ಒಡಿಶಾ:ಕುಡಿತದ ಅಮಲಿನಲ್ಲಿ ವ್ಯಕ್ತಿಯೊಬ್ಬ ಮೂವರು ಮಕ್ಕಳನ್ನು ಕೊಂದು ಬಾವಿಗೆ ಎಸೆದಿರುವ ಘಟನೆ ಒಡಿಶಾದ ಸುಂದರ್ಗಢ ಜಿಲ್ಲೆಯ ಕೊಯಿಡಾ ಪೊಲೀಸ್ ವ್ಯಾಪ್ತಿಯ ಕುಲಾ ಗ್ರಾಮದಲ್ಲಿ ನಡೆದಿದೆ.
ಆರೋಪಿಯ ಪಾಂಡು ಮುಂಡ ಬುಡಕಟ್ಟು ಜನಾಂಗಕ್ಕೆ ಸೇರಿದ ವ್ಯಕ್ತಿಯಾಗಿದ್ದು ಈತ ಕೂಲಿ ಕಾರ್ಮಿಕನಾಗಿದ್ದಾನೆ.
ಈತ ಶನಿವಾರ ರಾತ್ರಿ ಕುಡಿದು ಮನೆಗೆ ಬಂದು ಕ್ಷುಲ್ಲಕಾರಣಕ್ಕೆ ಹೆಂಡತಿ ದುಬುಲಿ ಮುಂಡಾ ಅವರೊಂದಿಗೆ ಜಗಳವಾಡಿದ್ದು, ಕೋಪ ಅತೀರೇಕ್ಕೆ ಏರೀದ್ದು ಆರೋಪಿಯು ಮೊದಲು ಕೊಡಲಿಯಿಂದ ಪತ್ನಿಯ ಮೇಲೆ ಹಲ್ಲೆ ಮಾಡಲು ಯತ್ನಿಸಿದನು.ಆದರೆ ಭಯಗೊಂಡ ಪತ್ನಿ ಆರೋಪಿಯ ಕೈಯಿಂದ ತಪ್ಪಿಸಿಕೊಂಡು ಮನೆಯ ಸಮೀಪದ ಪೊದೆಗಳಲ್ಲಿ ಅವಿತುಕೊಂಡಳು.
ಈ ವೇಳೆ ಆರೋಪಿಯು 5 ವರ್ಷದ ಮಗಳು ಸೀಮಾ, 2 ವರ್ಷದ ಮಗ ರಾಜು, ಎರಡು ತಿಂಗಳ ಮಗು ಮೇಲೆ ಹಲ್ಲೆ ನಡೆಸಿ ಕೊಂದಿದ್ದಲ್ಲದೇ, ಅವರನ್ನು ಬಾವಿಗೆ ಎಸೆದು ಪರಾರಿಯಾಗಿದ್ದಾನೆ.ಭಾನುವಾರ ಬೆಳಗ್ಗೆ ದುಬುಲಿ ಹೊರ ಬಂದು ಮಕ್ಕಳನ್ನು ಹುಡುಕಿದ್ದಾಳೆ. ಈ ವೇಳೆ ಎಷ್ಟು ಹುಡುಕಿದರೂ ಮಕ್ಕಳು ಕಾಣಲಿಲ್ಲ. ಬಾವಿಯ ಬಳಿ ಬಿದ್ದಿದ್ದ ತನ್ನ ಮನೆಯ ಹೊದಿಕೆ ಕಂಡ ದುಬುಲಿ ಅಲ್ಲಿ ಹೋಗಿ ನೋಡಿದಾಗ, ಮಕ್ಕಳು ಬಾವಿಯಲ್ಲಿ ಬಿದ್ದಿರುವುದನ್ನು ನೋಡಿದ್ದಾಳೆ.
ನಂತರ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ವಿಷಯ ತಿಳಿಸಿದ್ದು ಅವರ ನೆರವಿನಿಂದ ಮೂವರು ಮಕ್ಕಳ ಮೃತದೇಹಗಳನ್ನು ಪೊಲೀಸರು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.ಕೃತ್ಯ ಎಸಗಿ ನಾಪತ್ತೆಯಾದ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy