ಪಾವಗಡ: ಮನಸ್ಸು ತೃಪ್ತಿಗಾಗಿ ಈ ಚಿಕ್ಕ ಅಳಿಲು ಸೇವೆ ಮಾಡಲಾಗುತ್ತದೆ ಎಂದು ಮಾತೃಶ್ರೀ ಸೇವಾ ಸಂಸ್ಥಾಪಕ ಜಂಗಮರಹಳ್ಳಿ ಲಕ್ಷ್ಮೀನಾರಾಯಣ ಎಚ್. ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಹೇಳಿದರು.
ತಾಲೂಕಿನ ಹರಿಹರಪುರ ಗ್ರಾಮದ ಶ್ರೀ ಸಿದ್ದೇಶ್ವರ ಸ್ವಾಮಿ ಪ್ರೌಢಶಾಲೆಯ ಆವರಣದಲ್ಲಿ ಮಾತೃಶ್ರೀ ಸೇವಾ ಸಂಸ್ಥೆ ವತಿಯಿಂದ ತಾಲ್ಲೂಕಿನಾದ್ಯಂತ ಎಲ್ಲಾ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ಸ್ ಪುಸ್ತಕ ಮತ್ತು ಇತರೆ ಸಲಕರಣೆಗಳನ್ನು ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು
ನಮ್ಮ ಮಾತೃಶ್ರೀ ಸೇವಾ ಸಂಸ್ಥೆಯಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ನೋಟ್ ಪುಸ್ತಕ ಮತ್ತು ಇತರೆ ಸಲಕರಣಗಳನ್ನು ವಿತರಿಸಲು ನಿರ್ಧರಿಸಿದ್ದು, ತಾಲೂಕಿನಿಂದ ಎಲ್ಲಾ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಿಸಿದ್ದೇವೆ. ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿ ಆದರೆ ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಬಹುದೆಂದು ಎಂದ ಅವರು ಸಮಾಜ ಸೇವೆಗೆ ಎಲ್ಲರೂ ಒಗ್ಗೂಡಿ ಎಂದು ಸಲಹೆ ನೀಡಿದರು.
ಪ್ರತಿಯೊಬ್ಬರೂ ಸಮಾಜ ಸೇವಾ ಕಾರ್ಯಗಳಿಗೆ ಕೆಲ ಸಮಯವನ್ನು ಮೀಸಲಿಡಬೇಕು. ಉಳ್ಳವರು ಇಲ್ಲದವರಿಗೆ ಅಗತ್ಯ ನೆರವು ನೀಡಬೇಕು. ಎಲ್ಲರನ್ನೂ ಪ್ರೀತಿಯಿಂದ ಕಾಣಬೇಕು. ಆಗಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಮಾತೃ ಶ್ರೀ ಸೇವಾ ಸಂಸ್ಥೆಯ ಅಧ್ಯಕ್ಷರಾದ ಹೆಚ್ ಲಕ್ಷ್ಮೀ ನಾರಾಯಣನವರು ತಿಳಿಸಿದರು.
ಗ್ರಾಮೀಣ ಭಾಗದ ಹಲವಾರು ವಿದ್ಯಾರ್ಥಿಗಳು ಇಂದು ಶಿಕ್ಷಣದಿಂದ ಮುಂಚಿತವಾಗುತ್ತಿದ್ದಾರೆ. ಇದಕ್ಕೆ ಬಡತನವು ಸಹ ಕಾರಣವಿರಬಹುದು ಆದ್ದರಿಂದ ಆರ್ಥಿಕವಾಗಿ ಸದೃಢರಾಗಿರುವವರು ಸೇವಾ ಮನೋಭಾವದಿಂದ ಇಂತಹ ವಿದ್ಯಾರ್ಥಿಗಳಿಗೆ ನೆರವು ನೀಡಬೇಕು. ಕೇವಲ ಪ್ರಚಾರಕ್ಕಾಗಿ ಸೇವೆ ಮಾಡದೇ ಸಮರ್ಪಣಾ ಮನೋ ಭಾವದಿಂದ ಸೇವೆ ಸಲ್ಲಿಸಬೇಕು. ಎಲ್ಲಾ ಸೇವೆಗಿಂತ ಸಮಾಜ ಸೇವೆ ಶ್ರೇಷ್ಠವಾದದ್ದು ಇಡೀ ಜಗತ್ತೇ ನನ್ನ ಕುಟುಂಬ ಎಂದು ಭಾವಿಸಬೇಕು. ಆಗ ಮಾತ್ರ ಪ್ರತಿಯೊಬ್ಬರು ಸಮರ್ಪಣಾ ಮನೋಭಾವದಿಂದ ಸೇವೆ ಮಾಡಲು ಸಾಧ್ಯ ಎಂದರು .
ಮಾತೃಶ್ರೀ ಸೇವಾ ಸಂಸ್ಥೆಯ ಕಾರ್ಯದರ್ಶಿಗಳಾದ ಆರ್ ಎಲ್ ರಾಜೇಶ್ ಮಾತನಾಡಿ, 25 ವರ್ಷಗಳಿಂದ ಮಾತೃಶ್ರೀ ಸೇವಾ ಸಂಸ್ಥಾನದ ಆಶ್ರಯದಲ್ಲಿ ಸಮಾಜ ಸೇವೆಗಳು ನಡೆಯುತ್ತಿದ್ದು, ಈ ಸಂಸ್ಥೆಯ ಅಧ್ಯಕ್ಷರು ಮಾಡಿರುವ ಸಮಾಜ ಸೇವೆಯನ್ನು ಗುರುತಿಸಿ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಕೋರಿದರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ವೇಲು ರಾಜು,ಶ್ರೀ ಸಿದ್ದೇಶ್ವರ ಸ್ವಾಮಿ ಪ್ರೌಢಶಾಲೆಯ ಕಾರ್ಯದರ್ಶಿಗಳಾದ ಅಜಯ್ ನಾಗೇಶ್ ರಾವ್, ಮುಖ್ಯ ಶಿಕ್ಷಕರಾದ ಎಸ್ಕೆ ರಮೇಶ್, ನರಸಿಂಹಮೂರ್ತಿ, ಜಯರಾಮ ನಾಯ್ಕ್, ಶೇಷಾದ್ರಿ , ನಾಗಾನಂದ, ನಿವೃತ್ತಿ ಶಿಕ್ಷಕರಾದ ಲಕ್ಷ್ಮೀ ನಾರಾಯಣ ಡಿ ಎನ್ ಎಸ್ ದವಡಬೆಟ್ಟ, ನಿವೃತ್ತಿ ಪ್ರಾಂಶುಪಾಲರಾದ ಶ್ರೀನಿವಾಸ್, ಸಿ ಕೆ ಪುರ ಕ್ಲಸ್ಟರ್ ಸಿ ಆರ್ ಪಿ ಮೂರ್ತಿ, ವಿಶ್ವೇಶ್ವರಯ್ಯ ಮುಖ್ಯ ಶಿಕ್ಷಕ ಮುರಳಿ, ಶಿವಮೂರ್ತಿ, ಧನಲಕ್ಷ್ಮಿ, ವೆಂಕಟೇಶ್, ಜಯರಾಮ ರೆಡ್ಡಿ , ಸೋಮಸುಂದರ್, ಕೊತ್ತೂರು ನಾಗರಾಜ್, ಈರಣ್ಣ.ನಾಗಲಿಂಗಪ್ಪ.ಹನುಮಂತರಾಯಪ್ಪ(ಜೆ ಪಿ) ಸುರೇಶ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ವರದಿ: ರಾಮಪ್ಪ ಸಿ.ಕೆ.ಪುರ, ಪಾವಗಡ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA