ಮಧುಗಿರಿ: ದೇಶದಲ್ಲಿ ಅಸ್ಪೃಶ್ಯರಿಗೆ ಮತದಾನದ ಹಕ್ಕನ್ನು ಕೊಟ್ಟ ಮೇಲೆಯೇ ನಮಗೆ ಬದುಕಿನಲ್ಲಿ ಭರವಸೆಯ ಬೆಳಕು ಕಂಡಿದ್ದು, ಇಂದೇ ನಮಗೆ ಸ್ವತಂತ್ರ ಬಂದ ದಿನವಾಗಿದೆ ಎಂದು ಡಾ.ಅಂಬೇಡ್ಕರ್ ಪೀಪಲ್ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ಪ್ರಸನ್ನ ಕುಮಾರ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅಂಬೇಡ್ಕರ್ ಅನುಭವಿಸಿದ ನೋವನ್ನು ಯಾರೂ ಕಾಣಲಾರರು . ಇಂತಹ ಮಹಾನೀಯನಿಂದಾಗಿ ದೇಶದ ಅಸಹಾಯಕರು ಮತದಾನದ ಹಕ್ಕನ್ನು ಪಡೆದ ಈ ದಿನವನ್ನು ದೇಶದ ನೈಜ ಸ್ವತಂತ್ರ ದಿನವಾಗಿ ಆಚರಿಸಲಾಗುತ್ತಿದೆ .
1932 ನೇ ಆಗಸ್ಟ್ 17ರಂದು ಬ್ರಿಟಿಷರಿಂದ ಅನುಮತಿ ಪಡೆದು ಅಸ್ಪೃಶ್ಯ ಸಮುದಾಯಕ್ಕೆ ಮತ ಹಾಕುವ ಹಕ್ಕನ್ನು ಪಡೆಯಲಾಯಿತು. ಈ ಹೋರಾಟ 1917ರಿಂದ 1932ರವರೆಗೂ ನಿರಂತರವಾಗಿ ನಡೆದಿದ್ದರಿಂದ ಇಂದೂ ನಾವೆಲ್ಲ ಮತ ಚಲಾಯಿಸುವ ತ್ತಿದ್ದೇವೆ ಎಂದರು .
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಲಕ್ಷ್ಮೀ ನಾರಾಯಣ್ ತಾಲೂಕು ಅಧ್ಯಕ್ಷ ಲಕ್ಷ್ಮೀಷತಿ ಉಪಾಧ್ಯಕ್ಷ ಬಾಲಕೃಷ್ಣ ಮುಖಂಡರಾದ ಧ್ರುವ ಕುಮಾರ್ , ವಕೀಲ ಶಿವಕುಮಾರ್ , ಜೀವಿಕ ಮಂಜು ಮಹಾಲಿಂಗಯ್ಯ ಗೋವಿಂದರಾಜು , ಅರಳಾಪುರ ರಮೇಶ್, , ಶಿವಲಿಂಗಪ್ಪ, ವೆಂಕಟರವಣಪ್ಪ, ರಾಮಚಂದ್ರಪ್ಪ ಅರಳಾಪುರ, ಜಿತೇಂದ್ರ, ಹಾಗೂ ಇತರರು ಇದ್ದರು .
ವರದಿ: ದೊಡ್ಡೇರಿ ಮಹಾಲಿಂಗಯ್ಯ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz