ತುಮಕೂರು: ಮಧುಗಿರಿ ಮೋದಿ ಹೆಸರಿನಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಬರೆದಿರುವ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟ್ರೋಲ್ ಆಗಿವೆ.
ಪತ್ರದಲ್ಲಿ ಕಂಡು ಬಂದಿರುವಂತೆ, 9 ಜನ ಬ್ರಾಹ್ಮಣ ಕವಿಗಳ ಪಾಠ ಮಕ್ಕಳಿಗೆ ಕೊಡುತ್ತಿದ್ದೀರಿ. ನಾನು ಹೋರಾಟಗಾರ, ನನ್ನ ಪಠ್ಯವನ್ನು ಸೇರಿಸಲು ರೋಹಿತ್ ಚಕ್ರತೀರ್ಥಗೆ ಸಲಹೆ ನೀಡಿ ಎಂದು ಹಿಂದೂ ಹೋರಾಟಗಾರ ಮಧುಗಿರಿ ಮೋದಿ ಹೆಸರಿನಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಪತ್ರ ಬರೆಯಲಾಗಿದೆ.
ಯೋಗಿ ಆದಿತ್ಯನಾಥ್ ಉತ್ತರಪ್ರದೇಶದ ಸಿಎಂ ಆಗಲೂ ನಾನು ಕಾರಣ. ದೇಶವ್ಯಾಪಿ ಹಿಂದುತ್ವ ಹರಡಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಮಧುಗಿರಿ ಮೋದಿ ಹೆಸರಿನ ಈ ಪತ್ರ ನೆಟ್ಟಿನಲ್ಲಿ ಭಾರೀ ವೈರಲ್ ಆಗಿದೆ. ಈ ಪತ್ರ ಮಧುಗಿರಿ ಮೋದಿಯವರೇ ಬರೆದಿರುವುದೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5