ಹಿರಿಯೂರು: ಮೇ 1 ವಿಶ್ವದಾದ್ಯಂತ ಕಾರ್ಮಿಕರ ದಿನಾಚರಣೆ ಆಚರಿಸುತ್ತಿದ್ದು, ಇದೇ ಸಂದರ್ಭದಲ್ಲಿ ಕನ್ನಡದ ಚಲನಚಿತ್ರ ನಟಿ, ನಿರ್ಮಾಪಕಿ, ಹಾಗೂ ಇಂದಿರಾ ಗಾಂಧಿ ಅಭಿಮಾನಿಗಳ ವೇದಿಕೆಯ ರಾಜ್ಯಧ್ಯಕ್ಷರಾದ ಮುನಿರತ್ನ ಯಾದವ್ ಅವರು ನಮ್ಮ ತುಮಕೂರು ಮಾಧ್ಯಮದ ಜೊತೆಗೆ ಮಾತನಾಡಿ ಕಾರ್ಮಿಕರ ದಿನಾಚರಣೆಯ ಶುಭಾಶಯ ತಿಳಿಸಿದರು.
ಇದೇ ಸಂದರ್ಭದಲ್ಲಿ ಇಂದಿರಾ ಗಾಂಧಿಯವರ ಮಹತ್ವವಾದ ಸಾದನೆಗಳು ಕಾರ್ಮಿಕರಿಗೆ ಸಿಗಬೇಕಾಗಿರುವಂತಹ ಪಿ ಎಫ್ ಇ ಎಸ್ ಐ ಯಂತಹ ಕಾರ್ಮಿಕರಿಗೆ ಸಿಗಬೇಕಾಗಿರುವ ಮೂಲಭೂತ ಸೌಕರ್ಯಗಳು ಸಹ ಇಂದಿನ ದುರಾಡಳಿತ ಬಿ ಜೆ ಪಿ ಸರ್ಕಾರದಲ್ಲಿ ಮುಳುಗಿಹೋಗಿರುವುದು ನಿಜಕ್ಕೂ ಸಹ ಇದು ಅಮಾನವೀಯ ವಿಷಯವಾಗಿದೆ ಎಂಬುದಾಗಿ ಆಕ್ರೋಶ ವ್ಯಕ್ತಪಡಿಸಿರು.
ಇಂದಿನ ದಿನಗಳಲ್ಲಿ ರೈತರು ಮತ್ತು ಕಾರ್ಮಿಕರು ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳು ಹಾಗೂ ಕನಿಷ್ಟ ತಿಂಗಳ ವೇತನವು ಸಹ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ ಹಾಗಾಗಿ ಅವರು ಜೀವನ ನಿರ್ವಾಹಣೆ ಹೇಗೆ ಸಾಧ್ಯ , ಇಂದಿನ ದಿನಗಳಲ್ಲಿ ಈ ಬಿ ಜೆ ಪಿ ಸರ್ಕಾರದ ಆಡಳಿತದಿಂದ ಕಾರ್ಮಿಕರಿಗೆ ಯಾವುದೆ ತರಹದ ಸವಲತ್ತುಗಳು ಸಿಗದೆ ಜೀವನ ನಿರ್ವಾಹಣೆ ಮಾಡಲು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾದ ಸಂದರ್ಭದಲ್ಲಿ ಆತ್ಮಹತ್ಯೆ ಶರಣಾಗುವಂತ ಪರಿಸ್ಥಿತಿ ಇಂದಿನ ಬಿ ಜೆ ಪಿ ಸರ್ಕಾರದ ಆಡಳಿತದಲ್ಲಿ ಉಂಟಾಗಿದೆ. ಇದಕ್ಕೆ ಸಾಕ್ಷಿಯಾಗಿ ಇಂದಿನ ಬಿ ಜೆ ಪಿ ಪಕ್ಷದ ಕಾರ್ಯಕರ್ತ ಸಂತೋಷ್ ಪಾಟೀಲ್ ಅವರ ಆತ್ಮಹತ್ಯೆ . ಇದಕ್ಕೆ ಮೂಲ ಕಾರಣ ಬಿ ಜೆ ಪಿ ಸರ್ಕಾರದ 40% ಕಮಿಷನ್. ಪಂಚಾಯತ್ ರಾಜ್ ಹಾಗೂ ಗ್ರಾಮೀಣ ಅಭಿವೃದ್ಧಿ ಇಲಾಖೆಯ ಸಚಿವರಾದ ಈಶ್ವರಪ್ಪನವರ 40% ಕಮಿಷನ್ ಇಂದಿನ ಬಿ ಜೆ ಪಿ ಕಾರ್ಯಕರ್ತನ ಕಾರಣಕ್ಕೆ ಮೂಲ ಕಾರಣವಾಗಿದೆ. ಆದರೆ , ಮುಖ್ಯಮಂತ್ರಿ ಯಾಗಿರುವ ಬಸವರಾಜ್ ಬೊಮ್ಮಾಯಿ ಅವರ ಮಾಧ್ಯಮದ ಜೊತೆಗೆ ಮಾತನಾಡುತ್ತಾ ಈಶ್ವರಪ್ಪ ನವರು ಇನ್ನು ಮೂರೇತಿಂಗಳಲ್ಲಿ ಮತ್ತೆ ರಾಜಕಾರಣಕ್ಕೆ ಮರಳಿ ವಾಪಾಸ್ಸು ಬರುತ್ತಾರೆ ಎಂಬುದಾಗಿ ನೀಡಿರುವ ಹೇಳಿಕೆ ನೀಡಿದ್ದಾರೆ ಇದು ಬೇಜಾವ್ದಾರಿತನ ತೋರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಇಂದಿರಾಗಾಂಧಿ ಅಭಿಮಾನಿಗಳ ವೇದಿಕೆಯ ರಾಜ್ಯ ಸಂಸ್ಥಪಕರಾದ ರಂಗಪ್ಪ ಯಾದವ್ ಅವರು ಮಾತನಾಡಿ, ಇಂದಿನ ದಿನಗಳಲ್ಲಿ ಕಾರ್ಮಿಕರ ಕಾರ್ಡನ್ನು ಸಹ ಕೆಲವು ದಲ್ಲಾಳಿಗಳು ಹಣದ ಆಮಿಷದಿಂದ ಸುಳ್ಳು ಮಾಹಿತಿ ನೀಡಿ, ನಿಜವಾದ ಕಾರ್ಮಿಕರಿಗೆ ಸಿಗಬೇಕಾದ ಮೂಲಭೂತ ಸೌಕರ್ಯಗಳು ಸಹ ದಲ್ಲಾಳಿಗಳ ಹಣದ ಆಮಿಷದಿಂದ ಕಾರ್ಮಿಕರ ಕಾರ್ಡು ಸಹ ಸಿಗದೆ ಅಲೆದಾಡುತ್ತಿರುವುದು ನಿಜಕ್ಕೂ ಸಹ ತೀವ್ರ ಬೇಸಾರದ ಸಂಗತಿಯಾಗಿದೆ. ಇದರ ಸಲುವಾಗಿ ರಾಜ್ಯದ ಮೂಲೆಮೂಲೆಗಳಲ್ಲಿ ಸಹ ಇಂದಿರಾ ಗಾಂಧಿ ಅಭಿಮಾನಿಗಳ ವೇದಿಕೆಯಿಂದ ಉಚಿತವಾಗಿ ಕಾರ್ಮಿಕರ ಕಾರ್ಡನ್ನು ಉಚಿತವಗಿ ಮಾಡಿಸಿಕೊಡುತ್ತಿದ್ದೆವೆ. ಸರ್ವರೂ ಸಹ ಉಪಯೋಗಿ ಪಡೆದು ಕೊಳ್ಳಬಹುದಾಗಿದೆ ಎಂಬುದಾಗಿ ತಿಳಿಸಿದರು. ಹಾಗೂ ಮುಂದಿನ 2023 ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರವು ಬಹುಮತಗಳಿಂದ ಕಾಂಗ್ರೆಸ್ ಸರ್ಕಾರವು ಆಡಳಿತಕ್ಕೆ ಬರುವುದಾಗಿ ಇದೇ ವೇಳೆ ನಮ್ಮ ತುಮಕೂರು ಮಾಧ್ಯಮದ ಮೂಲಕ ತಿಳಿಸಿದರು.
ಇದೇ ಸಂದರ್ಭದಲ್ಲಿ ಇಂದಿರಾ ಗಾಂಧಿ ಅಭಿಮಾನಿಗಳ ವೇದಿಕೆಯ ಸಂಸ್ಥಾಪಕರಾದ ರಂಗಪ್ಪ ಯಾದವ್ ಅವರ ನೇತೃತ್ವದಲ್ಲಿ ಪ್ರೀತಮ್ ನಾಯಕ ಅವರಿಗೆ ಇಂದಿರಾ ಗಾಂಧಿ ಅಭಿಮಾನಿಗಳ ವೇದಿಕೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಪ್ರೀತಮ್ ಗೌಡ ಅವರು ಮಾತನಾಡಿ, ಇಂದಿನ ದಿನಗಳಲ್ಲಿ ವಿರೋದ ಪಕ್ಷದ ಬಿ ಜೆ ಪಿ ನಾಯಕರುಗಳು ಇ ವಿ ಎಮ್ ಮೆಷಿನ್ ನನ್ನು ತಮ್ಮ ರಾಜಕೀಯದ ಸ್ವಾರ್ಥಕ್ಕಾಗಿ ಆಯ್ಕೆಮಾಡಿಕೊಂಡಿರುವಂತಹ ಮೆಷಿನ್ ಆಗಿದೆ ಎಂಬುದಾಗಿ ಭ್ರಷ್ಡ ಬಿ ಜೆ ಪಿ ಸರ್ಕಾರದ ವಿರುದ್ಧ ತೀವ್ರ ಬೇಸಾರ ವ್ಯಕ್ತಪಡಿಸಿದ್ದಾರೆ.
ನಂತರ ಇಂದಿರಾ ಗಾಂಧಿ ಅಭಿಮಾನಿಗಳ ವೇದಿಕೆಯ ಮುಖಂಡರಾದ ಇಂದು ಪ್ರೀತಮ್ ನವರು ಮಾತನಾಡಿ ಅಂದಿನ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ವಿದ್ಯಾರ್ಥಿಗಳಿಗೆ ನೀಡಿದಂತಹ ಮೂಲಭೂತ ಸೌಕರ್ಯಗಳನ್ನು ಇಂದಿನ ಭ್ರಷ್ಡ ಬಿ ಜೆ ಪಿ ಸರ್ಕಾರದಲ್ಲಿ ಅದರ ವಿಫಲತೆಯನ್ನು ಕಳೆದುಕೊಂಡಿದೆ . ಇಂದಿನ ಬಿ ಜೆ ಪಿ ಸರ್ಕಾರದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಗಳ ವಿದ್ಯಾರ್ಥಿಗಳಿಗೆ ಯಾವುದೆ ರೀತಿಯ ಸರ್ಕಾರದ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ , ಮಾರ್ಗದರ್ಶನ ನೀಡುವಲ್ಲಿ ಸರ್ಕಾರದ ಸಮಾನತೆಯನ್ನು ಕಳೆದಿಕೊಂಡಿದೆ. ಇಂದಿನ ಬಿ ಜೆ ಪಿ ಸರ್ಕಾರದ ಆಡಳಿತದಲ್ಲಿ ವಿದ್ಯಾಸಂಸ್ಥೆಯಲ್ಲಿ ಅತಿ ಹೆಚ್ಚಿನ ರೀತಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ . ಇದಕ್ಕೆ ಸಾಕ್ಷಿಯಾಗಿ ಇತ್ತೀಚಿಗೆ ನಡೆದ ಪಿ ಎಸ್ ಐ, ಎಫ್ ಡಿ ಎ , ಇನ್ನು ಮುಂತಾದ ಎಲ್ಲಾ ಪರೀಕ್ಷೆಗಳಲ್ಲಿಯೂ ಸಹ ನಡೆದಿರುವ ಹಗರಣವೇ ಮೂಲಭೂತ ಸಾಕ್ಷಿಯಾಗಿದೆ ಎಂಬುದಾಗಿ ಭ್ರಷ್ಟಾಚಾರ ಬಿ ಜೆ ಪಿ ಸರ್ಕಾರದ ಮೇಲೆ ತೀವ್ರ ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಇಂದಿರಾ ಗಾಂಧಿ ಅಭಿಮಾನಿಗಳ ವೇದಿಕೆಯ ರಾಜ್ಯ ಸಂಸ್ಥಾಪಕರಾದ ರಂಗಪ್ಪ ಯಾದವ್, ನಟಿ ಹಾಗೂ ಇಂದಿರಾ ಗಾಂಧಿ ಅಭಿಮಾನಿಗಳ ವೇದಿಕೆಯ ರಾಜ್ಯಾಧ್ಯಕ್ಷರಾದ ಮುನಿರತ್ನ ಯಾದವ್, ಪ್ರೀತಮ್ ನಾಯಕ, ಇಂದು ಪ್ರೀತಮ್. ಉಪಸ್ಥಿತರಿದ್ದರು.
ವರದಿ: ಮುರುಳಿಧರನ್ ಆರ್. ಹಿರಿಯೂರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5