ಪಾವಗಡ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಅವರ ಪಾವಗಡ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಬಳಿಕ ಪಾವಗಡ ಬೆಟ್ಟದ ಮೇಲೆ ಬಾವುಟ ಹಾರಿಸಿ, ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರು ಹಾಗೂ ಕಾರ್ಯಕರ್ತರು ಬೈಕ್ ರಾಲಿ ನಡೆಸಿದರು. ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ರಾಜಸಾಬ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪಾವಗಡ ತಾಲೂಕು ಅಧ್ಯಕ್ಷ ಲಕ್ಷ್ಮಿನಾರಾಯಣ, ಪಾವಗಡ ತಾಲೂಕು ಉಪಾಧ್ಯಕ್ಷ ನರಸಿ ಪಾಟೀಲ್, ಪಾವಗಡ ತಾಲೂಕು ಗೌರವಾಧ್ಯಕ್ಷ ಅಮೀರ್, ಮಹಿಳಾ ಘಟಕದ ಅಧ್ಯಕ್ಷ ಶಶಿಕಲಾ, ಯೂಥ್ ಪ್ರೆಸಿಡೆಂಟ್ ಪ್ರಶಾಂತ್ ಮತ್ತು ಲಚ್ಚಿ ಹಾಗೂ ಮಿರ್ಚಿ, ರಂಗನಾಯಕ, ಮಂಜು, ಶ್ರೀನಿವಾಸ್, ಚಂದ್ರು, ನರಸಿಂಹಮೂರ್ತಿ ಸ್ಮಾರ್ಟ್ ತುಮಕೂರು ಪೇಪರ್ ವರದಿಗಾರರು ಅನಿಲ್, ನಾಗಲಮಡಿಕೆ ಹೋಬಳಿ ಅಧ್ಯಕ್ಷರು ರಾಮಮೂರ್ತಿ, ನಾಗಲಮಡಿಕೆ ಹೋಬಳಿ ಉಪಾಧ್ಯಕ್ಷರು ಅಧ್ಯಕ್ಷರು ಮಲ್ಲಿಕಾರ್ಜುನ ನಾಗಲಮಡಿಕೆ, ನಾಗಲಮಡಿಕೆ ಹೋಬಳಿ ಗೌರವ ಅಧ್ಯಕ್ಷರು ಮಲ್ಲಿಕಾರ್ಜುನ ಗ್ಯಾದಿಗುಂಟೆ, ವಿನಿತ್ ಹರ್ಷವರ್ಧನ್, ವಿನೋದ್ ಕುಮಾರ್, ಆಕಾಶ್ ಹಾಗೂ ಎಲ್ಲಾ ಘಟಕದ ಸದಸ್ಯರು ಇದ್ದರು.
ವರದಿ: ಮಲ್ಲಿಕಾರ್ಜುನ್ ಎಂ., ನಾಗಲಮಡಿಕೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz