ತುರುವೇಕರೆ: ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಛವಾಗಿಲ್ಲದ ಕಾರಣ ನಲ್ಲಿಯಲ್ಲಿ ನೀರಿನ ಬದಲು ಕಪ್ಪೆಯ ಕಾಲು ಬಂದಿರುವ ಘಟನೆ ತಾಳ್ಕೆರೆ ಪಂಚಾಯ್ತಿಯ ಪುಟ್ಟಮಾದಿಹಳ್ಳಿಯ ಟಿಪ್ಪು ನಗರದಲ್ಲಿ ನಡೆದಿದೆ.
ಇಲ್ಲಿನ ನೀರಿನ ಟ್ಯಾಂಕ್ ನ್ನು ವರ್ಷಗಳಿಂದ ಸ್ವಚ್ಛ ಮಾಡದ ಕಾರಣ, ಇಲ್ಲಿನ ಟ್ಯಾಂಕ್ ಗಳು ಗಲೀಜಾಗಿ ಕಪ್ಪೆ ಕ್ರಿಮಿ ಕೀಟಗಳ ವಾಸಸ್ಥಾನವಾಗಿದೆ. ಇಲ್ಲಿನ ಜನರು ವಿಧಿಯಿಲ್ಲದೇ ಇದೇ ನೀರನ್ನು ಕುಡಿಯಲು ಬಳಸುತ್ತಿರುವ ಕಾರಣ , ಪದೇ ಪದೇ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎನ್ನುವ ಆಕ್ರೋಶದ ಮಾತುಗಳು ಘಟನೆಯ ಬೆನ್ನಲ್ಲೇ ಕೇಳಿ ಬಂದಿದೆ.
ಆದರೆ ತಲೆ ಕೆಡಿಸಿಕೊಳ್ಳದ ಗ್ರಾಮ ಪಂಚಾಯ್ತಿ ಕಾರ್ಯಾಲಯ ಜಾಣ ಕುರುಡು ತೋರಿಸುತ್ತಿದೆ. ಇಲ್ಲಿನ ಜನರಿಗೆ ಖಾಯಿಲೆ ಬಂದು ಸಾವು ನೋವು ಸಂಭವಿಸಿದರೆ, ಅದಕ್ಕೆ ಪಂಚಾಯ್ತಿಯೇ ನೇರ ಹೊಣೆ ಎಂದು ಇಲ್ಲಿನ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ವರದಿ: ವೆಂಕಟೇಶ ಜೆ.ಎಸ್.( ವಿಕ್ಕಿ )
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB