ಪಾವಗಡ : ಶುದ್ದ ಕುಡಿಯುವ ನೀರಿಗಾಗಿ ವಸತಿ ನಿಲಯ ವಿದ್ಯಾರ್ಥಿಗಳ ಪರದಾಡುತ್ತಿದ್ದು, ನೀರು ತರಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಕೈ ಮುರಿದುಕೊಂಡಿದ್ದು ಒಬ್ಬ ವಿದ್ಯಾರ್ಥಿಗೆ ಹಲ್ಲು ಉದುರಿರುವ ಘಟನೆ ಗಂಗಸಾಗರ ಗ್ರಾಮದ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಬೆಳಕಿಗೆ ಬಂದಿದೆ.
ಹೊಸದುರ್ಗ ಗ್ರಾಮದ 7ನೇ ತರಗತಿ ವಿದ್ಯಾರ್ಥಿ ಮಣಿಕಂಠ ನೀರಿಗಾಗಿ ಹೋಗಿ ಜಾರಿ ಬಿದ್ದು ಕೈಮುರಿದು ಕೊಂಡಿದ್ದು, ಈ ಬಗ್ಗೆ ಪ್ರಾಂಶುಪಾಲ ರಾಜ್ ಕುಮಾರ್ ಪೋಷಕರಿಗೂ ಮಾಹಿತಿ ನೀಡದೇ ನಿರ್ಲಕ್ಷ್ಯವಹಿಸಿದ್ದಾರೆನ್ನಲಾಗಿದೆ.
ಕಳೆದ ವಾರವೂ ಕೂಡ ಆರ್.ಡಿ.ರೋಪ್ಪ ಗ್ರಾಮದ ವಿದ್ಯಾರ್ಥಿ ನೀರಿಗಾಗಿ ಹೋಗಿ ಕೈ ಮುರಿದಿದ್ದು, ಚಿಕ್ಕಹಳ್ಳಿ ಗ್ರಾಮದ ವಿದ್ಯಾರ್ಥಿ ನೀರಿಗೆ ಹೋಗಿ ಜಾರಿ ಬಿದ್ದು ಹಲ್ಲು ಉದುರಿರುವ ಘಟನೆ ಕೂಡ ನಡೆದಿದೆ.
ಇಷ್ಟೆಲ್ಲ ಮಕ್ಕಳು ನೀರಿಗಾಗಿ ಪರದಾಡುತ್ತಿದ್ದರು ನೀರಿನ ಸಮಸ್ಯೆ ಬಗೆರಿಸದ ನೀಲಯಪಾಲಕರು, ಪ್ರಾಂಶುಪಾಲರು, ವಸತಿ ಶಾಲೆಯ ಸಮಸ್ಯೆ ಪೋಷಕರಿಗೆ ಹೇಳದಂತೆ ಹೆದರಿಸುತ್ತಾರೆಂಬುದು ತಿಳಿದು ಬಂದಿದೆ.
ಮಕ್ಕಳಿಗೆ ಗುಣಮಟ್ಟದ ತಿಂಡಿ ಉಟ ನೀಡುವುದಿಲ್ಲ, ಹಾಲು ಕೂಡ ಕಳಪೆ ವಿತರಣೆ ವಸತಿ ನಿಲಯದಲ್ಲಿ ನೂರಾರು ಸಮಸ್ಯೆ ಮಕ್ಕಳ ಬದುಕು ಅಂತಂತ್ರ.
ವರದಿ: ರಾಜೇಶ್ ರಂಗನಾಥ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz