ತುಮಕೂರು: ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಹೊಂದಾಣಿಕೆ ಕೊರತೆ ಆಗಿದೆ ಅಂತಾ ನಾವು ಸ್ಪಷ್ಟವಾಗಿ ಹೇಳ್ತೇವೆ ಎಂದು ಜೆಡಿಎಸ್ ಸಿಎಲ್ ಪಿ ನಾಯಕ ಸಿ.ಬಿ. ಸುರೇಶ್ ಬಾಬು ತಿಳಿಸಿದ್ದಾರೆ.
ಯಾವತ್ತು ದೇವೆಗೌಡ್ರು ಬಿಜೆಪಿ ಜೊತೆ ಮುಖ ಮಾಡಿರಲಿಲ್ಲ. ಇದಕ್ಕೆ ಈಗಾಗಲೇ ಮೊನ್ನೆ ಕುಮಾರಣ್ಣ ಬೆಂಗಳೂರಿನಲ್ಲಿ ಉತ್ತರ ಕೊಟ್ರು. ಕೇಂದ್ರದಲ್ಲಿ ಯಾವ ರೀತಿ ಹೊಂದಾಣಿಕೆ ಇದೆ. ನಮ್ಮ ಪಕ್ಷವನ್ನ ಎಷ್ಟು ಗೌರವಯುತವಾಗಿ ನಡೆಸಿಕೊಳ್ತಿದ್ದಾರೆ. ಇಲ್ಲೂ ಕೂಡ ಅಷ್ಟೇ, ಒಂದು ಏನಾಗಿದೆ, ನಾವು ಈಗಾಗಲೇ ಹಲವಾರು ಬಾರಿ ಹೇಳಿದ್ದೇವೆ. ರಾಜ್ಯದಲ್ಲಿ ಹೊಂದಾಣಿಕೆ ಕೊರತೆ ಆಗಿದೆ ಅಂತಾ, ನಾವು ಕೂಡ ಸ್ಪಷ್ಟವಾಗಿ ಹೇಳ್ತೇವೆ. ಯಾಕಂದ್ರೆ ಇಲ್ಲಿ ಸಮನ್ವಯ ಸಮಿತಿಗಳಾಗಲಿಲ್ಲ ಎಂದರು.
ರಾಜ್ಯ, ಜಿಲ್ಲಾ, ತಾಲ್ಲೂಕು ಮಟ್ಟಗಳಲ್ಲಿ ಸಮನ್ವಯ ಸಮಿತಿಗಳಾಗಲಿಲ್ಲ. ಅದೆಲ್ಲಾ ಆದ್ರೆ ಜನರಿಗೆ ಗೊಂದಲ ಇರಲ್ಲಾ ಅನ್ನೋ ದೃಷ್ಟಿಯಿಂದ ಇದನ್ನ ನಾವು ಆವಾಗಿನಿಂದ ಬಯಸುತ್ತಿದ್ದೇವೆ. ಖಂಡಿತಾ ಅದು ಮುಂದಿನ ದಿನಗಳಲ್ಲಿ ರಾಷ್ಟ್ರೀಯ ನಾಯಕರೆಲ್ಲಾ ಕೂತ್ಕೊಂಡು ಸರಿಪಡಿಸಿ ಎಂದರು.
ಈಗ ಒಂದಾಗಿ ಎರಡು ಪಕ್ಷಗಳು ಒಟ್ಟಾಗಿ ಸಂಘಟನೆ ಮಾಡಲಿಕ್ಕೆ ಅನುಕೂಲ ಮಾಡುತ್ತಿವೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW