nammatumakuru

    Subscribe to Updates

    Get the latest creative news from FooBar about art, design and business.

    What's Hot

    ಪೋಕ್ಸೋ ಪ್ರಕರಣ: ಗಾಯಕ ‘ಮ್ಯೂಸಿಕ್ ಮೈಲಾರಿ’ ಮಹಾರಾಷ್ಟ್ರದಲ್ಲಿ ಬಂಧನ

    December 17, 2025

    ವಿಧಾನಸಭೆಯಲ್ಲಿ ಗೃಹಲಕ್ಷ್ಮಿ ಬಾಕಿ ಹಣದ ಕಿಚ್ಚು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷಮೆ, ವಿಪಕ್ಷಗಳ ಸಭಾತ್ಯಾಗ

    December 17, 2025

    80 ವರ್ಷ ಮೇಲ್ಪಟ್ಟ ಹಿರಿಯ ಚೇತನರಿಗೆ ಗೌರವ ಸಮರ್ಪಣೆ

    December 17, 2025
    Facebook Twitter Instagram
    ಟ್ರೆಂಡಿಂಗ್
    • ಪೋಕ್ಸೋ ಪ್ರಕರಣ: ಗಾಯಕ ‘ಮ್ಯೂಸಿಕ್ ಮೈಲಾರಿ’ ಮಹಾರಾಷ್ಟ್ರದಲ್ಲಿ ಬಂಧನ
    • ವಿಧಾನಸಭೆಯಲ್ಲಿ ಗೃಹಲಕ್ಷ್ಮಿ ಬಾಕಿ ಹಣದ ಕಿಚ್ಚು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷಮೆ, ವಿಪಕ್ಷಗಳ ಸಭಾತ್ಯಾಗ
    • 80 ವರ್ಷ ಮೇಲ್ಪಟ್ಟ ಹಿರಿಯ ಚೇತನರಿಗೆ ಗೌರವ ಸಮರ್ಪಣೆ
    • ಗುಡ್ಡ ಗಾಡು ಓಟದ ಸ್ಪರ್ಧೆ: ಡಿ.18ರಂದು ಆಯ್ಕೆ ಪ್ರಕ್ರಿಯೆ
    • ಲೋಹಿಯಾ ಪ್ರಶಸ್ತಿಗೆ ಶಿವಾನಂದ ತಗಡೂರು ಆಯ್ಕೆ
    • ರಾಜ್ಯದ ಜೈಲುಗಳ ಮೇಲೆ ಸರಣಿ ದಾಳಿ: ಮೊಬೈಲ್, ಮಾರಕಾಸ್ತ್ರ ಹಾಗೂ ಗಾಂಜಾ ಪತ್ತೆ
    • ವಿಶ್ವಕಪ್ ಗೆದ್ದ ಭಾರತದ ಮಹಿಳಾ ತಂಡಕ್ಕೆ ಟಾಟಾ ಮೋಟಾರ್ಸ್‌ನಿಂದ ‘ಸಿಯೆರಾ’ ಕಾರು ಉಡುಗೊರೆ!
    • ಕುಣಿಗಲ್ ಸಹಕಾರಿ ರಂಗಕ್ಕೆ ತಾರತಮ್ಯವಾಗಿದ್ದಲ್ಲಿ ಸರಿಪಡಿಸಲಾಗುವುದು: ಸಿಎಂ ಸಿದ್ದರಾಮಯ್ಯ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಶಾಸಕನ ದುರಾಡಳಿತದಿಂದ ಜನತೆ ಬೇಸತ್ತಿದ್ದಾರೆ: ಜೆಡಿಎಸ್ ಮುಖಂಡನಿಂದ ವಾಗ್ದಾಳಿ
    ಗುಬ್ಬಿ July 18, 2022

    ಶಾಸಕನ ದುರಾಡಳಿತದಿಂದ ಜನತೆ ಬೇಸತ್ತಿದ್ದಾರೆ: ಜೆಡಿಎಸ್ ಮುಖಂಡನಿಂದ ವಾಗ್ದಾಳಿ

    By adminJuly 18, 2022No Comments3 Mins Read
    gubbi

    ಗುಬ್ಬಿ:  ತಾಲ್ಲೂಕಿನಲ್ಲಿ ಶಾಸಕನ ದುರಾಡಳಿತದಿಂದ ಜನತೆ ಬೇಸತ್ತಿದ್ದಾರೆ ಎಂದು ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜ್ ನೇರ ವಾಗ್ದಾಳಿ.

    ಗುಬ್ಬಿ ತಾಲ್ಲೂಕಿನಲ್ಲಿ 20ವರ್ಷಗಳಿಂದ ಶಾಸಕರಾಗಿರುವ ನೀನು ತಾಲ್ಲೂಕಿನ ಯಾವ ಅಭಿವೃದ್ಧಿ ಮಾಡಿದ್ದೀರಿ ಎಂಬುದನ್ನು ತೋರಿಸು ನೋಡೋಣ, ಕೇವಲ ಚುನಾವಣೆಯಲ್ಲಿ ತಮ್ಮ ಬೆಂಬಲಿಗರನ್ನು  ಅಧಿಕಾರಿಗಳನ್ನು ಬಳಸಿಕೊಂಡು ಭ್ರಷ್ಟಾಚಾರಕ್ಕೆ ನೇರ ಕಾರಣ ಶಾಸಕ ಎಸ್.ಆರ್.ಶ್ರೀನಿವಾಸ್ ಎಂದು ನೇರ ಆರೋಪ ಮಾಡಿದರು.


    Provided by
    Provided by

    ಗುಬ್ಬಿ ಪಟ್ಟಣದ ತಾಲೂಕು ಕಛೇರಿಯ ಮುಂಭಾಗದಲ್ಲಿ ಜೆಡಿಎಸ್ ತಾಲೂಕು ಘಟಕದ ವತಿಯಿಂದ ಗುಬ್ಬಿ ತಾಲ್ಲೂಕಿನಲ್ಲಿ ನಡೆದಿರುವ ಭೂಹಗರಣವನ್ನು ಸಿಒಡಿ ತನಿಖೆಗೆ ವಹಿಸುವಂತೆ ಆಗ್ರಹಿಸಿ ಇಂದು ಆಯೋಜಸಿದ್ದ ಪ್ರತಿಭಟನೆಯಲ್ಲಿ  ಭಾಗವಹಿಸಿ ಮಾತನಾಡಿದ ಅವರು, ಶಾಸಕರೇ ನಾನಂತು ಬಗರುಕುಂ ಸಾಗುವಳಿ ಮತ್ತು 50.53 ಬಗ್ಗೆ ಪಿಹೆಚ್ ಡಿ ಪದವಿ ಮಾಡಿಲ್ಲ. ನೀವು ಬಗರುಕುಂ ಸಮಿತಿ ಅಧ್ಯಕ್ಷರಾಗಿರುವವರು. ಸಾಗುವಳಿ ವಿತರಣೆಗೆ ಅರ್ಜಿ ಸಲ್ಲಿಸಿ ಕಾಯುತ್ತಿರುವ ರೈತರಿಗೆ ಅನ್ಯಾಯ ಮಾಡಲು ಮುಂದಾಗಬೇಡಿ.  ಇಂದು ರೈತರ ಜಮೀನು ಕಬಳಿಸಲು ಮುಂದಾಗಿರುವ ಭ್ರಷ್ಟ ಅಧಿಕಾರಿಗಳು ಮತ್ತು ತಮ್ಮ ಬೆಂಬಲಿಗರಿಗೆ ರೈತರಿಗೆ ಸಿಗಬೇಕಾದ ಜಮೀನಿನಲ್ಲಿ ಪ್ರಭಾವಿಗಳ ಹೆಸರಿಗೆ ಮಂಜೂರಾತಿ ಮಾಡುವ ಮೂಲಕ ಬಡವರ ಜಮೀನು ಕಬಳಿಸಲು ಮುಂದಾಗಿರುವುದು ಸರಿಯಲ್ಲ. ಇಂದು ಸುಮಾರು 450 ಎಕರೆ ಸರ್ಕಾರಿ ಜಮೀನು ಬ್ರಹಾಂಡ ಭ್ರಷ್ಟಾಚಾರ ದಲ್ಲಿ ತೋಡಗಿ ತಾಲೂಕು  ಕಛೇರಿಯ ಸಿಬ್ಬಂದಿ ಹಣ ಮಾಡುವ ಆಸೆಗೆ ಬಿದ್ದು ತಮ್ಮ ಜೇಬು ತುಂಬಿಸಲು ಹೋಗಿ ಇಂದು ಜೈಲು ಪಾಲಾಗಿದ್ದಾರೆ.

