ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಕಸಬಾ ಹೋಬಳಿ ಮಲ್ಲಾಘಟ್ಟ ಕೆರೆಯ ಕೋಡಿ ಬಿದ್ದಿದ್ದು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.
ಈ ಕ್ಷೇತ್ರದಲ್ಲಿ ಶ್ರೀ ಗಂಗಾಧರೇಶ್ವರ ದೇವಾಲಯ ಇದೆ. ಈ ಕೆರೆಯು ಮೈದುಂಬಿ ಹರಿಯುತ್ತಿರುವುದರಿಂದ ದೂರದ ಬೆಂಗಳೂರು, ಮೈಸೂರು ಅರಸೀಕೆರೆ ಹಾಸನ ಮುಂತಾದ ಕಡೆಯಿಂದ ಸಾವಿರಾರು ಪ್ರವಾಸಿಗರ ದಂಡು ಈ ಕೆರೆಯ ಕೋಡಿಯ ಮನೋಹರವಾದ ದೃಶ್ಯವನ್ನು ನೋಡಲು ಬರುತ್ತಿದ್ದಾರೆ.
ಈ ಸ್ಥಳದಲ್ಲಿ ತಾಲೂಕಿನ ಗ್ರಾಮದೇವತೆಗಳ ಪುಣ್ಯ ಸ್ನಾನಕ್ಕೆ ಭಕ್ತರು ಆಗಮಿಸಿ ಹೋಮ-ಹವನಗಳನ್ನು ಮಾಡಿ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಮಕ್ಕಳಾಗದ ದಂಪತಿಗಳು ಗಂಗಾ ಪೂಜೆ ಮಾಡಿಸಿ ಕೊಂಡು ಹೋಗುತ್ತಾರೆ.
ಈ ಸ್ಥಳಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದರೂ ಕ್ಷೇತ್ರದ ಅಭಿವೃದ್ಧಿಗೆ ತಾಲೂಕು ಆಡಳಿತವಾಗಲಿ, ಜಿಲ್ಲಾಡಳಿತವಾಗಲಿ, ಜಲಾನಯನ ಇಲಾಖೆಯಾಗಲಿ ,ಜನಪ್ರತಿನಿಧಿಗಳಾಗಲಿ ಕಿಂಚಿತ್ತೂ ಕಾಳಜಿ ತೋರಿಸುತ್ತಿಲ್ಲ ಎನ್ನುವ ಚರ್ಚೆ ಕೇಳಿ ಬಂದಿದೆ.
ಇನ್ನಾದರೂ ಈ ಸ್ಥಳದ ಅಭಿವೃದ್ಧಿಗಾಗಿ ಕಾಳಜಿ ವಹಿಸುತ್ತಾರಾ ಪ್ರೇಕ್ಷಣೀಯ ಸ್ಥಳ ಮಾಡುತ್ತಾರಾ ? ಎಂದು ಕಾದುನೋಡಬೇಕಾಗಿದೆ.
ವರದಿ: ಸುರೇಶ್ ಬಾಬು, ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz