ತುಮಕೂರು: ಕುಣಿಗಲ್ ನ ಐಸ್ಕ್ರೀಂ ಫ್ಯಾಕ್ಟರಿ ಮಾಲೀಕನ ಸಾವು ಪ್ರಕರಣ ಸ್ಪೋಟಕ ಟ್ವಿಸ್ಟ್ ಪಡೆದುಕೊಂಡಿದ್ದು, ಸಿಸಿಟಿವಿಯಲ್ಲಿ ನಾಗೇಶ್ ಸಾವಿನ ಅಸಲಿ ಕಹಾನಿ ಬೆಳಕಿಗೆ ಬಂದಿದೆ.
ಐಸ್ಕ್ರೀಂ ಫ್ಯಾಕ್ಟರಿ ಮಾಲೀಕನ ಸಾವು ಅಸಹಜ ಸಾವಲ್ಲ, ಬದಲಾಗಿ ಅದು ಕೊಲೆ ಎಂಬುದು ಪತ್ತೆಯಾಗಿದೆ. ಹೆಬ್ಬೂರಿನ ತಿಮ್ಮಸಂದ್ರ ಗ್ರಾಮದ ನಿವಾಸಿಯಾಗಿದ್ದ ಐಸ್ಕ್ರೀಂ ಫ್ಯಾಕ್ಟರಿ ಮಾಲೀಕ ನಾಗೇಶ್ (58) ತನ್ನದೇ ಫ್ಯಾಕ್ಟರಿಯಲ್ಲಿ ಸಾವನ್ನಪ್ಪಿದ್ದರು. ವಿದ್ಯುತ್ ಅವಘಡದಿಂದ ಈ ಸಂಭವಿಸಿದೆ ಎಂದು ಹೇಳಲಾಗಿತ್ತು. ಆದರೆ, ಇದೀಗ ಸಿಸಿ ಕ್ಯಾಮರಾ ದೃಶ್ಯಗಳಿಂದ ಇದೊಂದು ಮರ್ಡರ್ ಎನ್ನುವುದು ಬಯಲಾಗಿದೆ.
ಮೇ 10ರಂದು ಈ ಘಟನೆ ನಡೆದಿತ್ತು. ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ವೇಳೆ ನಾಗೇಶ್ ಹತ್ಯೆ ಸಂಗತಿ ಬಯಲಾಗಿದೆ. ಮಗನಿಂದಲೇ ಹತ್ಯೆ ನಡೆದಿದೆಯಾ ಎಂಬ ಶಂಕೆ ಸದ್ಯ ಪೊಲೀಸರಲ್ಲಿದೆ. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫ್ಯಾಕ್ಟರಿಯಲ್ಲಿ ಇಟ್ಟಿದ್ದ ಹಣವನ್ನು ತಂದೆಗೆ ಕಾಣದಂತೆ ಹಣವನ್ನು ಮಗ ಸೂರ್ಯ ತೆಗೆದುಕೊಳ್ಳುತ್ತಿದ್ದನು. ಇದು ನಾಗೇಶ್ ಗೆ ಗೊತ್ತಾದ ಬಳಿಕ ಅಪ್ಪ ಮಗನ ನಡುವೆ ಜಗಳವಾಗಿತ್ತು. ಸೂರ್ಯನ ತಂಗಿಯನ್ನ ಲವ್ ಮಾಡುತ್ತಿದ್ದ ಸಂಜಯ ಎಂಬಾತನಿಗೆ ಸೂರ್ಯ ಸಪೋರ್ಟ್ ಮಾಡಿದ್ದ. ಈ ವಿಚಾರಕ್ಕೂ ನಾಗೇಶ್ ವಿರೋಧ ವ್ಯಕ್ತಪಡಿಸಿದ್ದ. ಸಂಜಯ್ ಮನೆಗೆ ಬರುವುದಕ್ಕೆ ನಾಗೇಶ್ ವಿರೋಧ ವ್ಯಕ್ತಪಡಿಸಿದ್ದ ಅಲ್ಲದೇ, ಮನೆ ಬಳಿ ಬರದಂತೆ ಸಂಜಯ್ ಗೆ ಎಚ್ಚರಿಕೆ ನೀಡಿದ್ದ ಎನ್ನಲಾಗಿದೆ.
ನಾಗೇಶ್ ಹತ್ಯೆಗೆ ಸಂಜಯ್ ಮತ್ತು ಸೂರ್ಯ ಎರಡು ಬಾರಿ ಕೊಲೆ ಯತ್ನ ಮಾಡಿದ್ದರು. ಒಂದು ಬಾರಿ ಅಪಘಾತ ಮಾಡಿಸಿ ಹತ್ಯೆಗೆ ಯತ್ನಿಸಿದ್ದರು. ಅಪಘಾತದಲ್ಲಿ ನಾಗೇಶ್ ಬಚಾವ್ ಆಗಿದ್ದ. ನಂತರ ನಾಗೇಶ್ ಮೇಲೆ ಹಲ್ಲೆ ನಡೆಸಲಾಗಿತ್ತು. ಆ ವೇಳೆಯೂ ನಾಗೇಶ್ ಬಚಾವ್ ಆಗಿದ್ದ. ಅಂತಿಮವಾಗಿ ಫ್ಯಾಕ್ಟರಿಯಲ್ಲಿ ಬರ್ಬರವಾಗಿ ಹತ್ಯೆ ನಡೆಸಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW