nammatumakuru

    Subscribe to Updates

    Get the latest creative news from FooBar about art, design and business.

    What's Hot

    ಜು.28 ರಂದು ಅರಳಿಮರದಡಿಯಲ್ಲಿ ‘ಮೊಳಗಲಿ ಜಾನಪದ’: ಸಂಗೀತ–ಸಾಂಸ್ಕೃತಿಕ ಕಾರ್ಯಕ್ರಮ

    July 23, 2026

    ಪರ್ಯಾಯ ವ್ಯವಸ್ಥೆ ಮಾಡದೆ ತೆರವು ಮಾಡಬೇಡಿ: ಬೀದಿಬದಿ ವ್ಯಾಪಾರಿಗಳ ಸಂಘ ಮನವಿ

    July 23, 2026

    ಚಿಕ್ಕನಾಯಕನಹಳ್ಳಿ: ಕುಡಿಯುವ ನೀರಿನ ವ್ಯವಸ್ಥೆ: ಮೂಲ ಸೌಕರ್ಯಕ್ಕೆ ಸೂಚನೆ

    July 23, 2026
    Facebook Twitter Instagram
    ಟ್ರೆಂಡಿಂಗ್
    • ಜು.28 ರಂದು ಅರಳಿಮರದಡಿಯಲ್ಲಿ ‘ಮೊಳಗಲಿ ಜಾನಪದ’: ಸಂಗೀತ–ಸಾಂಸ್ಕೃತಿಕ ಕಾರ್ಯಕ್ರಮ
    • ಪರ್ಯಾಯ ವ್ಯವಸ್ಥೆ ಮಾಡದೆ ತೆರವು ಮಾಡಬೇಡಿ: ಬೀದಿಬದಿ ವ್ಯಾಪಾರಿಗಳ ಸಂಘ ಮನವಿ
    • ಚಿಕ್ಕನಾಯಕನಹಳ್ಳಿ: ಕುಡಿಯುವ ನೀರಿನ ವ್ಯವಸ್ಥೆ: ಮೂಲ ಸೌಕರ್ಯಕ್ಕೆ ಸೂಚನೆ
    • ರಾಹುಲ್ ಗಾಂಧಿಯವರ ಧ್ವನಿ ಅಡಗಿಸುವುದಕ್ಕೆ ಕೇಂದ್ರದ ಪ್ರಯತ್ನ: ಡಾ.ಜಿ.ಪರಮೇಶ್ವರ
    • ಕುಣಿಗಲ್: ಪಾವಸಂದ್ರ ಕಲ್ಲುಕ್ವಾರಿಯಲ್ಲಿ 12 ಜೀತದಾಳುಗಳ ರಕ್ಷಣೆ: ಉಪವಿಭಾಗಾಧಿಕಾರಿಗಳಿಂದ ವಿಮುಕ್ತಿ ಆದೇಶ
    • ನೀಟ್ ಅಕ್ರಮ ಖಂಡಿಸಿ ಜುಲೈ 25ಕ್ಕೆ ತಿಪಟೂರಿನಲ್ಲಿ ಧರಣಿ ಸತ್ಯಾಗ್ರಹ: ಸಿ.ಬಿ. ಶಶಿಧರ್
    • ಹಿರಿಯ ಪತ್ರಕರ್ತೆ, ಜಿ.ಪಂ. ಮಾಜಿ ಅಧ್ಯಕ್ಷೆ ಕಮಲಾ ಗಂಗಹನುಮಯ್ಯ ವಿಧಿವಶ
    • ಸರಗೂರಿನಲ್ಲಿ ಅಕ್ರಮ ಕೇರಳ ಲಾಟರಿ ದಂಧೆ ಜಾಲ ಪತ್ತೆ: ಇಬ್ಬರು ಆರೋಪಿಗಳ ಬಂಧನ, 1.44 ಲಕ್ಷ ಮೌಲ್ಯದ ಟಿಕೆಟ್ ವಶ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕೊಚ್ಚೆ ಗುಂಡಿಯಂತಿರುವ ನಾಲಕ್ಕೆ ನೀರು ಹರಿಸಲು ಮುಂದಾದ ಜಿಲ್ಲಾಡಳಿತ:  ಹಿರಿಯೂರು ನಾಗರಿಕರಿಂದ ವ್ಯಾಪಕ ಆಕ್ರೋಶ
    ಜಿಲ್ಲಾ ಸುದ್ದಿ February 4, 2022

