ಗುಬ್ಬಿ: ರಾಜಕೀಯವಾಗಿ ಇಡೀ ಯಾದವ ಸಮುದಾಯ ಒಗ್ಗಟ್ಟಿನಿಂದ ಕೂಡಿದ್ದು, ಎಸ್ ಟಿ ಮೀಸಲಾತಿಯನ್ನು ಕಾಡುಗೊಲ್ಲ ಸಮುದಾಯಕ್ಕೆ ನೀಡಬೇಕು ಎಂದು ಹಿಂದುಳಿದ ವರ್ಗಗಳ ಜಿಲ್ಲಾ ಮೋರ್ಚಾ ಮಾಜಿ ಅಧ್ಯಕ್ಷ ಜಿ ಎನ್ ಬೆಟ್ಟಸ್ವಾಮಿ ಆಗ್ರಹಿಸಿದರು
ತಾಲ್ಲೂಕಿನ ಪಂಚಮುಖಿ ದೇವಸ್ಥಾನದಲ್ಲಿ ಕರೆದಿದ್ದ ಕಾಡುಗೊಲ್ಲರ ಸಭೆಯಲ್ಲಿ ಮಾತನಾಡಿದ ಅವರು, ಬಹಳ ವರ್ಷಗಳಿಂದಲೂ ಸಹ ಕಾಡುಗಳಲ್ಲಿ ವಾಸ ಮಾಡುತ್ತಿರುವಂತಹ ಕಾಡುಗೊಲ್ಲ ಸಮುದಾಯ ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಸಾಕಷ್ಟು ಹಿಂದುಳಿದಿದ್ದು , ಅವರನ್ನು ಎಸ್ ಟಿ ಸಮುದಾಯಕ್ಕೆ ಸೇರ್ಪಡೆಗೊಳಿಸಿದರೆ ಅವರ ಜೀವನಕ್ಕೆ ದಾರಿಯಾಗುತ್ತದೆ ಎಂಬ ಸದುದ್ದೇಶದಿಂದ ಎಲ್ಲರೂ ಒಟ್ಟಿಗೆ ಸೇರಿ ಹೋರಾಟ ಮಾಡಲು ಸಿದ್ಧವಿದ್ದೇವೆ. ಪಕ್ಷಾತೀತವಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಈ ಸಮುದಾಯವನ್ನು ಮೇಲಕ್ಕೆತ್ತುವ ಕೆಲಸವನ್ನು ಮಾಡಲು ಸಿದ್ಧವಿದ್ದೇವೆ. ಎಲ್ಲ ಜನಪ್ರತಿನಿಧಿಗಳನ್ನು ಶಾಸಕರಿಂದ ಹಿಡಿದು ಮುಖ್ಯಮಂತ್ರಿಯವರೆಗೂ ಸಹ ನಮಗಿರುವಂತಹ ಸಮಸ್ಯೆಗಳನ್ನು ತಿಳಿಹೇಳಿ ಕಾಡುಗೊಲ್ಲ ಸಮುದಾಯವನ್ನು ಎಸ್ ಟಿ ಸಮುದಾಯಕ್ಕೆ ಸೇರಿಸಲು ಒತ್ತಾಯ ಮತ್ತು ಹೋರಾಟ ಮಾಡಲು ಸಿದ್ಧರಿದ್ದೇವೆ ಎಂದು ತಿಳಿಸಿದರು.
ಯಾದವ ಮುಖಂಡ ಜುಂಜೇಗೌಡ ಮಾತನಾಡಿ, ತಾಲ್ಲೂಕಿನಲ್ಲಿ ಇರುವುದು ಒಂದೇ ಸಂಘ ಅದು ಕಾಡುಗೊಲ್ಲರ ಸಂಘವಾಗಿದ್ದು, ನಮ್ಮ ಉಳಿವಿಗಾಗಿ ಹಾಗೂ ನಮ್ಮ ಅಭಿವೃದ್ಧಿಗಾಗಿ ನಾವೆಲ್ಲರೂ ಒಟ್ಟಿಗೆ ಸೇರಿ ನಮ್ಮ ಸಮುದಾಯವನ್ನು ಸರಕಾರಕ್ಕೆ ಹೆಚ್ಚಿನ ಒತ್ತಡ ತಂದು ಎಸ್ಟಿ ಸಮುದಾಯಕ್ಕೆ ಸೇರಿಸಲು ಹೋರಾಟಕ್ಕೆ ಸಿದ್ಧರಾಗಿದ್ದೇವೆ ಎಂದು ತಿಳಿಸಿದರು
ಯಾದವ ಮುಖಂಡ ಕೆ.ಟಿ.ಕೆ ಪ್ರಭು ಮಾತನಾಡಿ, ರಾಜಕೀಯವಾಗಿ ನಮ್ಮ ಸಮುದಾಯದ ಯಾವುದೇ ವ್ಯಕ್ತಿ ಮುಂದೆ ಬಂದರೂ ಸಹ ನಾವೆಲ್ಲರೂ ಒಗ್ಗಟ್ಟಿನಿಂದ ನೇ ಅವರ ಕೈ ಹಿಡಿಯುತ್ತೇವೆ. ಆದರೆ ಶತಮಾನಗಳಿಂದಲೂ ಸಹ ನಮ್ಮಕಾಡುಗೊಲ್ಲ ಸಮುದಾಯಕ್ಕೆ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದೇಟು ಬಿದ್ದಿದ್ದು, ಈಗಲಾದರೂ ಎಲ್ಲಾ ರಂಗದಲ್ಲಿಯೂ ಕೂಡ ನಾವು ಅಭಿವೃದ್ಧಿಯಾಗಬೇಕು ಎಂದರೆ, ಸರಕಾರ ನಮ್ಮ ಕಡೆ ಹೆಚ್ಚಿನ ಗಮನಹರಿಸಿ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು. ಇಲ್ಲದೇ ಹೋದರೆ ಇಡೀ ರಾಜ್ಯದಲ್ಲಿಯೇ ನಾವು ಹೋರಾಟವನ್ನು ಮಾಡಿ ನಮ್ಮ ಹಕ್ಕು ಪಡೆಯುತ್ತೇವೆ ಎಂದು ತಿಳಿಸಿದರು
ಗಂಗಾಧರ್, ಪ್ರಭು, ಸಿದ್ದರಾಜು, ಜುಂಜೇಗೌಡ್ರು, ಗುರುಲಿಂಗಯ್ಯ, ಸದಾಶಿವ, ಕೆಂಪಣ್ಣ, ಶಿವರಾಜು, ಶ್ರೀನಿವಾಸ್, ಹಿರಣ್ಣ, ಶಿವಮ್ಮ, ಶಿವಣ್ಣ, ಸನ್ನತಿಮ್ಮಯ್ಯ, ಉಮೇಶ್, ಜಯಣ್ಣ, ನಾಗರಾಜ್, ನಾಗಣ್ಣ, ತಿಮ್ಮಣ್ಣ, ಸಮುದಾಯದ ಮುಖಂಡರು ಹಾಜರಿದ್ದರು.
ವರದಿ: ಮಂಜುನಾಥ್, ಗುಬ್ಬಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB