nammatumakuru

    Subscribe to Updates

    Get the latest creative news from FooBar about art, design and business.

    What's Hot

    ಹುಳಿಯಾರು | ರೈತರ ಶಾಪ ನಿಮಗೆ ತಟ್ಟದೇ ಇರಲಾರದು: ಅಧಿಕಾರಿಗಳಿಗೆ ಸಬ್ಬೇನಹಳ್ಳಿ ಶ್ರೀನಿವಾಸ್ ಹಿಡಿಶಾಪ

    October 23, 2025

    ಹೋರಿ ತಿವಿದು ಓರ್ವ ವಯೋವೃದ್ಧ ಸಾವು

    October 23, 2025

    ಆತ ನೇಣಿಗೆ ಶರಣಾದ, ಬೆಳಗೆದ್ದು ನೋಡಿದ ಪ್ರಿಯತಮೆಯೂ ನೇಣಿಗೆ ಶರಣಾದಳು:  ಸಣ್ಣ ಜಗಳಕ್ಕೆ ಇಬ್ಬರ ಪ್ರಾಣ ಬಲಿ

    October 22, 2025
    Facebook Twitter Instagram
    ಟ್ರೆಂಡಿಂಗ್
    • ಹುಳಿಯಾರು | ರೈತರ ಶಾಪ ನಿಮಗೆ ತಟ್ಟದೇ ಇರಲಾರದು: ಅಧಿಕಾರಿಗಳಿಗೆ ಸಬ್ಬೇನಹಳ್ಳಿ ಶ್ರೀನಿವಾಸ್ ಹಿಡಿಶಾಪ
    • ಹೋರಿ ತಿವಿದು ಓರ್ವ ವಯೋವೃದ್ಧ ಸಾವು
    • ಆತ ನೇಣಿಗೆ ಶರಣಾದ, ಬೆಳಗೆದ್ದು ನೋಡಿದ ಪ್ರಿಯತಮೆಯೂ ನೇಣಿಗೆ ಶರಣಾದಳು:  ಸಣ್ಣ ಜಗಳಕ್ಕೆ ಇಬ್ಬರ ಪ್ರಾಣ ಬಲಿ
    • ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲ್ಲ: ಸಿಎಂ ಸಿದ್ದರಾಮಯ್ಯ
    • ಬಿಜೆಪಿ–ಜೆಡಿಎಸ್ ಪಕ್ಷಗಳ ಸಮನ್ವಯ ಸಮಿತಿ ರಚನೆಗೆ ಚಿಂತನೆ: ಬಿ.ವೈ.ವಿಜಯೇಂದ್ರ
    • ದೀಪಾವಳಿ ಸಂಭ್ರಮದ ನಡುವೆಯೇ ಮಚ್ಚಿನಿಂದ ಕೊಚ್ಚಿ ಪತ್ನಿಯ ಬರ್ಬರ ಹತ್ಯೆ
    • ಅಕ್ರಮ ಗೋ ಸಾಗಾಟ: ಆರೋಪಿಯ ಮೇಲೆ ಪೊಲೀಸರಿಂದ ಗುಂಡಿನ ದಾಳಿ
    • ಪಟಾಕಿ ಸಿಡಿತ: 16 ಜನರಿಗೆ ಗಾಯ: ದೃಷ್ಟಿ ಕಳೆದುಕೊಂಡ ಹಲವರು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕೊರಟಗೆರೆ: ಹಲವು ಗೊಂದಲಗಳ ನಡುವೆಯು ಬಹಿರಂಗ ಹರಾಜು ಪ್ರಕ್ರಿಯೆ ಯಶಸ್ವಿ
    ಕೊರಟಗೆರೆ April 3, 2025

    ಕೊರಟಗೆರೆ: ಹಲವು ಗೊಂದಲಗಳ ನಡುವೆಯು ಬಹಿರಂಗ ಹರಾಜು ಪ್ರಕ್ರಿಯೆ ಯಶಸ್ವಿ

    By adminApril 3, 2025No Comments2 Mins Read
    haraju

    ಕೊರಟಗೆರೆ: ಶ್ರೀ ಸಿದ್ದೇಶ್ವರ ಸ್ವಾಮಿ ದೇವಾಲಯದ ದಾಸೋಹ ನಿಲಯದ ಉಗ್ರಾಣದಲ್ಲಿ ಹೆಚ್ಚುವರೆಯಾಗಿ ಸಂಗ್ರಹಿಸಿರುವ ಅಕ್ಕಿ, ಬೆಲ್ಲ, ಹುಣಸೆ ಹಣ್ಣು, ರಾಗಿ ಮತ್ತು ತೆಂಗಿನಕಾಯಿ, ಸ್ಥಳೀಯ ಸಾರ್ವಜನಿಕರ ಮುಂದೆ ಕೊರಟಗೆರೆ ಗ್ರೇಡ್ 2 ತಹಶೀಲ್ದಾರ್  ರಾಮ್ ಪ್ರಸಾದ್ ಹಲವು ಗೊಂದಲಗಳನ್ನು ಬಗೆಹರಿಸಿ ಸ್ಥಳೀಯ ಸಾರ್ವಜನಿಕರ ಮುಂದೆ ಯಶಸ್ವಿಯಾಗಿ ಹರಾಜು ಪ್ರಕ್ರಿಯೆ ನಡೆಸಿದರು.

    ಶ್ರೀ ಸಿದ್ದೇಶ್ವರ ಸ್ವಾಮಿ ದೇವಾಲಯದ ದಾಸೋಹ ಭವನದ ಆವರಣದಲ್ಲಿ ಬಹಿರಂಗ ಹರಾಜು ಪ್ರಕ್ರಿಯೆ ಸ್ಥಳೀಯ ಸಾರ್ವಜನಿಕರ ಇಚ್ಛೆಯಂತೆ ಷರತ್ತು ಬದ್ಧವಾಗಿ ನಡೆಯಿತು.ಬಹಿರಂಗ ಹರಾಜು ಮಾಡುವ ಸಂದರ್ಭದಲ್ಲಿ ಸುಮಾರು 30 ಜನ ಠೇವಣಿದಾರರು ಬಹಿರಂಗ ಹರಾಜಿನಲ್ಲಿ ಪಾಲ್ಗೊಂಡಿದ್ದರು.


    Provided by
    Provided by
    Provided by

    ಸ್ಥಳೀಯ ಸಾರ್ವಜನಿಕರಿಗೆ ಮತ್ತು ರೈತರಿಗೆ ಹರಾಜು ಪ್ರಕ್ರಿಯೆಯಲ್ಲಿ ಸ್ಥಳೀಯರ ಇಚ್ಛೆಯಂತೆ ಪಾಲ್ಗೊಳ್ಳಲು ಗ್ರೇಡ್ 2 ತಹಶೀಲ್ದಾರ್ ರಾಮ್ ಪ್ರಸಾದ್ ಅವಕಾಶ ಮಾಡಿಕೊಟ್ಟರು.

    ಹೊರಗಡೆಯಿಂದ ಬಂದು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಠೇವಣಿದಾರರಿಗೆ ಸ್ಥಳೀಯರು.. ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡ ಘಟನೆಯೂ ನಡೆಯಿತು.

    ದಿನಾಂಕ: 26.3.2025 ರಂದು ಹಲವು ಗೊಂದಲಗಳಿಂದ ಮತ್ತು ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಕೈಗೊಳ್ಳಬೇಕಾದ ಕಾನೂನು ಕ್ರಮಗಳನ್ನು ಕೈಗೊಳ್ಳದೆ, ಬಹಿರಂಗವಾಗಿ ಹರಾಜು ಪ್ರಕ್ರಿಯೆ ನಡೆಸಲು ಮುಂದಾಗಿದ್ದ ಮುಜರಾಯಿ ಇಲಾಖೆಯ ಎಫ್. ಡಿ. ಎ. ಸೌಭಾಗ್ಯಮ್ಮ ನಡೆ ಖಂಡಿಸಿದ್ದ ಸಾರ್ವಜನಿಕರು.  ಗ್ರೇಡ್ 2 ತಹಶಿಲ್ದಾರ್ ರಾಮ್ ಪ್ರಸಾದ್ ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ತೀಕ್ಷ್ಣವಾಗಿ ಪರಿಶೀಲಿಸಿ ದಿನಾಂಕ ನಿಗದಿಪಡಿಸಿದ್ದರು ಅದರಂತೆ ಇಂದು ಬಹಿರಂಗ ಹರಾಜು ಯಶಸ್ವಿಯಾಗಿದೆ.

    ತುಮಕೂರು ಮಧುಗಿರಿ ಮತ್ತು ಇತರೆ ಭಾಗಗಳಿಂದ ಬಹಿರಂಗ ಹರಾಜಿನಲ್ಲಿ ಪಾಲ್ಗೊಳ್ಳಲು ಬಂದಿದ್ದ ಇಪ್ಪತ್ತಕ್ಕೂ ಹೆಚ್ಚು ಠೇವಣಿದಾರರಿಗೆ ತುಂಬು ಸಭೆಯಲ್ಲಿ ಸ್ಥಳೀಯರು ಗೇರಾವು ಹಾಕಿದರು.

    ಬೀಟ್ ನಲ್ಲಿ ಸ್ಥಳೀಯರನ್ನು ಬಿಟ್ಟು ಹೊರಗಡೆಯಿಂದ ಬಂದು ಯಾರು  ಭಾಗವಹಿಸಬಾರದೆಂದು ಆಕ್ರೋಶ ಹೊರ ಹಾಕಿದ ಸ್ಥಳೀಯರು,  ಬೀಟ್ ದಾರರು.  ಹೊರಗಡೆಯಿಂದ ಬಂದಂತಹ ಬೀಟ್ ದಾರರ ಮತ್ತು ಸ್ಥಳೀಯ ಸಾರ್ವಜನಿಕರ ಮಧ್ಯೆ ಗಲಾಟೆ  ಅತಿರೇಕಕ್ಕೇರಿತು.  ನಂತರ ಗ್ರೇಟ್ ತಹಶೀಲ್ದಾರ್ ರಾಮ್ ಪ್ರಸಾದ್ ಮಧ್ಯಪ್ರವೇಶಿಸಿ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಸ್ಥಳೀಯರ ಒತ್ತಾಯದಂತೆ ಸ್ಥಳೀಯರಿಗೆ ಮೊದಲ ಆದ್ಯತೆ ಎಂದು ತಿಳಿಸಿ ಬಹಿರಂಗ ಹರಾಜು ಪ್ರಕ್ರಿಯೆ ಪ್ರಾರಂಭಿಸಿದರು.

    ನಂತರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಗ್ರೇಟ್ 2 ತಹಶೀಲ್ದಾರ್ ರಾಮ್ ಪ್ರಸಾದ್, ಬಹಿರಂಗ ಹರಾಜಿನಲ್ಲಿ ಒಟ್ಟು ಐದು ದಿನಸಿ ಸಾಮಗ್ರಿಗಳನ್ನು ಮಾತ್ರ ಹರಾಜು ಮಾಡಲಾಗುತ್ತಿದ್ದು ಅದರಲ್ಲಿ ಅಕ್ಕಿ, ರಾಗಿ, ಹುಣಸೆ, ಬೆಲ್ಲ,  ಮತ್ತು ತೆಂಗಿನಕಾಯಿ ಇವುಗಳನ್ನು ಮಾತ್ರ ಬಹಿರಂಗವಾಗಿ ಹರಾಜು ಮಾಡಲಾಗಿದೆ. ಈ ಬಹಿರಂಗ ಹರಾಜಿನಲ್ಲಿ ಒಟ್ಟು 30 ಜನ ಬೀಟ್ ದಾರರು ಭಾಗವಹಿಸಿದ್ದಾರೆ, ಈ ಪೈಕಿ ಅಂತಿಮವಾಗಿ ಐದು ಜನ ಬೀಟ್ ದಾರರು ಈ ಬಹಿರಂಗ ಹರಾಜಿನಲ್ಲಿ ಯಶಸ್ವಿಯಾಗಿದ್ದಾರೆ. ಈ ಬಹಿರಂಗ ಹರಾಜಿನಲ್ಲಿ ಸ್ಥಳೀಯರು ಮೇಲುಗೈ ಸಾಧಿಸಿದ್ದಾರೆ ಎಂದರು.

    ವರದಿ: ಮಂಜುಸ್ವಾಮಿ ಎಂ.ಎನ್.,  ಕೊರಟಗೆರೆ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4                  Koratagere: Open auction process successful despite many confusions

    admin
    • Website

    Related Posts

    ಮಾವತ್ತೂರು ಸೊಸೈಟಿಗೆ 6 ಜನ ನಿರ್ದೇಶಕರ ರಾಜೀನಾಮೆ

    October 20, 2025

    ಮೀನಿನ ಬಲೆಗೆ ಸಿಲುಕಿ ಮಾನಸಿಕ ಅಸ್ವಸ್ಥ ಸಾವು

    October 19, 2025

    ತೋವಿನಕೆರೆ ಗ್ರಾ.ಪಂ. ಬಿಲ್‌ ಕಲೆಕ್ಟರ್ ಮಾರುತಿ ಮತ್ತು ಕಾರ್ಯದರ್ಶಿ ಸುಮಾ ಲೋಕಾಯುಕ್ತ ಬಲೆಗೆ

    October 16, 2025

    Comments are closed.

    Our Picks

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಚಿಕ್ಕನಾಯಕನಹಳ್ಳಿ

    ಹುಳಿಯಾರು | ರೈತರ ಶಾಪ ನಿಮಗೆ ತಟ್ಟದೇ ಇರಲಾರದು: ಅಧಿಕಾರಿಗಳಿಗೆ ಸಬ್ಬೇನಹಳ್ಳಿ ಶ್ರೀನಿವಾಸ್ ಹಿಡಿಶಾಪ

    October 23, 2025

    ಹುಳಿಯಾರು: ನೀವೆಲ್ಲಾ ಮನೆಯಲ್ಲಿ ಬೆಚ್ಚಗೆ ಇದ್ದು, ರೈತರನ್ನು ಮನೆಮಠ ಬಿಟ್ಟು ಅಹೋರಾತ್ರಿ ಧರಣಿ ಕೂರುವಂತೆ ಮಾಡಿದ್ದೀರಲ್ಲಾ, ಇದೇ ಏನು ರೈತರಿಗೆ…

    ಹೋರಿ ತಿವಿದು ಓರ್ವ ವಯೋವೃದ್ಧ ಸಾವು

    October 23, 2025

    ಆತ ನೇಣಿಗೆ ಶರಣಾದ, ಬೆಳಗೆದ್ದು ನೋಡಿದ ಪ್ರಿಯತಮೆಯೂ ನೇಣಿಗೆ ಶರಣಾದಳು:  ಸಣ್ಣ ಜಗಳಕ್ಕೆ ಇಬ್ಬರ ಪ್ರಾಣ ಬಲಿ

    October 22, 2025

    ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲ್ಲ: ಸಿಎಂ ಸಿದ್ದರಾಮಯ್ಯ

    October 22, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.