    ಕೊಚ್ಚೆ ಗುಂಡಿಯಂತಿರುವ ನಾಲಕ್ಕೆ ನೀರು ಹರಿಸಲು ಮುಂದಾದ ಜಿಲ್ಲಾಡಳಿತ:  ಹಿರಿಯೂರು ನಾಗರಿಕರಿಂದ ವ್ಯಾಪಕ ಆಕ್ರೋಶ

    By adminFebruary 4, 2022No Comments3 Mins Read
    nala

    ಹಿರಿಯೂರು:  ವಿ ವಿ ಸಾಗರ ಅಚ್ಚುಕಟ್ಟು ಪ್ರದೇಶದಲ್ಲಿ ಬೇಸಿಗೆ ಹಂಗಾಮಿನ ಕೃಷಿ ಬೆಳೆಗೆ ಅವಶ್ಯಕತೆಯಿರುವುದರಿಂದ ನೀರು ಹರಿಸಲು ಚಿತ್ರದುರ್ಗ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಚಿತ್ರದುರ್ಗ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಫೆಬ್ರವರಿ 4 ರಂದು ವಿವಿ ಸಾಗರದ ಅಚ್ಚುಕಟ್ಟು ಪ್ರದೇಶಗಳಿಗೆ ಇಂದು ಹರಿಸಲಿದ್ದಾರೆ ಆದರೆ , ಆದರೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ವಿವಿ ನಾಲವನ್ನು ಅಚ್ಚುಕಟ್ಟು ಗೊಳಿಸದೆ ಪ್ಲಾಸ್ಟಿಕ್ , ಗಾಜು , ಕಸಕಡ್ಡಿ ತುಂಬಿರುವಂತಹ ನಾಲಕ್ಕೆ ನೀರು ಹರಿಸಲು ಸಿದ್ಧತೆ ಮಾಡಿದ್ದಾರೆ ಎಂದು ಇಲ್ಲಿನ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಹಿರಿಯೂರು ತಾಲ್ಲೂಕಿನ  ವಿ ವಿ ಸಾಗರದ ಅಚ್ಚುಕಟ್ಟು ಪ್ರದೇಶದಲ್ಲಿ ಬೇಸಿಗೆ ಹಂಗಾಮಿನ ಕೃಷಿ ಬೆಳೆಗೆ ಅವಶ್ಯಕತೆಯಿರುವ ಹಿನ್ನೆಲೆಯಲ್ಲಿ ಫೆ4ರಂದು ಇಂದು  ನೀರು ಹರಿಸಲು ಆದೇಶಿಸಿದೆ . ಹಾಲಿ ಶೇಂಗಾ , ಮೆಕ್ಕಜೋಳ ಮತ್ತು ಹತ್ತಿ ಹಾಗೂ ಅಡಿಕೆ, ತೆಂಗು ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಳಿಗೆ ನೀರಿನ ಅವಶ್ಯಕತೆ ಇದೆ . ಆದರೆ ತ್ಯಾಜ್ಯ ವಸ್ತುಗಳ ಹಾಗೂ ಫೈರುಗಳು ಬೆಳೆದಿರುವ ನಾಲೆಗಳ ಹೂಳು ತೆಗೆದು ಸ್ವಚ್ಛಗೊಳಿಸದೇ ನೀರು ಹರಿಸಲು ಮುಂದಾಗಿರುವುದು ಅವೈಜ್ಞಾನಿಕ. ಅಲ್ಲದೇ ಕೊನೆಯ ಭಾಗದವರೆಗೂ ನೀರು ಸರಗವಾಗಿ ಹೋಗುವುದು ಅನುಮಾನವಾಗಿದೆ  ಎನ್ನುವ ಅಭಿಪ್ರಾಯಗಳು ಇದೀಗ ಕೇಳಿ ಬಂದಿವೆ.

    ತಂಗುದಾಣವಾಗಿರುವ  ನಗರದ ಟಿ.ಬಿ ವೃತ್ತದ ಹಾಗೂ ಹುಳಿಯಾರ ರಸ್ತೆಯ ಎರಡು ಕಡೆಗಳಲ್ಲಿ ಹಾದು ಹೋಗುವ ವಿವಿಸಾಗರದ ಎಡ ಹಾಗೂ ಬಲದಂಡೆ ನಾಲೆಗಳು ಕಸಕಡ್ಡಿಯ ರಾಶಿ , ಪ್ಲಾಸ್ಟಿಕ್ , ಗಾಜು , ಬಟ್ಟೆಬರೆಗಳು , ಮನೆಗಳ ಚರಂಡಿ ನೀರು , ಗಾಜಿನ ಬಾಟಲು , ಬೇಡವಾದ ಎಲ್ಲಾ ರೀತಿಯ ವಸ್ತುಗಳು ಸೇರಿದಂತೆ ತ್ಯಾಜ್ಯವಸ್ತುಗಳಿಂದ ಕೂಡಿದೆ. ಕೊಳಚೆ ನೀರು ನಿಂತು ನಾಲೆಯುದ್ದಕ್ಕೂ ನಾಚಿಕಟ್ಟಿ ಹಂದಿಗಳು ಉರುಳಾಡುವಂತಹ ಕೊಳಚೆ ಪ್ರದೇಶವಾಗಿದೆ. ಅಲ್ಲಲ್ಲಿ ಎತ್ತರಕ್ಕೆ ಬೆಳೆದು ನಿಂತಿರುವ ಕಳೆ, ಪೈರು, ಗಿಡಗಂಟೆಗಳು , ಮುಳ್ಳಿನ ಗಿಡಗಳಿವೆ.  ಇಂತಹ ವ್ಯವಸ್ಥೆಯಲ್ಲಿ ನಾಲೆ ಸ್ವಚ್ಛಗೊಳಿಸದೇ ನೀರು ಹರಿಸಿದರೆ , ನಾಲೆಯಲ್ಲಿನ ಗಲೀಜೆಲ್ಲವೂ ಹೊಲಗಳಿಗೆ ಸೇರುತ್ತದೆ ಎಂದು ಜನರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

    ಈ ಬಾರಿ ಮ್ಯಾನುಯಲ್ ವರ್ಕರ್ ನೀಡಿದ್ದು , ಕಳೆದ ಎರಡು ತಿಂಗಳಿಂದ ಎರಡು ನಾಲೆಯಲ್ಲಿ ಬೆಳೆದಿರುವ ಜಂಗಲ್ ಹಾಗೂ ಗಿಡಗಂಟೆ ತೆಗೆಸಲಾಗಿದೆ .  ಆದರೆ ನಾಲೆ ಹೂಳು 2-3 ವರ್ಷಗೊಳಿಗೊಮ್ಮೆ ಮಾತ್ರ ತೆಗೆಯುತ್ತೇವೆ . ಪ್ರತಿ ವರ್ಷದಂತೆ ಹೂಳು ತೆಗೆಯಲು ಅನುದಾನ ನೀಡುವುದಿಲ್ಲ .   ಇದರಿಂದ ರೈತರ ಬೆಳೆಗಳಿಗೂ ಕೆಲವು ರೋಗಗಳು ತಗುಲುವ ಸಾಧ್ಯತೆಯಿದೆ .  ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ನಾಲೆಯ ಮೂಲಕ ಅಚ್ಚುಕಟ್ಟೆ ಪ್ರದೇಶಗಳಿಗೆ ನೀರು ಹರಿಸುವ ಸಮಯದಲ್ಲಿ ನೀರಾವರಿ 2358 ನಾಲೆಯಲ್ಲಿ ಹೂಳು ತೆಗೆಸುವ ಕಾರ್ಯ ನಡೆಸಿದರೂ ಅದು ಕೇವಲ ನಾಮಾಕವಸ್ಥೆಗೆ ಮಾತ್ರ ಕೆಲಸ ಮಾಡಿತ್ತು .

    ನೀರು ಹರಿಸುವ ಕುರಿತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ಹೇಳಿದ್ರೆ, ನಾಲೆ ಸ್ವಚ್ಛಗೊಳಿಸಿ , ನೀರು ಹರಿಸಬೇಕು . ಗಡಿ ಭಾಗದ ಪ್ರತಿಯೊಬ್ಬ ತನ ಜಮೀನಿಗೂ ನೀರು ಹಾಯಿಸಬೇಕು ಎಂದು , ಅವರು ಕೂಡಾ ಎಲ್ಲಾ ಸಿದ್ಧತೆ ಮಾಡಿಕೊಂಡು ನೀರು ಹರಿಸುತ್ತೇವೆ ಎಂದಿದ್ದರು .

    ಆದರೆ ನಾಲೆಯಲ್ಲಿ ಹೂಳು ತೆಗೆದಿರುವುದು ಎಲ್ಲಿಯೂ ಕಂಡುಬಂದಿಲ್ಲ . ಇದರಿಂದ ನೀರು ಪೋಲಾದರೆ ಅಧಿಕಾರಿಗಳೇ ಹೊಣೆಗಾರರು .ಎಂಬುದಾಗಿ ತಾಲ್ಲೂಕಿನ ರೈತರು ಸರ್ಕಾರದ ಮೇಲೆ ತೀವ್ರ ಬೇಸಾರ ವ್ಯಕ್ತಪಡಿಸಿದ್ದಾರೆ.

    ಆದರೆ ತಿಂಗಳುಗಳು ಕಳೆದರೂ ವಿಲೇವಾರಿ ಮಾಡಲಿಲ್ಲ . ಕೊನೆಗೆ ನಿವಾಸಿಗಳು ಹಾಗೂ ಸಾರ್ವಜನಿಕರ ದೂರುಗಳಿಗೆ ಬೇಸತ್ತ ನೀರಾವರಿ ಇಲಾಖೆ ಅಧಿಕಾರಿಗಳು ಅದನ್ನೇಲ್ಲವನ್ನು ಬೇರೆಕಡೆಗೆ ವೀಲೆವಾರಿ ಮಾಡದೇ ಪುನಃ ನಾಲೆಗೆ ತಳ್ಳಿದರು . ಇದರಿಂದ ನಾಲೆಗಳು ಇನ್ನಷ್ಟೂ ಗಲೀಜು ಆಗಿವೆ. ಒಂದು ವರ್ಷದಿಂದ ಸಾಕಷ್ಟು ತಾಜ್ಯ ವಸ್ತುಗಳು ಸಾಲೆಯಲ್ಲಿ ತುಂಬಿವೆ . ಆದರೂ ಅಧಿಕಾರಿಗಳು ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗುತ್ತಿಲ್ಲ  ಎನ್ನುವ ಆರೋಪ ಕೇಳಿ ಬಂದಿದೆ.

     ಪ್ರಸ್ತುತ ಜಲಾಶಯದಲ್ಲಿ 124.60 ಅಡಿ ನೀರು ಸಂಗ್ರಹವಿದ್ದು , ಅಚ್ಚುಕಟ್ಟು ಪ್ರದೇಶಕ್ಕೆ ನೀರಿನ ಅವಶ್ಯಕತೆಯಿಂದ ಫೆ.4 ರಿಂದ 30 ದಿನಗಳವರೆಗೆ ನೀರು ಹರಿಸಲು ಚಿತ್ರದುರ್ಗ ಜಿಲ್ಲಾಧಿಕಾರಿ ಹಾಗೂ ನೀರಾವರಿ ಸಲಹಾ ಸಮಿತಿ ಆದೇಶ ನೀಡಿ , ನೀರು ನಿರ್ವಹಣೆ ಮಾಡಲು ಹಾಗೂ ಪೋಲಾಗದಂತೆ ಸೂಕ್ತ ಕಾನೂನು ಸುವ್ಯವಸ್ಥೆ ಮತ್ತು ಎಲ್ಲಾ ರೀತಿಯ ಮುಂಜಾಗ್ರತೆ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದ್ದರೂ , ಅಧಿಕಾರಿಗಳು ಮಾತ್ರ ಕ್ರಮಗಳನ್ನು ಕೈಗೊಳ್ಳದೇ ನೀರು ಹರಿಸಲು ಮುಂದಾಗಿದ್ದಾರೆ .

     ಇದರಿಂದ ನೀರು ಹೆಚ್ಚು ಸೋಲಾಗುವುದರ ಜತೆಗೆ ಜಮೀನುಗಳಿಗೆ ಸರಗಳವಾಗಿ ನೀರು ತಲುಪುವುದು ಕಷ್ಟ ಅಡ್ಡ ಹಾದಿಯಲ್ಲಿ ಎಲ್ಲೆಡೆ ಹುದು ಅಪವ್ಯಯವಾಗಲಿದೆ ಎಂದು ಇಲ್ಲಿನ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

    ವರದಿ: ಮುರುಳಿಧರನ್ ಆರ್. ಹಿರಿಯೂರು ( ಚಿತ್ರದುರ್ಗ ).


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB


    Provided by
    Provided by
    admin
    • Website

    Related Posts

    ಸರಗೂರಿನಲ್ಲಿ ಅಕ್ರಮ ಕೇರಳ ಲಾಟರಿ ದಂಧೆ ಜಾಲ ಪತ್ತೆ: ಇಬ್ಬರು ಆರೋಪಿಗಳ ಬಂಧನ, 1.44 ಲಕ್ಷ ಮೌಲ್ಯದ ಟಿಕೆಟ್ ವಶ

    July 22, 2026

    ಜ್ಞಾನ ಪ್ರಕಾಶ್ ಸ್ವಾಮೀಜಿ ಜನ್ಮದಿನ ಆಚರಣೆ ಅಂಗವಾಗಿ ಮಕ್ಕಳಿಗೆ ನೋಟ್‌ ಬುಕ್ ವಿತರಣೆ

    July 22, 2026

    ಪ.ಪಂ. ಮಾಜಿ ಅಧ್ಯಕ್ಷ ಸರಗೂರು ಶಿವಣ್ಣ ಅವರ 63ನೇ ಜನ್ಮದಿನಾಚರಣೆ

    July 22, 2026

    Leave A Reply Cancel Reply

    Our Picks

    ನೀಟ್ ಅಕ್ರಮ: ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ: ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ

    July 21, 2026

    ಕೇಂದ್ರ ಸರ್ಕಾರವು ತಕ್ಷಣವೇ ಸೋನಮ್ ವಾಂಗ್ಚುಕ್ ಜೊತೆ ಚರ್ಚಿಸಲು ಆಗ್ರಹಿಸಿ ರಾಷ್ಟ್ರಪತಿಯವರಿಗೆ ಮನವಿ: ತುಮಕೂರಿನಲ್ಲಿ ಆನ್‌ ಲೈನ್ ಸಹಿ ಸಂಗ್ರಹ

    July 18, 2026

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಜು.28 ರಂದು ಅರಳಿಮರದಡಿಯಲ್ಲಿ ‘ಮೊಳಗಲಿ ಜಾನಪದ’: ಸಂಗೀತ–ಸಾಂಸ್ಕೃತಿಕ ಕಾರ್ಯಕ್ರಮ

    July 23, 2026

    ತುಮಕೂರು: ತುರುವೇಕೆರೆ ತಾಲೂಕಿನ ದಂಡಿನಶಿವಾರ ಹೋಬಳಿ ಕೊಂಡಜ್ಜಿಯಲ್ಲಿ ಜು.28 ರಂದು ಅರಳಿಮರದಡಿಯಲ್ಲಿ ‘ಮೊಳಗಲಿ ಜಾನಪದ’ ಶೀರ್ಷಿಕೆಯಡಿಯಲ್ಲಿ ಸಂಗೀತ-ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.…

    ಪರ್ಯಾಯ ವ್ಯವಸ್ಥೆ ಮಾಡದೆ ತೆರವು ಮಾಡಬೇಡಿ: ಬೀದಿಬದಿ ವ್ಯಾಪಾರಿಗಳ ಸಂಘ ಮನವಿ

    July 23, 2026

    ಚಿಕ್ಕನಾಯಕನಹಳ್ಳಿ: ಕುಡಿಯುವ ನೀರಿನ ವ್ಯವಸ್ಥೆ: ಮೂಲ ಸೌಕರ್ಯಕ್ಕೆ ಸೂಚನೆ

    July 23, 2026

    ರಾಹುಲ್ ಗಾಂಧಿಯವರ ಧ್ವನಿ ಅಡಗಿಸುವುದಕ್ಕೆ ಕೇಂದ್ರದ ಪ್ರಯತ್ನ: ಡಾ.ಜಿ.ಪರಮೇಶ್ವರ

    July 23, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.