ಪಾವಗಡ: ಪೋತಗಾನಹಳ್ಳಿ ಗ್ರಾಮ ಪಂಚಾಯಿತಿ ಹೊರಗುತ್ತಿಗೆ ಕರವಸೂಲಿ ನೌಕರ ಜಿ.ಮಂಜುನಾಥ್ ಅವರನ್ನು ಅಮಾನತುಗೊಳಿಸಬೇಕು ಎಂದು ತಾಲೂಕಿನ ವೈ .ಎನ್. ಹೊಸಕೋಟೆ ಹೋಬಳಿ ಪೋತಗಾನಹಳ್ಳಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷರಾದ ಮಾಧವ ರಾಜ್ ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪೋತಗಾನಹಳ್ಳಿ ಗ್ರಾಮ ಪಂಚಾಯಿತಿ ಹೊರಗುತ್ತಿಗೆ ಕರವಸೂಲಿ ನೌಕರ ಜಿ.ಮಂಜುನಾಥ್ ರವರು ಈ ಹಿಂದೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಅವ್ಯವಹಾರದಲ್ಲಿ ಭಾಗಿಯಾಗಿ ತಮ್ಮ ಸ್ವಂತ ಖಾತೆಗೆ ಹಣ ಹಾಕಿಕೊಂಡು ಲೋಕಾಯುಕ್ತ ತನಿಖೆ ವೇಳೆ ಸಿಕ್ಕಿಬಿದ್ದಿದ್ದರು. ಈ ಪ್ರಕರಣ ನ್ಯಾಯಾಲಯದಲ್ಲಿ 2015ರಲ್ಲಿ ಕೇಸ್ ದಾಖಲಾಗಿದ್ದು , ಕೇಸ್ ದಾಖಲಾದ ನಂತರ ದಿನಾಂಕ 7:10 2015ರಂದು ಅವರನ್ನು ಗ್ರಾಮ ಪಂಚಾಯಿತಿಯಿಂದ ಬಿಡುಗಡೆಗೊಳಿಸಿದ್ದರು. ಆದರೆ ಆನಂತರ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಮಂಜುನಾಥ್ ಅವರನ್ನು ಕೊಡಮಡಗು ಗ್ರಾಮ ಪಂಚಾಯಿತಿಯ ಕರವಸೂಲಿಗಾರ ರಾಗಿ ನೇಮಿಸಿದ್ದರು ಎಂದರು.
2021ರಲ್ಲಿ ಮತ್ತೆ ರಾಜಕೀಯ ಪ್ರಭಾವ ಬೆಳೆಸಿ, ಪೋತಗಾನಹಳ್ಳಿ ಹಳ್ಳಿ ಗ್ರಾಮ ಪಂಚಾಯಿತಿಗೆ ಅವರು ಮರು ಆದೇಶದೊಂದಿಗೆ ವಾಪಸ್ ಆಗಿದ್ದು, ಲೋಕಾಯುಕ್ತ ನ್ಯಾಯಾಲಯದಲ್ಲಿ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಕರವಸೂಲಿಗಾರ ಅದೇ ಗ್ರಾಮ ಪಂಚಾಯಿತಿಗೆ ವಾಪಸಾಗಿರುವುದರಿಂದ ಸಾಕ್ಷ್ಯಗಳನ್ನು ನಾಶ ಮಾಡುತ್ತಿದ್ದಾರೆ. ಆದ್ದರಿಂದ ಕೊಡಮಡಗು ಗ್ರಾಮ ಪಂಚಾಯಿತಿಯಿಂದ ಹೊರಗುತ್ತಿಗೆ ಕರವಸೂಲಿಗಾರನ್ನು ಗ್ರಾಮ ಪಂಚಾಯಿತಿಯಿಂದ ಹೊರ ಹಾಕಬೇಕೆಂದು ಮಾಧವ ರಾಜ್ ಒತ್ತಾಯಿಸಿದ್ದಾರೆ
ಮುಖಂಡರಾದ ಪಾತಣ್ಣ ಮಾತನಾಡಿ, ಗ್ರಾಮ ಪಂಚಾಯಿತಿಯ ಕರವಸೂಲಿಗಾರ ಜಿ. ಮಂಜುನಾಥ ಗ್ರಾಮ ಪಂಚಾಯಿತಿಯಲ್ಲಿ ಸರಿಯಾಗಿ ಕರ್ತವ್ಯ ನಿರ್ವಹಿಸದೆ, ಸಾಕ್ಷಗಳನ್ನು ನಾಶಪಡಿಸಲು ಗ್ರಾಮ ಪಂಚಾಯಿತಿಗೆ ವಾಪಸ್ಸಾಗಿದ್ದಾರೆ. ಇಂತಹ ಕರವಸೂಲಿಗಾರ ರಾಜಕೀಯ ಕುಮ್ಮಕ್ಕಿನಿಂದ ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರ ನಡೆಸಿದ್ದು, ಲೋಕಾಯುಕ್ತ ನ್ಯಾಯಾಲಯದಲ್ಲಿ ಕೇಸ್ ಪೂರ್ಣಗೊಳ್ಳುವವರೆಗೆ ಗ್ರಾಮ ಪಂಚಾಯಿತಿಯಿಂದ ಬಿಡುಗಡೆಗೊಳಿಸಿ ಬೇರೆ ಗ್ರಾಮ ಪಂಚಾಯಿತಿಗೆ ವರ್ಗಾಯಿಸಬೇಕು ಹಾಗೂ ಗ್ರಾಮ ಪಂಚಾಯಿತಿಗೆ ವಾಪಸ್ ಆದಾಗಿನಿಂದ ಕೆಲವು ಅಕ್ರಮಗಳನ್ನು ನಡೆಸಿದ್ದು, ಅವುಗಳನ್ನು ಸಮಗ್ರ ತನಿಖೆ ನಡೆಸಬೇಕು ಮತ್ತು ಗ್ರಾಮ ಪಂಚಾಯಿತಿ ಸದಸ್ಯರಿಗೆ ಗೌರವ ನೀಡದೆ ಇರುವ ಕರವಸೂಲಿಗಾರ ರನ್ನು ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದರು
ಪಂಚಾಯತಿಯ ಕರವಸೂಲಿಗಾರ ಜಿ. ಮಂಜುನಾಥ ಹೊರಗುತ್ತಿಗೆ ನೌಕರರಾಗಿದ್ದು ಈ ಹಿಂದೆ ಲೋಕಾಯುಕ್ತ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು. ತನಿಖೆ ಹಂತದಲ್ಲಿರುತ್ತದೆ .ನನ್ನ ಅವಧಿಯಲ್ಲಿ ಕರವಸೂಲಿ ನೌಕರ ಯಾವುದೇ ಅಕ್ರಮಗಳನ್ನು ಮಾಡಿರುವುದಿಲ್ಲ ಎಂದು ಪ್ರಕರ್ಣ ಸಂಬಂಧ ಪೋತಗಾನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹನುಮಂತರಾಯಪ್ಪ ಪ್ರತಿಕ್ರಿಯಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಮುದ್ದಣ್ಣ , ರಾಮರಾಜ್, ರಾಮಾಂಜನೇಯ , ರವಿ, ನಾಗರಾಜಪ್ಪ ಹಾಗೂ ಮುಖಂಡರಾದ ರಾಮಾಂಜಿನಪ್ಪ, ಸಣ್ಣ ಮಾದ ಪಾತಣ್ಣ, ಮಧುರಾಜ್ ಮತ್ತಿತರರು ಭಾಗವಹಿಸಿದ್ದರು.
ವರದಿ: ರಾಮಪ್ಪ, ಸಿ.ಕೆ ಪುರ, ಪಾವಗಡ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5