ಕೆ.ಆರ್.ಪೇಟೆ: ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಹಾಸನ ಮತ್ತು ಮಂಡ್ಯ ಗಡಿ ಭಾಗ ಶ್ರವಣಹಳ್ಳಿ ಗ್ರಾಮದ ಜವರೇಗೌಡ ಬಿನ್ ಚಂದ್ರೇಕಾಳೆಗೌಡ, ಸೇರಿದ ಮೂರು ಎಕರೆಯ ರಾಗಿ ಹೂಲ್ಲಿನ ಒಕ್ಕಣೆಗೆ ಸೋಮವಾರ ಮಧ್ಯಾಹ್ನ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.
ಹುಲ್ಲಿನ ಗುಡ್ಡೆ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ ಎಂದು ವಾರಸುದಾರರು ತಿಳಿಸಿದ್ದು, ಘಟನೆಯಿಂದ ಸುಮಾರು 60,000ಕ್ಕೂ ಹೆಚ್ಚು ನಷ್ಟವಾಗಿದೆ. ತಾಲೂಕು ಆಡಳಿತ ಈ ಘಟನೆಯನ್ನು ಪರಿಗಣಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಶಿವೇಗೌಡ, ವಿಜಿ, ಮೊಗಣ್ಣಗೌಡ, ವೆಂಕಟೇಶ್, ರತ್ನಮ್ಮ, ಮಂಜಮ್ಮ, ಸೇರಿದಂತೆ ಉಪಸ್ಥಿತರಿದ್ದರು.
ವರದಿ: ಮಂಜು ಶ್ರವಣೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy