ತುರುವೇಕೆರೆ : ತಾಲೂಕಿನ ದಂಡಿನಶಿವರ ಹೋಬಳಿ ,ಕೊಂಡಜ್ಜಿ ಗ್ರಾಮ ಪಂಚಾಯಿತಿಯ ನೂತನ ಉಪಾಧ್ಯಕ್ಷರಾಗಿ ,ಕಲ್ಲುಬೊರನಹಳ್ಳಿ ರವಿಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದಿನ ಉಪಾಧ್ಯಕ್ಷ ರಾದ ಎಂ.ಆರ್ , ಶೀಲಾ ನವೀನ್ ಕುಮಾರ್ ರವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಲ್ಲು ಬೋರನಹಳ್ಳಿ ರವಿಕುಮಾರ್ ಒಬ್ಬರೇ ನಾಮಪತ್ರ ಸಲ್ಲಿಸಿದರು. ಹೀಗಾಗಿ ಚುನಾವಣಾಧಿಕಾರಿ ನಯೀಮ್ ಉನ್ನಿಸ್ಸಾ ರವರು ಕಲ್ಲಬೋರನಹಳ್ಳಿ ರವಿಕುಮಾರ್ ಉಪಾಧ್ಯಕ್ಷ ರೆಂದು ಘೋಷಿಸಿದರು .
ರವಿ ಕುಮಾರ್ ಅವರನ್ನು ಪಂಚಾಯ್ತಿ ಅಧ್ಯಕ್ಷರಾದ ಸುಶೀಲಮ್ಮ ,ಬಸವರಾಜು , ಸದಸ್ಯರುಗಳಾದ , ಶಿವಮ್ಮ , ಕೀರ್ತಿ, ಜೀವನ್ ಗೌಡ, ಎಂ.ಆರ್.ಶೀಲಾ., ನಾಗರಾಜು , ನಾಗವೇಣಿ , ಗಂಗಾನಮ್ಮ , ಶ್ರೀನಿವಾಸ್ ಪ್ರಸಾದ್ , ಶೋಭಾ, ಮಹಾಲಿಂಗಯ್ಯ , ದೇವರಾಜು, ಜಯಲಕ್ಷ್ಮಿ., ಭಾಮಾ , ವಿ.ಎಸ್.ಎಸ್.ಎನ್. ಅಧ್ಯಕ್ಷರಾದ ಪೈಂಟ್ ರಂಗನಾಥ್ , ನಿರ್ದೇಶಕರಾದ ನಟರಾಜ್, ಹರಿಕಾರನಹಳ್ಳಿ ಮಂಜಣ್ಣ ಮುಂತಾದವರು ಅಭಿನಂದನೆ ಸಲ್ಲಿಸಿದರು.
ಚುನಾವಣೆ ಯಲ್ಲಿ .ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಮೇಶ್ ಸಹಕರಿಸಿದರು , ಉಪಾಧ್ಯಕ್ಷರಾಗಿ , ರವಿಕುಮಾರ್ ರವರನ್ನು ಘೋಷಣೆ ಮಾಡಿದ ತಕ್ಷಣ ಅಭಿಮಾನಿಗಳು ಪಟಾಕಿ ಸಿಡಿಸಿ ,ಸಿಹಿ ಹಂಚಿ ಸಂತಸ ಹಂಚಿಕೊಂಡರು.
ವರದಿ: ಸುರೇಶ್ ಬಾಬು , ತುರುವೇಕೆರೆ .
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz