತ್ತೊಮ್ಮೆ ಪರಿಶೀಲಿಸೋಣ ಎಂದರು.
ಯಾರೂ ಸಮುದಾಯವನ್ನ ಗುತ್ತಿಗೆ ಪಡೆಯಲು ಆಗಲ್ಲ. ಕುಮಾರಸ್ವಾಮಿ ಪದೇ ಪದೇ ಜಾತಿ ಹೆಸರು ಹೇಳುವುದು. ಜಾತಿ ಹೆಸರಲ್ಲಿ ಮತ ಕೇಳುವ ಗಿಮಿಕ್ ಮಾಡಬಾರದು ಎಂದು ಆರ್.ಅಶೋಕ್ ಟಾಂಗ್ ನೀಡಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


