ಮಧುಗಿರಿ: ಮಧುಗಿರಿ ತಾಲೂಕು ದಂಡಾದಿಕಾರಿಗಳ ಕಾರ್ಯಾಲಯದಲ್ಲಿ ಜೀತ ಪದ್ದತಿ ನಿರ್ಮೂಲನಾ ದಿನಾಚರಣೆಯನ್ನು ಗುರುವಾರ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸೌಹಾರ್ದ ಕರ್ನಾಟಕ ಸಂಘಟನೆಯ ರಾಜ್ಯ ಖಜಾಂಚಿ ಜೀವಿಕ ಮಂಜು ಮಾತನಾಡಿ, ಜೀತ ಪದ್ದತಿ ಒಂದು ಅಮಾನವೀಯ ಪದ್ದತಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪ್ರದಾನಿ ಇಂದಿರಾಗಾಂಧಿಯವರ ಇಪ್ಪತ್ತು ಅಂಶಗಳ ಕಾರ್ಯಕ್ರಮದಲ್ಲಿ ಜೀತ ಪದ್ದತಿಯಂತ ಅನಿಷ್ಟ ಪದ್ದತಿಯು ಒಂದು ಪ್ರಮುಖವಾದದ್ದು ತಿಳಿಸಿದ್ದು, ಆಗಾಗಿ ದೇಶದಲ್ಲಿ ಕೋಟ್ಯಾಂತರ ಬಡ ಶೋಷಿತರು ಮನುಷ್ಯರಾಗಿ ಬದುಕಲು ದಾರಿಯಾಯಿತು ಇದರ ಉದ್ದೇಶ ಎಲ್ಲಾ ಸ್ಥಳೀಯ ಸರ್ಕಾರಿ ಸರ್ಕಾರೇತರ ಸಂಸ್ಥೆ ಗಳಲ್ಲು ತಳ ಮಟ್ಟದ ಅದಿಕಾರಿಗಳು ಸಹ ಇಂದು ಜೀತ ಪದ್ದತಿ ಹೋಗಲಾಡಿಸಲು ಕಾಳಜಿ ವಹಿಸಬೇಕು ಮತ್ತು ತಮ್ಮ ಜವಾಬ್ದಾರಿ ಕರ್ತವ್ಯ ದೇಶದ ಅಭಿವೃದ್ದಿ ಕೂಡ ಎಂದರು.
ಕಾರ್ಯಕ್ರಮ ದಲ್ಲಿ ಉಪ ತಹಶೀಲ್ದಾರ್ ತಿಪ್ಪೇಸ್ವಾಮಿ ಸೌಹಾರ್ದ ಕರ್ನಾಟಕ ಸಂಘಟನೆಯ ಹೋರಾಟಗಾರ್ತಿ ಜೀವಿಕ ಚಿಕ್ಕಮ್ಮ, ಅಂಬೇಡ್ಕರ್ ಸೇನೆ ಮಾರುತಿ ಗೂಬಲಗುಟ್ಟೆ, ಅಂಜಿನಪ್ಪ ಎಲ್ಲಾ ಅಧಿಕಾರಿಗಳು ಹಾಜರಿದ್ದರು.
ವರದಿ: ಆಬಿದ್, ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1