ತುಮಕೂರು: ಜೆ.ಸಿ.ಐ. ತುಮಕೂರು ಮೆಟ್ರೋ ಮತ್ತು ರೋಟರಿ ತುಮಕೂರು ಪ್ರೇರಣಾ ಸಂಸ್ಥೆ, ಸಂಯುಕ್ತಾಶ್ರಯದಲ್ಲಿ ಮಹೇಶ್ ಪಿ.ಯು. ಸಹಯೋಗದಲ್ಲಿ ಅಶೋಕನಗರದ ಮಹೇಶ್ ಪಿ.ಯು. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸಮಯದ ಮಹತ್ವ ಹಾಗೂ ಸಮಯ ನಿರ್ವಹಣೆಯ ಕುರಿತು ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಜೆ.ಸಿ.ಐ 14ರ ವಲಯ ಮಟ್ಟದ ತರಬೇತಿದಾರರಾದ ರೇಷ್ಮಾ ಬಾಡೊಲ್ಲಾ, ನರೇಶ್ ಬಿ ಗಾಢಿಯ ಮತ್ತು ಮುಕೇಶ್ ಭಂಡಾರಿ, ಪ್ರಾಂಶುಪಾಲರಾದ ಶ್ರೀಮತಿ ವಿದ್ಯಾ ಪಟೇಲ್ ಆಡಳಿತ ಮಂಡಳಿಯೊಂದಿಗೆ ಉದ್ಘಾಟಿಸಿದರು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮುಖ್ಯ ತರಬೇತಿದಾರರಾದ ರೇಷ್ಮಾ ಬಾಡೊಲ್ಲಾ ಮಾತನಾಡಿ, ಪ್ರಸ್ತುತ ವಿದ್ಯಾರ್ಥಿಗಳ ಜೀವನಶೈಲಿಯಲ್ಲಿ ಸಮಯಕ್ಕೆ ಮಹತ್ವ ಮತ್ತು ಸಮಯಪಾಲನೆ ಅತಿಮುಖ್ಯವಾದ ಘಟ್ಟವಾಗಿದೆ. ಸಮಯಪಾಲನೆಯ ಮುಖ್ಯ ಉಪಯೋಗವೇನೆಂದರೆ ತಮಗೆ ಆಗುವ ಬೇಸರದಿಂದ ದೂರವಿರಬಹುದು. ಸಾಮಾನ್ಯವಾಗಿ ಬಹುಸಂಖ್ಯಾತ ವಿದ್ಯಾರ್ಥಿಗಳಿಗೆ ತಮ್ಮ ಪ್ರಾಜೆಕ್ಟ್, ಹೋಂ ವರ್ಕ್ ಮುಗಿಸಲು ಸಮಸ್ಯೆಗಳು ಎದುರಾಗುತ್ತಲೇ ಇರುತ್ತವೆ. ಇಂತಹ ಸಮಸ್ಯೆಗಳಿಂದ ವಿದ್ಯಾಭ್ಯಾಸ ಸುಂದರವಾಗಿರಲು, ಆಸಕ್ತಿದಾಯಕವಾಗಿ ಇರುವಂತೆ ನೋಡಿಕೊಳ್ಳಲು ಉತ್ತಮ ಟೈಮ್ ಮ್ಯಾನೇಜ್ಮೆಂಟ್ ಅಗತ್ಯವಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲೆ ಮಹೇಶ್ ಪಿ.ಯು. ಉತ್ತಮ ಶಿಕ್ಷಣ ಸಂಸ್ಥೆ ಎಂದು ಹೆಸರಾಗಿದೆ. ಇಂದು ಇಂತಹ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಈ ತರಬೇತಿ ಕಾರ್ಯಗಾರ ನಡೆಸುತ್ತಿರುವುದು ಸಂತಸವಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸಹ ತರಬೇತಿದಾರರಾದ ನರೇಶ್ ಬಿ ಗಾಡಿಯ ಮತ್ತು ಮುಕೇಶ್ ಭಂಡಾರಿ ಮಾತನಾಡಿ ಸಮಯಪಾಲನೆ ಹಾಗೂ ಸಮಯಕ್ಕೆ ಮಹತ್ವ ನೀಡುವ ವಿದ್ಯಾರ್ಥಿಗಳು, ಸದಾ ಚಟುವಟಿಕೆಯಿಂದ ಇರಬಹುದು. ಹೆಚ್ಚು ಕಲಿಯಬಹುದು. ಆತ್ಮವಿಶ್ವಾಸದಿಂದ ಇರಬಹುದು. ಮತ್ತು ಒತ್ತಡ, ಹತಾಶೆ. ಕಡಿಮೆ ಅಂಕ ಗಳ ಸಮಸ್ಯೆಗಳಿಂದ ದೂರವಿರಬಹುದು ಎಂದು ತಿಳಿಸಿದರು.
ಫೋನ್, ಇಂಟರ್ನೆಟ್, ಸೇರಿದಂತೆ ಇನ್ನಿತರ ದುಶ್ಚಟಗಳಿಂದ ಆಗುವ ತೊಂದರೆಗಳನ್ನು ವಿವರಿಸಿದರು. ಅಲ್ಲದೆ ವಿದ್ಯಾರ್ಥಿಗಳ ಮುಂದಿನ ಶಿಕ್ಷಣ ಭವಿಷ್ಯ ಉತ್ತಮವಾಗಿರಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳನ್ನು ಕಾಲೇಜು ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ರೋಟರಿ ತುಮಕೂರು ಪ್ರೇರಣಾ ಸಂಸ್ಥೆ ಅಧ್ಯಕ್ಷರಾದ, ರಾಜಶೇಖರ್ ಎನ್, ಕಾರ್ಯದರ್ಶಿ ಕೃಷ್ಣ ಜಿಎನ್,ತರಬೇತಿ ನಿರ್ದೇಶಕರಾದ ಜನಾರ್ಧನ್ ಜಿ.ಎನ್. ಮತ್ತು ಜೆ.ಸಿ.ಐ. ತುಮಕೂರು ಮೆಟ್ರೋ ಸಂಸ್ಥೆಯ ಅಧ್ಯಕ್ಷರಾದ ಸಿಂಧು ದರ್ಶನ್. ಕಾರ್ಯದರ್ಶಿ ಲತಾ ಶ್ರೀನಿವಾಸ್. ತರಬೇತಿ ನಿರ್ದೇಶಕ ಸುರೇಶ್ ತೊಗಟವೀರ ಹಾಗೂ ಕಾಲೇಜಿನ ಉಪನ್ಯಾಸಕರಾದ ಶ್ರೀನಿವಾಸ್ ಕಲ್ಲೂರು. ಹರೀಶ್. ನಾಗಲಕ್ಷ್ಮಿ .ಸುರೇಶ್. ಜಯರಾಮಯ್ಯ. ಮುಂತಾದ ಉಪನ್ಯಾಸಕರು, ವಿದ್ಯಾರ್ಥಿಗಳು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.ವಿದ್ಯಾರ್ಥಿಗಳಾದ ಕಿಶನ್. ಯಶಸ್ವಿನಿ. ನಿರೂಪಿಸಿದರು ಪೂಜಾ, ಶಾಮಿಯೂ. ತೇಜು ವಿಜ್ಞೇಶ್ ಸ್ವಾಗತಿಸಿ, ಮನಿಶ್ ಗೌಡ ಮೋಕ್ಷ ಪ್ರಧಾನ್ ವಂದಿಸಿದರು.
ವರದಿ: ಸಚಿನ್ ಮಾಯಸಂದ್ರ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB