ಕೊರಟಗೆರೆ: ತಾಲೂಕಿನ ಜೆಟ್ಟಿ ಅಗ್ರಹಾರದ ಕಾವರಗಲ್ ಮೀಸಲು ಅರಣ್ಯ ಪ್ರದೇಶಕ್ಕೆ ಗಣಿ ಮಾಫಿಯಾ ಲಗ್ಗೆಯಿಟ್ಟಿದ್ದು, ಕಲ್ಲು ಕ್ವಾರೆಯ ಬ್ಲಾಸ್ಟಿಂಗ್ ಸದ್ದಿನ ಆರ್ಭಟಕ್ಕೆ ಪ್ರಕೃತಿ ನಡುಗಿದೆ. ಪ್ರಾಣಿಗಳು ಭಯಭೀತಿಯಿಂದ ಊರುಗಳಿಗೆ ನುಗ್ಗುತ್ತಿದೆ ಎನ್ನುವ ಗಂಭೀರ ಆರೋಪಗಳು ಕೇಳಿ ಬಂದಿವೆ.
ಕೊರಟಗೆರೆ ತಾಲೂಕು ಜೆಟ್ಟಿ ಅಗ್ರಹಾರದ ಕಾವರಗಲ್ ಮೀಸಲು ಅರಣ್ಯ ಪ್ರದೇಶದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಗುಬ್ಬಿ ಮೂಲದ ಚಂದ್ರಶೇಖರ್ (ಗ್ಯಾಸ್ ಬಾಬು) ಎಂಬಾತ ಕಲ್ಲು ಕ್ವಾರೆ ಗುತ್ತಿಗೆ ಪಡೆದುಕೊಂಡಿದ್ದು, ಗಣಿ ಇಲಾಖೆ ಜೆಟ್ಟಿ ಅಗ್ರಹಾರ ಸರ್ವೆ ನಂ.35 ರಲ್ಲಿ 4 ಎಕರೇ 38 ಗುಂಟೆ ಕ್ವಾರೇ ಮಂಜೂರು ಮಾಡಿದೆ. ಭೂಮಿಯಿಂದ ಬರೋಬ್ಬರಿ 2 ಸಾವಿರ ಅಡಿ ಎತ್ತರದ ಕಾವರಗಲ್ ಬೆಟ್ಟದ ಮೇಲೆ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಭಾರೀ ಸ್ಫೋಟದ ಶಬ್ದಗಳಿಗೆ ಇಲ್ಲಿನ ಗ್ರಾಮಸ್ಥರು, ಮೂಕ ಜೀವಿಗಳು ಬೆಚ್ಚಿ ಬೀಳುತ್ತಿವೆ.
ಗಣಿ ನಿಯಮಗಳನ್ನು ಉಲ್ಲಂಘಿಸಿ ಇಲ್ಲಿ ಗಣಿಗಾರಿಕೆ ನಡೆಸಲಾಗುತ್ತಿತ್ತು. ಕಾವರಗಲ್ ಅರಣ್ಯ ಪ್ರದೇಶದಲ್ಲಿ ಕರಡಿ, ನವಿಲು, ಕಾಡುಕಿರುಬ, ಜಿಂಕೆ, ಮೊಲ ಸೇರಿದಂತೆ ನೂರಾರು ಬಗೆಯ ವನ್ಯಜೀವಿಗಳ ವಾಸವಿದೆ. ಗಣಿಗಾರಿಕೆಯಿಂದಾಗಿ ಈ ಪ್ರಾಣಿಗಳು ನಡುಗುತ್ತಿದ್ದು, ಭೀತಿಯಿಂದ ಸ್ಥಳೀಯ ಗ್ರಾಮಗಳಿಗೆ ನುಗ್ಗುತ್ತಿವೆ.
ಇನ್ನೂ ಜೆಟ್ಟಿ ಅಗ್ರಹಾರದ ಸಾಮಾಜಿಕ ಹೋರಾಟಗಾರ ಅಗ್ರಹಾರ ನಾಗರಾಜು ಕಳೆದ 8 ವರ್ಷದಿಂದ ವನ್ಯಜೀವಿಗಳ ಪರವಾಗಿ ಗಣಿಗಾರಿಕೆ ನಿಲ್ಲಿಸುವಂತೆ ನಿರಂತರ ಹೋರಾಟ ನಡೆಸುತ್ತಿಸುತ್ತಿದ್ದಾರೆ. ಇದರ ಫಲವಾಗಿ ಕಾವರಗಲ್ ಅರಣ್ಯದಲ್ಲಿನ ವನ್ಯಜೀವಿಗಳಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಗಣಿ ಇಲಾಖೆಗೆ ಕೊರಟಗೆರೆ ವಲಯ ಅರಣ್ಯಾಧಿಕಾರಿ ಪತ್ರ ಬರೆದಿದ್ದು, ಅರಣ್ಯ ಇಲಾಖೆ ದೂರಿನ ಅನ್ವಯ ತಾತ್ಕಾಲಿಕವಾಗಿ ಗಣಿಗಾರಿಕೆ ತಾತ್ಕಾಲಿಕವಾಗಿ ಸ್ಥಗಿತ ಮಾಡುವಂತೆ ಗಣಿ ಇಲಾಖೆ ಉಪನಿರ್ದೇಶಕರ ಖಡಕ್ ಆದೇಶ ಹೊರಬಿದ್ದಿದೆ.
ಇನ್ನೂ ಕಾವರಗಲ್ ಅರಣ್ಯದಲ್ಲಿ ಮತ್ತೆ ಗಣಿಗಾರಿಕೆ ನಡೆಸದಂತೆ 25ಕ್ಕೂ ಅಧಿಕ ಗ್ರಾಮಸ್ಥರು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW