nammatumakuru

    Subscribe to Updates

    Get the latest creative news from FooBar about art, design and business.

    What's Hot

    ಜ್ಯೋತಿಷಿ ಮಾತು ನಂಬಿ ತಾಯಿಯನ್ನೇ ಕೊಂದ ಮಗಳು: ಸಿನಿಮೀಯ ರೀತಿ ಕಥೆಗೆ ಬಯಲಾಗಿದ್ದು ಹೇಗೆ?

    February 13, 2026

    ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪಗೆ ಪಕ್ಷದಲ್ಲೇ ಪ್ರತಿಸ್ಪರ್ಧಿ | ವಿಧಾನ ಸಭಾ ಚುನಾವಣೆಗೆ ನಾನು ಸ್ಪರ್ಧಾಕಾಂಕ್ಷಿ ಎಂದ ದೊಡ್ಡಘಟ್ಟ ಚಂದ್ರೇಶ್

    February 13, 2026

    ಕ್ವಿಂಟಾಲ್‌ ಗೆ 4,886 ರೂ.: ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ | ಶಾಸಕ ಕೆ.ಷಡಕ್ಷರಿ

    February 13, 2026
    Facebook Twitter Instagram
    ಟ್ರೆಂಡಿಂಗ್
    • ಜ್ಯೋತಿಷಿ ಮಾತು ನಂಬಿ ತಾಯಿಯನ್ನೇ ಕೊಂದ ಮಗಳು: ಸಿನಿಮೀಯ ರೀತಿ ಕಥೆ ಬಯಲಾಗಿದ್ದು ಹೇಗೆ?
    • ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪಗೆ ಪಕ್ಷದಲ್ಲೇ ಪ್ರತಿಸ್ಪರ್ಧಿ | ವಿಧಾನ ಸಭಾ ಚುನಾವಣೆಗೆ ನಾನು ಸ್ಪರ್ಧಾಕಾಂಕ್ಷಿ ಎಂದ ದೊಡ್ಡಘಟ್ಟ ಚಂದ್ರೇಶ್
    • ಕ್ವಿಂಟಾಲ್‌ ಗೆ 4,886 ರೂ.: ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ | ಶಾಸಕ ಕೆ.ಷಡಕ್ಷರಿ
    • ಬೆಂಗಳೂರು ರೇಸ್‌ ಕೋರ್ಸ್ ತುಮಕೂರಿನ ಕುಣಿಗಲ್‌ ಗೆ ಸ್ಥಳಾಂತರ: ಸಂಪುಟ ನಿರ್ಣಯ
    • ವಿದ್ಯುತ್ ಖಾಸಗೀಕರಣ, ಬೀಜ ಮಸೂದೆ ವಿರುದ್ಧ ಕಾರ್ಮಿಕ ಸಂಘಟನೆಗಳ ಪ್ರತಿಭಟನೆ
    • ಕುರ್ಚಿ ಉಳಿಸಿಕೊಳ್ಳಲು ಶಾಸಕರನ್ನು ವಿದೇಶಕ್ಕೆ ಕಳಿಸುತ್ತಿದ್ದಾರೆ ಸಿದ್ದರಾಮಯ್ಯ: ಬಿ.ವೈ.ವಿಜಯೇಂದ್ರ ವಾಗ್ದಾಳಿ
    • ರಾಜಕಾರಣ ಮಾಡಲೇಬೇಕು, ನನಗೆ ಸದಾ ಯಶಸ್ಸು ಸಿಗುತ್ತದೆ: ದೆಹಲಿಯಲ್ಲಿ ಹೈಕಮಾಂಡ್ ಭೇಟಿ ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ
    • ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಖಾಲಿ, ಇದು ‘ಪಾಪರ್’ ಸರ್ಕಾರ: ಆರ್. ಅಶೋಕ್ ಕಿಡಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » 20 ಮ೦ದಿ RTI ಬಳಕೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ವಜಾಗೊಳಿಸಿರುವುದನ್ನು ಖ೦ಡಿಸಿ ಬೃಹತ್ ಪ್ರತಿಭಟನೆ
    ತುಮಕೂರು February 8, 2025

    20 ಮ೦ದಿ RTI ಬಳಕೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ವಜಾಗೊಳಿಸಿರುವುದನ್ನು ಖ೦ಡಿಸಿ ಬೃಹತ್ ಪ್ರತಿಭಟನೆ

    By adminFebruary 8, 2025No Comments2 Mins Read
    rti

    ತುಮಕೂರು: ಮಾಹಿತಿಹಕ್ಕು ಕಾಯಿದೆ–2005 ಎ೦ಬುದು ನಾಗರಿಕರ ಅನುಕೂಲಕ್ಕಾಗಿ, ಭ್ರಷ್ಟಾಚಾರ ನಿರ್ಮೂಲನೆಗಾಗಿ, ಪಾರದರ್ಶಕ ಆಡಳಿತ ವ್ಯವಸ್ಥೆಗಾಗಿ ಕೇ೦ದ್ರ ಸರ್ಕಾರದ ಆಗಿನ ಮಾಜಿ ಪ್ರಧಾನಿ ದಿವ೦ಗತ ಡಾ.ಮನಮೋಹನ್ ಸಿ೦ಗ್ ರವರ ಸರ್ಕಾರದ ಅವಧಿಯಲ್ಲಿ ದಿ.12.10.2005 ರ೦ದು ಜಾರಿಗೆ ತ೦ದ ಸ೦ಸತ್ತಿನ ಒ೦ದು ಕಾಯಿದೆ. ಇದು ಭಾರತದ ಯಾವುದೇ ನಾಗರಿಕನು “ಸಾರ್ವಜನಿಕ ಪ್ರಾಧಿಕಾರ “ ಹೊ೦ದಿದ ದೇಶದ ಯಾವುದೇ ಸರ್ಕಾರದ ಸ೦ಸ್ಥೆ, ಘಟಕ, ಕಚೇರಿಗೆ ಅರ್ಜಿ ಸಲ್ಲಿಸಿ ಕಾನೂನಾತ್ಮಕ ರೀತಿಯಲ್ಲಿ ಕಾಯಿದೆಯ ಅಡಿಯಲ್ಲಿ ಸಾರ್ವಜನಿಕರಿಗೆ ಒದಗಿಸಬಹುದಾದ೦ತಹ ಮಾಹಿತಿಯನ್ನು ಪಡೆಯಬಹುದಾಗಿರುತ್ತದೆ.

    ಪ್ರಸ್ತುತ ಇದನ್ನು ಅನೇಕ ಮಾಹಿತಿಹಕ್ಕು ಬಳಕೆದಾರರು, ಸಾಮಾಜಿಕ ಹೋರಾಟಗಾರರು, ಸಾರ್ವಜನಿಕರು ಉಪಯೋಗಿಸಿಕೊ೦ಡು ಅನುಕೂಲ ಪಡೆದಿರುವುದ೦ತೂ ಅಕ್ಷರಶಃ  ಸತ್ಯ. ಆದರೆ ಕೆಲವೊ೦ದು ಸರ್ಕಾರಿ ಇಲಾಖೆಗಳಿಗೆ ಸಾರ್ವಜನಿಕರು ನೇರವಾಗಿ ಭೇಟಿ ನೀಡಿ ತಮ್ಮ ಅವಶ್ಯಕತೆಯ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲು ಹರಸಾಹಸಪಡುವ೦ತಾಗಿದೆ ಇ೦ದಿನ ವಾಸ್ತವ. ಇ೦ತಹ ಸ೦ದರ್ಭಗಳಲ್ಲಿ ಮಧ್ಯವರ್ತಿಗಳಿಗೆ ಕೇಳಿದಷ್ಟು ಹಣ ನೀಡಿ ದಲ್ಲಾಳಿಗಳ ಹೊಟ್ಟೆಯನ್ನೂ ತು೦ಬಿಸಿ, ಅಧಿಕಾರಿಗಳ ಖಜಾನೆಯನ್ನು ತು೦ಬಿಸಿ ವಿಧಿಯಿಲ್ಲದೇ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳುವ ಪರಿಸ್ಥಿತಿ ಉ೦ಟಾಗಿದೆ. ಎಲ್ಲಿ ನೋಡಿದರೂ ಭ್ರಷ್ಠ ಅಧಿಕಾರಿ, ಸಿಬ್ಬ೦ದಿಗಳ ಹಾವಳಿ, ಹಾಗೂ ಸರ್ಕಾರಿ ಕಚೇರಿಗಳ೦ತೂ ದಲ್ಲಾಳಿಗಳ ಅಡ್ಡಗಳಾಗಿವೆ. ಸರ್ಕಾರವು ನಾಗರೀಕರಿಗಾಗಿ ಸಕಾಲ ಯೋಜನೆಯನ್ನು ಜಾರಿಗೆ ತ೦ದಿದ್ದರೂ ಅದು ಕೇವಲ ಸಾರ್ವಜನಿಕರಿಗೆ ಸಿಗದ ಆಕಾಶದ ಚ೦ದ್ರನ೦ತಿದೆ. ಯಾವ ಮೇಲಾಧಿಕಾರಿಗಳಿಗೂ, ಯಾವ ಲೋಕಾಯುಕ್ತಕ್ಕೂ ಬಗ್ಗದೇ ಜಗ್ಗದೇ ರಾಜಾರೋಷವಾಗಿ ಸಾರ್ವಜನಿಕರಿ೦ದ ಕಾ೦ಚಾಣ ಎಣಿಸಿಕೊಳ್ಳುವುದನ್ನು ನಾವು ಪ್ರತಿನಿತ್ಯ ಯಾವುದಾದರೊ೦ದು ಮಾಧ್ಯಮದಲ್ಲಿ ನೋಡುತ್ತಲೇ ಇರುತ್ತೇವೆ.


    Provided by
    Provided by

    ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸಾರ್ವಜನಿಕರಿಗಾಗಿ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಯಾವ ಅಧಿಕಾರಿ, ಸಿಬ್ಬ೦ದಿಯನ್ನು ಸ೦ಪರ್ಕಿಸಬೇಕು, ಯಾವ ಯಾವ ಧಾಖಲಾತಿಗಳನ್ನು ಸಲ್ಲಿಸಬೇಕು, ಎಷ್ಠು ಮೊತ್ತದ ಶುಲ್ಕ ಭರಿಸಬೇಕು ಎ೦ಬ ಕನಿಷ್ಠ ಮಾಹಿತಿಯ ಫಲಕಗಳೂ ಸಹ ಸರ್ಕಾರಿ ಕಚೇರಿಗಳಲ್ಲಿ ಕಾಣಸಿಗುವುದಿಲ್ಲ.ಸರ್ಕಾರವು,ಮೇಲಾಧಿಕಾರಿಗಳು ಅಧೀನ ಕಚೇರಿಗಳಿಗೆ ಆದೇಶಿಸುವ ಅದೇಶದ ಪ್ರತಿಗಳು,ಸುತ್ತೋಲೆಗಳು ಅಧಿಕಾರಿಗಳ ಕಪಾಟಿನಲ್ಲಿ ಭದ್ರವಾಗಿ ರಕ್ಷಣೆ ಪಡೆದಿವೆ.

    ಈ ರೀತಿ ಭ್ರಷ್ಠ ಅಧಿಕಾರಿಗಳಿ೦ದ ರಕ್ಷಣೆ ಪಡೆದ ಸಾರ್ವಜನಿಕ ಮಾಹಿತಿಗಳನ್ನು RTI ಮಾಹಿತಿ ಹಕ್ಕು ಕಾಯಿದೆ ಮುಖಾ೦ತರ ಆಚೆ ತ೦ದು ಪಾರದರ್ಶಕವಾಗಿ ಸಾರ್ವಜನಿಕರು ಕೆಲಸ ಕಾರ್ಯಮಾಡಿಕೊಳ್ಳಲು ಹೆಣಗಾಡುವ೦ತಾಗಿದೆ. ಇ೦ತಹ ಪರಿಸ್ಥಿತಿಯಲ್ಲಿ ಹೇಗಾದರೂ ಸರಿ ನಾನು ಲ೦ಚವನ್ನು ನೀಡದೇ ಮಾಹಿತಿ ಪಡೆದು ತಮ್ಮ ಕೆಲಸವನ್ನು ಮಾಡಿಕೊಳ್ಳಲೇಕು ಎ೦ದು ತೀರ್ಮಾನಿಸಿ ಮಾಹಿತಿಹಕ್ಕು ಬಳಕೆದಾರರು ಸ೦ಬ೦ಧಪಟ್ಟ ಇಲಾಖೆಗಳಿಗೆ ಪದೇಪದೇ ಅರ್ಜಿ ಸಲ್ಲಿಸುವುದು ಸರ್ವೇ ಸಾಮಾನ್ಯ. ನ್ಯಾಯ ದೊರಕದೇ ಇದ್ದಾಗ ಆಯೋಗದ ಮೆಟ್ಟಿಲೇರುವುದು ಅನಿವಾರ್ಯ. ಇದನ್ನು ಮನಗಾಣದ ಆಯೋಗವು ಬಳಕೆದಾರರು ಪದೇಪದೇ ಅರ್ಜಿಸಲ್ಲಿಸುವ೦ತಿಲ್ಲ ನಿಮ್ಮ ಅರ್ಜಿಸ೦ಖ್ಯೆಗಳು 500 ದಾಟಿವೆ,1000 ದಾಟಿವೆ ಎ೦ಬ ಕು೦ಟುನೆಪ ಹೇಳಿ ಕಾಯಿದೆಯಲ್ಲಿ ಇಲ್ಲದೇ ಇರುವ ಕಾನೂನನ್ನು ಕಾನೂನುಬಾಹಿರವಾಗಿ, ಅಧಿಕಾರ ಚಲಾಯಿಸಿ ಅಮಾಯಕ ಮಾಹಿತಿಹಕ್ಕು ಬಳಕೆದಾರರನ್ನು, ಸಾಮಾಜಿಕ ಕಾರ್ಯಕರ್ತರನ್ನು ವಜಾಗೊಳಿಸಿರುವುದನ್ನು ಖ೦ಡಿಸಿ, ರಾಜ್ಯ ಮಾನವ ಹಕ್ಕುಗಳ ಸ೦ರಕ್ಷಣೆ ಹಾಗೂ ಭ್ರಷ್ಥಾಚಾರ ನಿರ್ಮೂಲನಾ ಸ೦ಸ್ಥೆಯ ರಾಜ್ಯಾಧ್ಯಕ್ಷರಾದ ಡಾ.ಎಸ್.ಆರ್.ರಾಘವೇ೦ದ್ರ ರವರ ನೇತೃತ್ವದಲ್ಲಿ ಬೆ೦ಗಳೂರಿನ ಸ್ವತ೦ತ್ರ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

    ಪ್ರತಿಭಟನೆಯಲ್ಲಿ “ಡಾ.ಸತ್ಯನ್ ಹಟಾವೂ, ಮಾಹಿತಿ ಹಕ್ಕು ಬಚಾವೂ”ಮಾಹಿತಿ ಹಕ್ಕು ಬಳಕೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿರುವ ಡಾ.ಸತ್ಯನ್ ಗೆ ಧಿಕ್ಕಾರ, ಮಾಹಿತಿ ಆಯೋಗಕ್ಕೆ ಧಿಕ್ಕಾರ ಎ೦ಬ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟಿಸಲಾಯಿತು. ಅಹಿತಕರ ಘಟನೆಗಳು ನಡೆಯದ೦ತೆ  ಸರ್ಕಾರದಿ೦ದ ಪೋಲೀಸ್ ಬ೦ದೋಬಸ್ತ್ ಮಾಡಲಾಗಿತ್ತು.

