ಕೊರಟಗೆರೆ: ತಾಲೂಕಿನ ತುಂಬಾಡಿ ಮತ್ತು ಸಿದ್ದರಬೆಟ್ಟ ಸಂಪರ್ಕದ ರಸ್ತೆಯಲ್ಲಿ ಪ್ರಕಾಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಕೇವಲ 24 ಗಂಟೆಗಳಲ್ಲಿ ಕೊರಟಗೆರೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಚೇತನ್ ಕುಮಾರ್ ಹಾಗೂ ತಂಡ ಕಟ್ಟಿದೆ.
ಆರೋಪಿಗಳ ಬಂಧನದ ಜೊತೆಗೆ ಈ ಹತ್ಯೆ ಹಿಂದಿನ ಹಲವು ರಹಸ್ಯಗಳು ಬಯಲಾಗಿದೆ. ಬಾಗೂರು ಗ್ರಾಮದ ರಂಗಸ್ವಾಮಿ ಅಲಿಯಾಸ್ ರಂಗ, ಬೆಂಗಳೂರು ಮೂಲದ ಗೋವಿಂದರಾಜು ಅಲಿಯಾಸ್ ಗುಂಡ, ದರ್ಶನ್ ಕಂಬದಹಳ್ಳಿ ಅಲಿಯಾಸ್ ದಚ್ಚಿ, ಮಲ್ಲೇಕಾವು ಗ್ರಾಮದ ಮಹೇಶ್ ಅಲಿಯಾಸ್ ಮಚ್ಚಿ, ಹರ್ಷಿತಾ ಅಲಿಯಾಸ್ ಇನ್ ಸ್ಟಾಗ್ರಾಂ ಡವ್ ರಾಣಿ ಬಂಧಿತ ಆರೋಪಿಗಳಾಗಿದ್ದಾರೆ.
ಗಂಡನನ್ನು ಬಿಟ್ಟು ಗುಂಡ ಹಿಂದೆ:
ಮಲ್ಲೇಕಾವು ಗ್ರಾಮದ ಚೆಂದುಳ್ಳಿ ಚೆಲುವೆ ಹರ್ಷತಾಳ ಕಾಮದ ಆಟಕ್ಕೆ ಆಕೆಯ ಅಮಾಯಕ ಗಂಡ ಮಹೇಶ್ ಉಸಿರು ಚೆಲ್ಲಿದ್ದಾನೆ. ಮಾಜಿ ಲವರ್ ಜೊತೆ ಸೇರಿ ಗಂಡನನ್ನೇ ಕೊಲ್ಲಲು ಸುಪಾರಿ ಕೊಟ್ಟಿರುವ ಆರೋಪ ಕೇಳಿ ಬಂದಿದೆ. ಅತ್ತ ಗಂಡನ ಕೊಲೆಯಾದರೂ ಇತ್ತ ತನಗೆ ಇದರ ಬಗ್ಗೆ ಏನೂ ತಿಳಿದೇ ಇಲ್ಲ ಎನ್ನುವಂತೆ ಹರ್ಷಿತಾ ಇದ್ದಳು. ಇದೀಗ ಕೊಲೆ ಮಾಡಿ ಪರಾರಿಯಾಗಲು ಯತ್ನಿಸಿದ ಆರೋಪಿಗಳು ಬಂಧನಕ್ಕೊಳಗಾಗಿದ್ದಾರೆ.
ಸ್ಥಳ ಮಹಜರ್:
ಆರೋಪಿಗಳ ಬಂಧನದ ಬಳಿಕ ಇಂದು ಸ್ಥಳ ಮಹಾಜರ್ ಮಾಡಲು ಆರೋಪಿಗಳನ್ನು ಕೊರಟಗೆರೆ ಸರ್ಕಲ್ ಇನ್ಸ್ಪೆಕ್ಟರ್ ಅನಿಲ್ ಹಾಗೂ ತಂಡ ಕರೆತಂದಿದೆ. ಆರೋಪಿಗಳಿಂದ ಎಫ್ ಎಸ್ ಐ ಎಲ್ ತಂಡ ಹಾಗೂ ಕೊರಟಗೆರೆ ಪೊಲೀಸರು ಸ್ಥಳ ಮಹಜರ್ ಪೂರ್ಣ ಮಾಹಿತಿ ಪಡೆದರು.
ಮಿಂಚಿನ ಕಾರ್ಯಾಚರಣೆಗೆ ಪ್ರಶಂಸೆ:
ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಆರೋಪಿಗಳ ಬೆನ್ನಟ್ಟಿದ ಕೊರಟಗೆರೆ ಪೊಲೀಸರು ಆರೋಪಿಗಳನ್ನು ಕೇವಲ 24 ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಸಾರ್ವಜನಿಕ ವಲಯದಲ್ಲಿ ಕೊರಟಗೆರೆ ಪೊಲೀಸ್ ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆಗೆ ಪ್ರಶಂಸೆ ವ್ಯಕ್ತವಾಗಿದೆ.
ಕೊರಟಗೆರೆ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಅನಿಲ್ ಸಬ್ ಇನ್ಸ್ಪೆಕ್ಟರ್ ಚೇತನ್ ಕುಮಾರ್, ಸಬ್ ಇನ್ಸ್ಪೆಕ್ಟರ್ ಯೋಗೇಶ್, ಎಎಸ್ ಐ ಮಂಜುನಾಥ್ ಹಾಗೂ ಸಿಬ್ಬಂದಿಗೆ ಜನ ಸಾಮಾನ್ಯರಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296