ಮಧುಗಿರಿ: ದಸ್ತಾವೇಜು ಬರಹಗಾರರ ವತಿಯಿಂದ ಮಧುಗಿರಿಯ ಸಬ್ ರಿಜಿಸ್ಟರ್ ಕಚೇರಿ ಬಳಿಯಲ್ಲಿ ಶ್ರೀ ರಾಮನವಮಿ ಪೂಜೆಯನ್ನು ನೇರವೇರಿಸಲಾಯಿತು.
ಪೂಜೆಯನ್ನು ದಾಸ್ತಾವೇಜು ಬರಹಗಾರರಾದ ಸಂಘದ ವತಿಯಿಂದ ಪ್ರತಿವರ್ಷದಂತೆ ಈ ಬಾರಿಯೂ ಸಹ ರಾಮೋತ್ಸವ ಪೂಜೆಯನ್ನು ಬಹಳ ಸರಳವಾಗಿ ಆಚರಿಸಲಾಯಿತು. ಇದೇ ವೇಳೆ ಭಕ್ತಾದಿಗಳಿಗೆ ಹೆಸರು ಬೆಳೆ, ಕೋಸಂಬರಿ ಪಾನಕ, ಮಜ್ಜಿಗೆಯ ಪ್ರಸಾದವನ್ನು ವಿತರಿಸಿದ್ದರು.
ದಾಸ್ತವೇಜು ಬರಹಗಾರರ ಕೆ.ಗೋವಿಂದಯ್ಯ, ಪ್ರಸನ್ನಕುಮಾರ್, ವೀರ ನಾಗಪ್ಪ, ಲಿಂಗಪ್ರಸಾದ್, ವೆಂಕಟೇಶ್ ಬಾಬು, ಅರ್ಚಕರಾದ ವೀರೇಶ್, ಕೆ.ಜಿ. ಲಕ್ಷ್ಮಿ ನಾರಾಯಣಪ್ಪ ಹಾಗೂ ಭಕ್ತಾದಿಗಳು ಹಾಜರಿದ್ದರು.
ವರದಿ: ದೊಡ್ಡೇರಿ ಮಹಾಲಿಂಗಯ್ಯ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy