ಬೆಂಗಳೂರು: ಮದ್ಯಪಾನ, ಧೂಮಪಾನ, ತಂಬಾಕು ವಿರುದ್ಧ ದಿ ಸಲೋನಿ ಶಾಲೆ ವತಿಯಿಂದ ಮ್ಯಾರಥಾನ್ ಹಮ್ಮಿಕೊಂಡಿದ್ದರು, ಸುಮಾರು 500 ಮಕ್ಕಳು, ಪೋಷಕರು, ಸಾಮಾಜಿಕ ಕಾರ್ಯಕರ್ತರು, ಶಾಲಾ ಸಿಬ್ಬಂದಿಗಳು, ಹಳೆಯ ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ವಿಶ್ವಾಪ್ರಿಯಾ ಲೇಔಟ್ ಇಂದ ಪ್ರಾರಂಭವಾಗಿ ಸುಮಾರು 5 ಕಿಲೋಮೀಟರ್ ದೂರದವರೆಗೆ ಈ ಮ್ಯಾರಥಾನ್ ನಡೆಯಿತು. ಬೇಗೂರು ಪೊಲೀಸ್ ಠಾಣೆಯ ಸಿಬ್ಬಂದಿಗಳು, ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಹಾಗೂ ಜಯಶ್ರೀ ಆಸ್ಪತ್ರೆಯಿಂದ ಆಂಬುಲೆನ್ಸ್ ವ್ಯವಸ್ಥೆ ಈ ಒಂದು ಮ್ಯಾರಥಾನ್ ಗೆ ವಿಶೇಷವಾಗಿತ್ತು.
ವಿದ್ಯಾರ್ಥಿ ಹಾಗೂ ಶಾಲಾ ಸಿಬ್ಬಂದಿಗಳಿಂದ ಹಲವಾರು ಸ್ಲೋಗನ್ ಗಂಟಾಗೋಷವಾಗಿ ರಸ್ತೆಯ ತುಂಬೆಲ್ಲ ಇದೆ ಸದ್ದಗಿತ್ತು,ಶಾಲಾ ಮಕ್ಕಳು ಬ್ಯಾಂಡ್ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆಯ ಗಂಟೆಯನ್ನು ಮೊಳಗುತ್ತಾ ಬಂದಿದ್ದರು.
ವಿಶೇಷ ಏನೆಂದರೆ ಈ ಮ್ಯಾರಥಾನ್ ನಡೆಯುವ ಸಮಯದಲ್ಲಿ ಒಂದು ಬಾರ್ ಈ ಮಕ್ಕಳ ಕೂಗನ್ನು ನೋಡಿ ಶಟರ್ ಮುಚ್ಚಿದ್ದು ಈ ಮಕ್ಕಳ ಮ್ಯಾರಥಾನ್ ಯಶಸ್ಸಿಗೆ ಕಾರಣ.
ರಸ್ತೆಯಲ್ಲಿ ಹೋಗುತ್ತಿದ್ದ ಹಲವಾರು ಜನರು ಸೆಲ್ಫಿಗಳನ್ನು ಹಾಗೂ ವಿಡಿಯೋಗಳನ್ನು ಮಾಡವ ಮೂಲಕ ತಮ್ಮ ಬೆಂಬಲವನ್ನು ಈ ಮ್ಯಾರಥನಿಗೆ ಸೂಚಿಸಿದರು.
ದಿ ಸಲೋನಿ ಶಾಲಾ ಆಡಳಿತ ಮಂಡಳಿ, ಪ್ರಿನ್ಸಿಪಲ್ ಹಾಗೂ ಸಿಬ್ಬಂದಿ ವರ್ಗದವರು, ಮಕ್ಕಳು ಪ್ರತಿಯೊಬ್ಬರಿಂದ ಈ ಮ್ಯಾರಥಾನ್ ಬಹಳ ಅದ್ದೂರಿಯಾಗಿ ನಡೆಯಿತು.
ಕೊನೆಯದಾಗಿ ಶಾಲೆಯ ಪ್ರಿನ್ಸಿಪಲ್ ಮಾತನಾಡಿ ಈ ಮ್ಯಾರಥಾನ್ ಮೂಲಕ ಒಬ್ಬ ವ್ಯಕ್ತಿ ಬದಲಾದರು ಮದ್ಯಪಾನ ಧೂಮಪಾನ ತಂಬಾಕನ್ನು ನಿಷೇಧಿಸುತ್ತೇವೆ ಎಂದು ಹೇಳಿದರೆ, ನಮ್ಮ ಈ ಕಾರ್ಯಕ್ರಮ ತೃಪ್ತಿ ಎನಿಸುತ್ತದೆ ಎಂದು ಹೇಳಿದರು.
ಇದು ಒಂದು ವಿಭಿನ್ನ ಪ್ರಯತ್ನ, ಸಾಮಾನ್ಯ ವರ್ಗದವರಿಗೂ ಈ ಕೆಟ್ಟ ಅಭ್ಯಾಸ ಜೀವನ ಪೂರ್ತಿ ಕಷ್ಟವಾಗಿರುತ್ತದೆ, ಕೆಲವು ಪೋಷಕರು ನೀವು ಮಾಡುವ ಮ್ಯಾರಥಾನ್ ತರಹ ಎಲ್ಲಾ ಶಾಲೆಗಳು ಮಾಡಿದರೆ ಒಂದಲ್ಲ ಒಂದು ದಿನ ಈ ಜನ ಬದಲಾಗುತ್ತಾರೆ ಎಂದು ಹೇಳಿದರು ಎಂದು ತಿಳಿಸಿದರು.
ವರದಿ: ಆಂಟೋನಿ ಬೇಗೂರು