    ಕೇವಲ ಚುನಾವಣಾ ಸಮಯದಲ್ಲಿ ಮಾತ್ರ ಜನತೆಯ ಪರವಾಗಿ ನಿಲುವು ತೋರುವುದು ಬಿಟ್ಟರೆ ತಾಲ್ಲೂಕಿನ ಯಾವ ರೈತರಿಗೆ ನ್ಯಾಯ ದೊರಕಿಸುವಲ್ಲಿ  ನಿಮ್ಮ ನಿಲುವು ಇದೆ ಎಂಬುದು ತಾಲ್ಲೂಕಿನ ಜನತೆಗೆ ತಿಳಿದಿದೆ. ಈ ಬಾರಿ ಜನತೆ ನಿಮ್ಮ ದುರಾಡಳಿತ ದಿಂದ ಸಾಕಷ್ಟು ನೊಂದಿದ್ದು ಜನತೆ ಮತ್ತು ರೈತರ ಶಾಪ ನಿಮಗೆ ತಟ್ಟದೆ ಬಿಡುವುದಿಲ್ಲ ಇದಕ್ಕೆ ನೀವು ಪಶ್ಚಾತಾಪ ಪಡುವ ದಿನಗಳು ಸಮೀಪದಲ್ಲಿ ಬರಲಿದೆ ಎಂದು ಶಾಸಕ ಎಸ್. ಆರ್.ಶ್ರೀನಿವಾಸ್ ವಿರುದ್ಧ ಗಂಭೀರ ಆರೋಪ ಮಾಡಿದರು.

    ತಾವು ಮಾಧ್ಯಮಗಳ ಮುಂದೆ ಹೇಳಿಕೆ ನೀಡುವ ಸಮಯದಲ್ಲಿ ತಾಲ್ಲೂಕಿನ ರಾಜಕೀಯ ಮುಖಂಡರೊಬ್ಬರು ಭ್ರಷ್ಟಾಚಾರದ ಲ್ಲಿ ಸಿಲುಕಿದಾಗ ಗುಬ್ಬಿ ಪೊಲೀಸರು ಅವರನ್ನು ಚಡ್ಡಿ ಯಲ್ಲಿ ಠಾಣೆಯಲ್ಲಿ ಕುರಿಸಿದ ಸಮಯದಲ್ಲಿ ನಾನು ಆತನನ್ನು ಬಿಡಿಸಿದ್ದು ಎಂದು ಹೇಳುವ ನೀನು ಭ್ರಷ್ಟಾಚಾರದಲ್ಲಿ ತೊಡಗುವವರನ್ನು ಯಾಕೆ ಬಿಡಿಸಿಕೊಂಡು ಬಂದಿರಿ  ಎಂದು ಪ್ರಶ್ನಿಸಿದರು.

    ತಾಲೂಕಿನಲ್ಲಿ ಇಲ್ಲಿಯವರೆಗೂ ಯಾವುದೇ ಗುರುತರವಾದ ಉದ್ಯೋಗ ಸೃಷ್ಟಿಯನ್ನು ಮಾಡದೆ ಚುನಾವಣಾ ಸಮಯದಲ್ಲಿ ತಮ್ಮ ಹಿಂಬಾಲಕರ ದರ್ಪದಿಂದ ಚುನಾವಣೆ ಗೆಲ್ಲುವುದು ಮುಖ್ಯವಲ್ಲ ತಾಲೂಕಿನ ರೈತ  ಹಾಗೂ ಬಡ ಕುಟುಂಬಗಳ ಕಷ್ಟ ಸುಖಗಳಿಗಳಿಗೆ ಸ್ಪಂದಿಸುವಂತಹ ಜನಪ್ರತಿನಿಧಿಯಾಗಬೇಕು. ಕೇವಲ ತನ್ನ ಹಿಂಬಾಲಕರ ಅಭಿವೃದ್ಧಿಗೆ ಸರ್ಕಾರದಿಂದ ಬಂದಂತ ಕಾಮಗಾರಿ ಗುತ್ತಿಗೆಗಳನ್ನು ನೀಡಿ ಚುನಾವಣಾ ಸಮಯದಲ್ಲಿ  ಸಹಕಾರ ನೀಡಿದ ಋಣವನ್ನು ತೀರಿಸಲು ಈ ರೀತಿಯ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಟ್ಟಿರುವುದು ಇವರ ಕಾರ್ಯವೈಕರಿಗೆ ಹಿಡಿದ ಕೈಗನ್ನಡಿ ಎಂದು ಆರೋಪಿಸಿದರು.

    ಈ ಭೂ ಮಾಫಿಯಾ ದಂಧೆಯ ಹಿಂದಿರುವ ಕಾಣದ ಕೈಗಳನ್ನು ಕಂಡುಹಿಡಿಯಲು ಸಿಓಡಿ ತನಿಖೆಗೆ ಒಪ್ಪಿಸಲು ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ರವರ ಮುಖಾಂತರ ತನಿಖೆಗೆ ಒಳಪಡಿಸಲು ಒಪ್ಪಿಸುತ್ತೇವೆ ಎಂದರು.

    ಜೆಡಿಎಸ್ ಮುಖಂಡ ಜೆ.ಡಿ.ಸುರೇಶ್ ಗೌಡ ಮಾತನಾಡಿ, ಭ್ರಷ್ಟಾಚಾರ ಈ ತಾಲೂಕಿನಲ್ಲಿ ತಾಂಡವ ಮಾಡುತ್ತಿದ್ದು, ಅಧಿಕಾರಿಗಳು ಶಾಸಕರ ಚೇಲಗಳಂತೆ ವರ್ತಿಸುತ್ತಿರುವುದು ಎಷ್ಟು ಸಮಂಜಸ ಎಂದ ಅವರು ತಮ್ಮ ಹಿಂಬಾಲಕರಿಗೆ ರೈತರು ಉಳುಮೆ ಮಾಡುತ್ತಿರುವ ಜಾಗವನ್ನು ನೀಡಿರುವುದು ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿ ತಾಲೂಕಿನ ಹಳ್ಳಿಗಾಡಿನ ರಸ್ತೆಗಳು ಪಟ್ಟಣದ ರಸ್ತೆಗಳು ಇವುಗಳನ್ನು ನೋಡಿದರೆ ಅಭಿವೃದ್ಧಿ ಕಾರ್ಯದ ಕಾರ್ಯವೈಕರಿಯೇ ಜನತೆಗೆ ತಿಳಿಯುತ್ತದೆ.  ಶಾಸಕರ ಎಂಬಾಲಕರು ಎಷ್ಟು ಜನ ಜೈಲು ಸೇರಿದ್ದಾರೆ ಎಂದು ಪ್ರಶ್ನಿಸಿದವರು ಮುಂದಿನ ದಿನಗಳಲ್ಲಿ ಶಾಸಕರ ಆರ್ಭಟವು ನಡೆಯುವುದಿಲ್ಲ. ಮತದಾರ ಪ್ರಭು ವು ವೀಕ್ಷಿಸುತ್ತಿದ್ದಾನೆ. ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ತಿಳಿಸಿದರು.

    ಇದೇ ಸಂದರ್ಭದಲ್ಲಿ  ತಹಸೀಲ್ದಾರ್ ರವರ ಮುಖಾಂತರ ಕಂದಾಯ ಸಚಿವರಿಗೆ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿಗಳಿಗೆ ಭೂ ಹಗರಣದ ಬಗ್ಗೆ ಸಿಓಡಿ ತನಿಖೆ ನಡೆಸುವಂತೆ ಮನವಿ ಸಲ್ಲಿಸಿದರು.

    ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕೀರಪ್ಪ,   ಜೆಡಿಎಸ್ ಮುಖಂಡ ಶಿವಲಿಂಗಯ್ಯ,  ಎ. ಪಿ.ಎಂ.ಸಿ.ಯೋಗಾನಂದ, ಡಿ.ರಘು, ಫಿರ್ದೋಸ್ ಅಲಿ, ವಿಜಯ್ ಕುಮಾರ್, ಯಲ್ಲಾಪುರ ಗಂಗಣ್ಣ, ಕಡಬ ಗ್ರಾಮ ಪಂಚಾಯತಿ ಸದಸ್ಯರಾದ ಪುರುಷೋತ್ತಮ್, ಗೋಪಾಲ್ ಗೌಡ, ಜೆಡಿಎಸ್ ಮುಖಂಡರು, ಕಾರ್ಯಕರ್ತರು ಗುಬ್ಬಿ ತಾಲೂಕಿನ ಜಮೀನು ಕಳೆದುಕೊಂಡ ರೈತರು ಹಾಗೂ ಇನ್ನಿತರರು ಭಾಗವಹಿಸಿದ್ದರು.

     ವರದಿ:  ಮಂಜುನಾಥ್, ಗುಬ್ಬಿ


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

    admin
    • Website

    Related Posts

    ಗುಬ್ಬಿ | ಡಿ.12ರಂದು ಅಡಿಕೆ ಬೆಳೆ: ರೈತರಿಗೆ ತರಬೇತಿ

    December 11, 2025

    ಮನೆಬಾಗಿಲಿಗೆ ಪಡಿತರ: ಅನ್ನ ಸುವಿಧಾ ಯೋಜನೆ ಜಾರಿ | ಜಿಲ್ಲಾಧಿಕಾರಿ ಶುಭಕಲ್ಯಾಣ್‌

    December 9, 2025

    ಹಣಕಾಸಿನ ವಿಚಾರಕ್ಕೆ ಮಹಿಳೆಯ ಹತ್ಯೆ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

    December 6, 2025

    Comments are closed.

    Our Picks

    ವಿಶ್ವಕಪ್ ಗೆದ್ದ ಭಾರತದ ಮಹಿಳಾ ತಂಡಕ್ಕೆ ಟಾಟಾ ಮೋಟಾರ್ಸ್‌ನಿಂದ ‘ಸಿಯೆರಾ’ ಕಾರು ಉಡುಗೊರೆ!

    December 17, 2025

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಪೋಕ್ಸೋ ಪ್ರಕರಣ: ಗಾಯಕ ‘ಮ್ಯೂಸಿಕ್ ಮೈಲಾರಿ’ ಮಹಾರಾಷ್ಟ್ರದಲ್ಲಿ ಬಂಧನ

    December 17, 2025

    ಬಾಗಲಕೋಟೆ: ಉತ್ತರ ಕರ್ನಾಟಕದ ಪ್ರಸಿದ್ಧ ಜನಪದ ಗಾಯಕ ‘ಮ್ಯೂಸಿಕ್ ಮೈಲಾರಿ’ ಅಲಿಯಾಸ್ ಮೈಲಾರಿಯನ್ನು ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ…

    ವಿಧಾನಸಭೆಯಲ್ಲಿ ಗೃಹಲಕ್ಷ್ಮಿ ಬಾಕಿ ಹಣದ ಕಿಚ್ಚು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷಮೆ, ವಿಪಕ್ಷಗಳ ಸಭಾತ್ಯಾಗ

    December 17, 2025

    80 ವರ್ಷ ಮೇಲ್ಪಟ್ಟ ಹಿರಿಯ ಚೇತನರಿಗೆ ಗೌರವ ಸಮರ್ಪಣೆ

    December 17, 2025

    ಗುಡ್ಡ ಗಾಡು ಓಟದ ಸ್ಪರ್ಧೆ: ಡಿ.18ರಂದು ಆಯ್ಕೆ ಪ್ರಕ್ರಿಯೆ

    December 17, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.