ಮದುವೆ ಆಗ್ತೀನಿ ಅಂತ ಮಾತು ಕೊಟ್ಟಿದ್ದಕ್ಕೆ ನಾನು ಪದೇ ಪದೇ ಮೋಸ ಹೋದೆ. ಮನು ಮೊದಲು ಮಾಡಿದ್ದು ಅತ್ಯಾಚಾರ, ಮನೆಯವರನ್ನು ಒಪ್ಪಿಸಿ ಆಮೇಲೆ ಮದುವೆ ಆಗ್ತೀನಿ ಅಂತ ನಂಬಿಸುಸುತ್ತಲೇ ಬಂದಿದ್ದ ಎಂದು ಕುಳದಲ್ಲಿ ಕೀಳ್ಯಾವುದೋ ಚಿತ್ರದ ನಾಯಕ ಮಡೆನೂರು ಮನು ವಿರುದ್ಧ ಸಂತ್ರಸ್ತೆ ಗಂಭೀರ ಆರೋಪ ಮಾಡಿದ್ದಾರೆ.
ಮಾರ್ಚ್ 31 ರವರೆಗೂ ಅವನು ಕೊಟ್ಟಿರುವ ದೈಹಿಕ ಟಾರ್ಚರ್ ಅನ್ನು ಸಹಿಸಿಕೊಂಡೇ ಬಂದಿದ್ದೇನೆ. ನನಗೆ ಬೇರೆ ಅವರೊಂದಿಗೆ ಜೀವನವಿತ್ತು, ಅದು ಅವನಿಗೆ ಗೊತ್ತಿತ್ತು. ಅದನ್ನು ಈಗ ಹಾಳು ಮಾಡಿದ್ದಾನೆ. 2022ರಲ್ಲಿ ಆಗಿರುವ ಘಟನೆಯನ್ನು ಇಟ್ಟುಕೊಂಡು ಈಗ ದೂರು ನೀಡಿದ್ದು ಯಾಕೆ ಎಂದು ಜನ ಕೇಳುತ್ತಿದ್ದಾರೆ. ಅವನು ನನ್ನ ಖಾಸಗಿ ವಿಡಿಯೋ ಮಾಡಿಕೊಂಡಿದ್ದಕ್ಕೆ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಹೇಳಿದರು.
ಮೊದಲ ಬಾರಿಗೆ ಅತ್ಯಾಚಾರ ಆಗಿದ್ದಾಗ ಫುಲ್ ಶಾಕ್ನಲ್ಲಿದ್ದೆ, ಏನು ಮಾಡಬೇಕು ಎಂದು ನನಗೆ ತೋಚಲಿಲ್ಲ. ಆ ಸಮಯದಲ್ಲಿ 4 ಗೋಡೆ ಮಧ್ಯೆ ತಾಳಿ ಕಟ್ಟಿದ್ದ, 2 ವರ್ಷಗಳ ನಂತರ ಎಲ್ಲರ ಮುಂದೆ ಮದುವೆಯಾಗ್ತೀನಿ ಎಂದು ಹೇಳಿದ್ದಕ್ಕೆ ನಾನು ಮನುವನ್ನು ನಂಬಿಕೊಂಡು ಬಂದೆ ಎಂದು ಸಂತ್ರಸ್ತೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ನಮ್ಮ ಅಪ್ಪಂಗೆ ಇಬ್ಬರೂ ಹೆಂಡ್ತಿರು, ತಾತನಿಗೂ ಇಬ್ಬರೂ ಹೆಂಡ್ತಿರು. ಹೀಗಾಗಿ ದೇವರೇ ನಮ್ಮನ್ನು ಜೋಡಿ ಮಾಡಿದ್ದಾರೆ ಎಂದು ನಂಬಿಸಿದ್ದ. ಪ್ರಪಂಚದಲ್ಲಿ ಎರಡ್ಮೂರು ಮದುವೆ ಮಾಡಿಕೊಂಡವರು ಇಲ್ವಾ ಎನ್ನುತ್ತಿದ್ದ. ಹೀಗೆ ಮದುವೆಯಾಗುವ ಭರವಸೆ ನೀಡಿದ್ದ. ಇದು ಕಾನೂನು ಪ್ರಕಾರ ತಪ್ಪು ಎಂದು ನನಗೆ ಗೊತ್ತು. ಇದನ್ನು ನಿಲ್ಲಿಸಲು ತುಂಬಾ ಪ್ರಯತ್ನ ಮಾಡಿದೆ ಎಂದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW