ತುಮಕೂರು: ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ನಡೆಯುತ್ತಿದ್ದ ಸುಂಕಾಪುರಕ್ಕೆ ನಾಳೆ ಕೇಂದ್ರ ಸಚಿವ ವಿ ಸೋಮಣ್ಣ ಭೇಟಿ ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ತುರುವೇಕೆರೆಯಲ್ಲಿ ಶಾಸಕ ಎಂ.ಟಿ. ಕೃಷ್ಣಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ನಾಳೆ ನಾನು ಕೂಡಾ ಅಲ್ಲಿಗೆ ಬರ್ತಿನಿ. ಹೋರಾಟಕ್ಕೆ ಯಾರೆಲ್ಲಾ ಸಹಕಾರ ಕೊಟ್ಟಿದ್ರು ಅವರೆಲ್ಲರೂ ನಾನು ಕೃತಜ್ಞತೆ ಹೇಳ್ತಿನಿ. ಹೋರಾಟಗಾರರ ಮೇಲೆ ಈಗ 13 ಎಫ್ ಐಆರ್ ಹಾಕಿದ್ದಾರೆ. 100 ಎಫ್ ಐಆರ್ ಗೆ ಇನ್ನು 87 ಖಾಲಿ ಇದೆ. ಹಾಕಿಕೊಳ್ಳಲಿ ಬಿಡಿ ನಾನು ಏನು ಬೇಡ ಅಂತೀನಾ ಎಂದರು.
ಮೊನ್ನೆ ಎಸ್ ಪಿ, ಐಜಿ ಮುಂದೆ ಹೇಳಿದ್ದೇವೆ. ರೈತರದ್ದು, ಹಾಗೂ ಸ್ವಾಮೀಜಿಗಳ ಮೇಲೆ ಹಾಕಿರುವ ಎಫ್ ಐಆರ್ ತೆಗಿರಿ ಅಂತ. ನಮ್ಮದು ತೆಗಿರಿ ಅಂತ ನಾವು ಹೇಳಿಲ್ಲ, ನಾವು ಕೇಳೋದು ಇಲ್ಲ. ಸ್ವಾಮೀಜಿಗಳದ್ದನ್ನ ತೆಗಿತೀವಿ ಅಂತ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದಾರೆ. ಅದಕ್ಕೆ ಧನ್ಯವಾದ ಹೇಳ್ತಿನಿ ಎಂದರಲ್ಲದೇ ನಮ್ಮ ಮೇಲೆ ಎಷ್ಟು ಕೇಸ್ ಬೇಕಾದ್ರು ಹಾಕಿಕೊಳ್ಳಲಿ, ನಮ್ಮ ಹೋರಾಟ ನಿರಂತರವಾಗಿ ಇರುತ್ತೆ ಎಂದರು.
ನಾವು ಸಭೆ ಕರೆರಿ ಅಂತ ಕೇಳಿಲ್ಲ. ಎಂ.ಪಿ ಗಳು ಕೇಳಿದ್ದಾರೆ. ಸಭೆಗೆ ಕರೆದರೆ ನಾವು ಹೋಗ್ತಿವಿ ನಮ್ಮಗೇನು ಅಂಭ್ಯತರ ಇಲ್ಲ ಎಂದು ಇದೇ ವೇಳೆ ತಿಳಿಸಿದರು.
ಆರ್ ಸಿಬಿ ಸಂಭ್ರಮಾಚರಣೆ ವೇಳೆ 11 ಮಂದಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವರು ರಾಜೀನಾಮೆ ಕೊಡೋದಲ್ಲ ಇಡೀ ಸರ್ಕಾರನೇ ವಜಾ ಮಾಡಬೇಕು. ಆರ್ ಸಿಬಿ ಗೆದ್ದಿದ್ದು ನನಗೂ ಹೆಮ್ಮೆ. ಸಮಸ್ಯೆ ಏನು ಅಂದ್ರೆ ಒಂದೆರೆಡು ದಿನ ಲೇಟ್ ಆಗಿ ಕಾರ್ಯಕ್ರಮ ಮಾಡಬೇಕಿತ್ತು. ಆವತ್ತು ಇಡೀ ರಾತ್ರಿಯಿಂದ ಬೆಳಗ್ಗೆವರೆಗೆ ಯುವಕರೆಲ್ಲ ಪಟಾಕಿ ಹೊಡೆದು ಕುಣಿದು ಕುಪ್ಪಳಿಸಿದ್ದಾರೆ. ಎರಡು ದಿನ ಬಿಟ್ಟು ಕಾರ್ಯಕ್ರಮ ಮಾಡಿದ್ರೆ ಈ ಅನಾಹುತ ಆಗ್ತಿರಲಿಲ್ಲ. 35 ಸಾವಿರ ಜನ ಕುಳಿತುಕೊಳ್ಳುವ ಜಾಗದಲ್ಲಿ 3 ಲಕ್ಷ ಜನ ಸೇರಿದ್ರೆ ಏನಾಗುತ್ತೆ. ಎಲ್ಲಾದ್ರು ಸಿಟಿಯಿಂದ ಹೊರಗಡೆ 50 ಎಕರೆ ಜಾಗದಲ್ಲಿ ಟೆಂಟ್ ಹಾಕಿ ಮಾಡಿದ್ರೆ ಈ ಅನಾಹುತ ಆಗ್ತಿರಲಿಲ್ಲ. ಈ ದುರಂತದ ಹೊಣೆಯನ್ನ ಸರ್ಕಾರನೇ ಹೊರಬೇಕು. ಅಮಾಯಕ ಪೊಲೀಸರನ್ನ ಸಂಸ್ಪೆಂಡ್ ಮಾಡೊದಲ್ಲ. ಇದನ್ನ ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದರು.
ಮುಖ್ಯಮಂತ್ರಿ ಹೊಣೆಗಾರಿಕೆ ಹೊತ್ತುಕೊಳ್ಳಬೇಕು. ಇಡೀ ಸರ್ಕಾರ ಇದಕ್ಕೆ ನೇರಹೊಣೆ. ಸರ್ಕಾರ ಮಾಡಿರೋ ತಪ್ಪು ಮುಚ್ಚಿಕೊಳ್ಳೋಕೆ ಪರಿಹಾರ ಕೊಡ್ತಿದ್ದಾರೆ. ಇನ್ನು 50 ಲಕ್ಷ ಕೊಡಿ ಬಿಡಿ, ಕೂಡಲೇ ಈ ಸರ್ಕಾರವನ್ನ ವಜಾ ಮಾಡಬೇಕು. ಗೃಹ ಸಚಿವರು ರಾಜೀನಾಮೆ ಕೊಡೋದಲ್ಲ. ಇಡೀ ಸರ್ಕಾರನೇ ವಜಾ ಮಾಡಬೇಕು ಎಂದು ಒತ್ತಾಯಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW