ಮಧುಗಿರಿ: ಅಬಕಾರಿ ಇಲಾಖೆಯಿಂದ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ ಮಧ್ಯ ಬಿಯರ್ ಸೇಂದಿಯನ್ನು ಹಾಗೂ ಮುಂತಾದ ವಸ್ತುಗಳನ್ನು ಪಟ್ಟಣದ ಹೊರವಲಯದಲ್ಲಿರುವ ಪುರಸಭಾ ಕಸ ವಿಲೇವಾರಿ ಘಟಕದಲ್ಲಿ ನಾಶಪಡಿಸಲಾಯಿತು.
ಈ ವೇಳೆ ಅಬಕಾರಿ ನಿರೀಕ್ಷರಾದ ರಾಮಮೂರ್ತಿ ಮಾಧ್ಯಮದೊಂದಿಗೆ ಮಾತನಾಡಿ, ಒಟ್ಟು 32 ಪ್ರಕರಣಗಳಲ್ಲಿ 638 ಲೀಟರ್ ಮಧ್ಯ, 78 ಲೀಟರ್ ಬಿಯರ್, 123 ಲೀಟರ್ ಸೇಂದಿ ಹಾಗೂ ಒಂದು ಪ್ಲಾಸ್ಟಿಕ್ ಡ್ರಮ್ ಅನ್ನು ವಶಪಡಿಸಲಾಗಿತ್ತು.
ಮರುಬಳಕೆಗೆ ಅವಕಾಶ ಇಲ್ಲದಿರುವುದರಿಂದ ಅಬಕಾರಿ ಉಪಆಯುಕ್ತರ ಆದೇಶದ ಮೇರೆಗೆ ಇಂದು ಪಟ್ಟಣದ ಹೊರವಲಯದಲ್ಲಿರುವ ಪುರಸಭೆ ಕಸವಿಲೇವಾರಿ ಘಟಕದಲ್ಲಿ ನಾಶ ಪಡಿಸಿದ್ದೇವೆ ಎಂದು ತಿಳಿಸಿದರು.
ಈ ವೇಳೆ ಕೆ.ಎಸ್. ಬಿ.ಸಿ.ಎಲ್ ಡಿಪೋ ಮ್ಯಾನೇಜರ್ ವೀರಾರೆಡ್ಡಿ, ಅಬಕಾರಿ ಉಪನಿರೀಕ್ಷಕರ ಸುರೇಶ ಆರ್, ಗ್ರೇಟ್-2 ತಾಸಿಲ್ದಾರ್ ತಿಪ್ಪೇಸ್ವಾಮಿ, ಇನ್ಸ್’ಪೆಕ್ಟರ್ ನಾಗರಾಜು, ಹಾಗೂ ಅಬಕಾರಿ ಸಿಬ್ಬಂದಿ ಹಾಜರಿದ್ದರು.
ವರದಿ: ಅಬಿದ್ ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy