ಪಾವಗಡ: ಮಹಾಶಿವರಾತ್ರಿ ಅಂಗವಾಗಿ ಜೇಡಿ ಮಣ್ಣಿನಲ್ಲಿ ಶಿವಲಿಂಗಗಳನ್ನು ರಚಿಸಿ, ಭಾರತಮಾತೆಯ ಮಧ್ಯಭಾಗದಲ್ಲಿ ಶಿವನ ಚಿತ್ರ ಬಿಡಿಸುವ ಮೂಲಕ ಸಾವಿರಾರು ಜನತೆಯ ಪ್ರಸಂಸೆಗೆ ಪ್ರೀತಿ ಪಾತ್ರವಾದ ಪಾವಗಡ ಪಟ್ಟಣದ ಬ್ರಾಹ್ಮಣರ ಬೀದಿಯ 70 ವರ್ಷದ ರಾಧಮ್ಮಜ್ಜಿಗೆ ಇಂದು ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್ ಶಾಲು ಹೊದಿಸಿ ಗೌರವ ಪೂರಕವಾಗಿ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಧಮ್ಮಜ್ಜಿ, ಕೋವಿಡ್ ಸಂಕಷ್ಟದಿಂದ ಭಾರತವನ್ನು ಪಾರು ಮಾಡುವಂತೆ ಪರಮಾತ್ಮ ಶಿವನನ್ನು ಪೂಜಿಸುವ ಕಲಾಕೃತಿಯನ್ನು ಸುಮಾರು 2 ತಿಂಗಳುಗಳಿಂದ ಜೇಡಿ ಮಣ್ಣಿನಲ್ಲಿ ಶಿವಲಿಂಗಗಳನ್ನು ರಚಿಸಿ ಸಾಕಷ್ಟು ಶ್ರಮ ವಹಿಸಿ ನನ್ನ ಪ್ರತಿಭೆಯನ್ನು ತೋರ್ಪಡಿಸಿದ್ದೇನೆ. ಕಲಾ ಕೃತಿಯನ್ನು ವೀಕ್ಷಿಸಲು ಸಾವಿರಾರು ಭಕ್ತಾದಿಗಳು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಇಂದು ನಮ್ಮ ನಿವಾಸಕ್ಕೆ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ಹಾಗೂ ತಂಡ ನನ್ನ ಪ್ರತಿಭೆಯನ್ನು ಗುರುತಿಸಿ ಆತ್ಮೀಯವಾಗಿ ಸನ್ಮಾನಿಸಿರುವುದು ನನಗೆ ತುಂಬಾ ಸಂತೋಷಕರವಾಗಿದೆ ಎಂದು ಹೇಳಿದರು.
ಹೆಲ್ಪ್ ಸೊಸೈಟಿ ತಂಡಕ್ಕೆ ಇಂತಹ ಪ್ರತಿಭೆಗಳನ್ನು ಮತ್ತಷ್ಟು ಗುರುತಿಸಿ ಸೇವೆ ಮಾಡುವ ಶಕ್ತಿ ಭಗವಂತ ನೀಡಲಿ ಎಂದು ಬನ್ನಿಸಿದರು. ಈ ಸಂದರ್ಭದಲ್ಲಿ ಅರೋಗ್ಯ ಸಹಾಯಕಿ ಮಂಜುಳಾ, ಆಟೋ ಚಾಲಕರ ಸಂಘದ ಅಧ್ಯಕ್ಷ ಬೇಕರಿ ನಾಗರಾಜ, ಹೆಲ್ಪ್ ಸೊಸೈಟಿ ಪದಾಧಿಕಾರಿಗಳಾದ ಶ್ರೀಕಾಂತ್,ಸಾಯಿ ಹಾಜರಿದ್ದರು.
ವರದಿ: ನಂದೀಶ್ ನಾಯ್ಕ ಪಿ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB