ವಿಶೇಷ ವರದಿ: ಮಂಜುಸ್ವಾಮಿ ಎಂ.ಎನ್.
ಕೊರಟಗೆರೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಇರಬೇಕಾದ ಕೊಠಡಿಗಳು ಇದೀಗ ಭೂತ ಬಂಗಲೆಯಂತಿವೇ.. ರಾತ್ರಿ ಸಮಯವಾದರೆ ಸಾಕು ಈ ಆಸ್ಪತ್ರೆಯ ವಟಾರದ ಕಡೆ ಸಾರ್ವಜನಿಕರು ಬರುವುದೇ ಇಲ್ಲ.. ಯಾಕೆಂದರೆ ರಾತ್ರಿಯಾದರೆ ಸಾಕು ಇಲ್ಲಿ ಪುಂಡ ಪೋಕರಿಗಳೇ ಈ ವಟಾರದ ಯಜಮಾನರಾಗಿರುತ್ತಾರೆ. ಅನೈತಿಕ ಚಟುವಟಿಕೆಗಳ ತಾಣವಾಗಿದೆ ಈ ಸರ್ಕಾರಿ ವೈದ್ಯರ ವಟಾರ..
ಕೊರಟಗೆರೆ ಪಟ್ಟಣದ ಹೃದಯ ಭಾಗದಲ್ಲಿರುವ ಸರ್ಕಾರಿ ಆಸ್ಪತ್ರೆ ಅದರ ಮುಂಭಾಗದಲ್ಲಿ ಇರುವ ವೈದ್ಯರ ಕೊಠಡಿಗಳ ಸ್ಥಿತಿ ಕೇಳೋರಿಲ್ಲ, ಕಳೆದ ಸುಮಾರು 30 ವರ್ಷಗಳಿಂದ ಇಲ್ಲಿ ಒಬ್ಬ ಯಾವ ವೈದ್ಯರು ಉಳಿದುಕೊಂಡಿಲ್ಲ.. ಕೆಲವು ವೈದ್ಯರು ಇಲ್ಲಿಯೇ ಬಾಡಿಗೆ ಮನೆ ಮಾಡಿಕೊಂಡು ಉಳಿದುಕೊಂಡಿದ್ದವರು ಕೂಡ ಇದೀಗ ನಮಗೆ ಕೊರಟಗೆರೆ ಆಸ್ಪತ್ರೆಯ ಸಹವಾಸವೇ ಬೇಡ ಎಂದು ಬೇರೆಡೆಗೆ ವರ್ಗಾವಣೆ ಮಾಡಿಕೊಂಡು ಹೋಗಿದ್ದಾರೆ .
ಇನ್ನು ಈ ಪಾಳು ಬಿದ್ದ ಕೊಠಡಿಗಳು ಪಾಪ ಆಸ್ಪತ್ರೆಯ ಸಿಬ್ಬಂದಿಗಳಿಗೆ ಅಷ್ಟೇ ಸೀಮಿತವಾಗಿದ್ದವು . ಇದೀಗ ಅವರು ಕೂಡ ಆ ಕೊಠಡಿಗಳಲ್ಲಿ ವಾಸವಾಗಿಲ್ಲ, ಇದಕ್ಕೆ ಕಾರಣ ಕೇಳಿದರೆ ನೀವು ಕೂಡ ಬೆಚ್ಚಿಬಿಳ್ತೀರಾ.. ಈ ಕೊಠಡಿಗಳು ವಾಸಕ್ಕೆ ಯೋಗ್ಯವಲ್ಲ ಎಂದು ಗೊತ್ತಿದ್ದರೂ ಕೂಡ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಟಿಎಚ್ ಒ ಕಣ್ಮುಚ್ಚಿ ಕುಳಿತಿದ್ದಾರೆ.
ಟಿಎಚ್ಒ ವಿಜಯಕುಮಾರ್ ಇಲ್ಲಿಗೆ ಬಂದು ಸುಮಾರು 15 ವರ್ಷಗಳು ಕಳೆದರೂ ಕೂಡ ಇಲ್ಲಿನ ಸರ್ಕಾರಿ ಆಸ್ಪತ್ರೆ ಹಾಗೂ ವೈದ್ಯರಿಗೆ ಬೇಕಾಗಿರುವ ಕೊಠಡಿಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ, ಇನ್ನು ಆಸ್ಪತ್ರೆಯ ಕಥೆ ಕೇಳ್ತಿರಾ ಅನೇಕ ವೈದ್ಯರ ಕೊರತೆ ಸಿಬ್ಬಂದಿ ಕೊರತೆ ಸೌಲಭ್ಯಗಳಂತೂ ಕೇಳಲೇಬೇಡಿ ಇಲ್ಲಿ ರಾತ್ರಿ ಸಮಯದಲ್ಲಿ ಇದುವರೆಗೂ ಕೂಡ ಒಬ್ಬ ವೈದ್ಯರು ಉಳಿದುಕೊಂಡಿಲ್ಲ.
ರಾತ್ರಿ ಸಮಯದಲ್ಲಿ ಏನೇ ಎಮರ್ಜೆನ್ಸಿ ಬಂದರೂ ತುಮಕೂರಿಗೆ ಬರೆದು ಕಳಿಸಿ ಬಿಡುತ್ತಾರೆ. ಉಳಿಯಬೇಕಾದ ಪ್ರಾಣಗಳು ಕೂಡ ರಸ್ತೆ ಮಧ್ಯದಲ್ಲಿ ಪ್ರಾಣ ಕಳೆದುಕೊಂಡಿರುವ ಎಷ್ಟೋ ಉದಾಹರಣೆಗಳು ನಮ್ಮ ಕಣ್ಣಮುಂದೆ ಇವೆ.. ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲೇ ಇಷ್ಟು ದೊಡ್ಡ ಜಾಗ ಇದ್ದರೂ ಕೂಡ ಇಲ್ಲಿ ವೈದ್ಯರಿಗೆ ನೂತನ ಕೊಠಡಿಗಳು ಯಾಕೆ ನಿರ್ಮಾಣ ಮಾಡಲು ಆಗಲಿಲ್ಲ..
ಉಸ್ತುವರಿ ಸಚಿವರು ಕ್ಷೇತ್ರದ ಶಾಸಕ ಡಾ. ಜಿ ಪರಮೇಶ್ವರ್ ಅವರ ಹೆಸರಿಗೆ ಕಪ್ಪುಚುಕ್ಕೆ ಇಡಲು ಈ ಟಿ ಹೆಚ್ ಓ ವಿಜಯಕುಮಾರ್ ಒಬ್ಬರೇ ಸಾಕು ಎನ್ನುತ್ತಿದ್ದಾರೆ ಇಲ್ಲಿನ ಸಾರ್ವಜನಿಕರು..