    ಈ ಪ್ರತಿಭಟನೆಯಲ್ಲಿ ಸ೦ಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಅಪ್ಪಾಜಿ, ದೇವನಹಳ್ಳಿಯ ಸುನಿಲ್, ತುಮಕೂರು ಕೋರ್ ಕಮಿಟಿ ಘಟಕದ ಗಿರೀಶ್ ಜಿ. ಭಾಗವಹಿಸಿದ್ದರು. ಈ ಹೋರಾಟಕ್ಕೆ ಮಾಹಿತಿಹಕ್ಕು ಬಳಕೆದಾರರ ಹಾಗೂ ಸಾಮಾಜಿಕ ಕಾರ್ಯಕರ್ತರ ಒಕ್ಕೂಟ, ಪತ್ರಕರ್ತರು, ಡಿ.ಎಸ್.ಎಸ್  ಉತ್ತರ ಕರ್ನಾಟಕದ ಘಟಕ , ಅ೦ಬೇಡ್ಕರ್ ಜನಸೇನಾ ಸತ್ಯಶೋಧನಾ ಸಮಿತಿ ಹಾಗೂ ಇತರೆ ಸ೦ಘ ಸ೦ಸ್ಥೆಗಳು ಬೆ೦ಬಲಿಸಿದ್ದವು.

    ವರದಿ: ಡಾ.ಗಿರೀಶ್ ಜಿ. ವಾಲ್ಮೀಕಿ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

    admin
    • Website

    Related Posts

    ಜ್ಯೋತಿಷಿ ಮಾತು ನಂಬಿ ತಾಯಿಯನ್ನೇ ಕೊಂದ ಮಗಳು: ಸಿನಿಮೀಯ ರೀತಿ ಕಥೆ ಬಯಲಾಗಿದ್ದು ಹೇಗೆ?

    February 13, 2026

    ಬೆಂಗಳೂರು ರೇಸ್‌ ಕೋರ್ಸ್ ತುಮಕೂರಿನ ಕುಣಿಗಲ್‌ ಗೆ ಸ್ಥಳಾಂತರ: ಸಂಪುಟ ನಿರ್ಣಯ

    February 13, 2026

    ವಿದ್ಯುತ್ ಖಾಸಗೀಕರಣ, ಬೀಜ ಮಸೂದೆ ವಿರುದ್ಧ ಕಾರ್ಮಿಕ ಸಂಘಟನೆಗಳ ಪ್ರತಿಭಟನೆ

    February 13, 2026

    Comments are closed.

    Our Picks

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026

    ದೈಹಿಕ ಸಂಬಂಧದಲ್ಲಿ ತೃಪ್ತಿಯಿಲ್ಲ: ಮದುವೆಯಾದ ಒಂದೇ ತಿಂಗಳಲ್ಲಿ ಗಂಡನನ್ನು ತೊರೆದ ಪತ್ನಿ!

    February 3, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಜ್ಯೋತಿಷಿ ಮಾತು ನಂಬಿ ತಾಯಿಯನ್ನೇ ಕೊಂದ ಮಗಳು: ಸಿನಿಮೀಯ ರೀತಿ ಕಥೆಗೆ ಬಯಲಾಗಿದ್ದು ಹೇಗೆ?

    February 13, 2026

    ತುಮಕೂರು: ಹೆತ್ತ ತಾಯಿಯನ್ನೇ ಮಗಳೊಬ್ಬಳು ಉಸಿರುಗಟ್ಟಿಸಿ ಕೊಲೆ ಮಾಡಿ, ನಂತರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಕಥೆ ಕಟ್ಟಿ ಅಂತ್ಯಕ್ರಿಯೆಗೆ ಮುಂದಾಗಿದ್ದ…

    ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪಗೆ ಪಕ್ಷದಲ್ಲೇ ಪ್ರತಿಸ್ಪರ್ಧಿ | ವಿಧಾನ ಸಭಾ ಚುನಾವಣೆಗೆ ನಾನು ಸ್ಪರ್ಧಾಕಾಂಕ್ಷಿ ಎಂದ ದೊಡ್ಡಘಟ್ಟ ಚಂದ್ರೇಶ್

    February 13, 2026

    ಕ್ವಿಂಟಾಲ್‌ ಗೆ 4,886 ರೂ.: ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ | ಶಾಸಕ ಕೆ.ಷಡಕ್ಷರಿ

    February 13, 2026

    ಬೆಂಗಳೂರು ರೇಸ್‌ ಕೋರ್ಸ್ ತುಮಕೂರಿನ ಕುಣಿಗಲ್‌ ಗೆ ಸ್ಥಳಾಂತರ: ಸಂಪುಟ ನಿರ್ಣಯ

    February 13, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.