ಪಾವಗಡ: ತಾಲ್ಲೂಕಿನ ರೈತರ ಜಮೀನಿನಲ್ಲಿ ಕೆಲಸ ಮಾಡುವ ರೈತರಿಗೆ ನರೇಗಾ ಯೋಜನೆಯಡಿಯಲ್ಲಿ ಅವಕಾಶ ಕಲ್ಪಸುವಂತೆ ಕಿಸಾನ್ ಸಂಘದ ರಾಜ್ಯ ಉಪಾಧ್ಯಕ್ಷರಾದ ಕೃಷ್ಣ ನಾಯ್ಕ ಆಗ್ರಹಿಸಿದರು.
ತಹಸೀಲ್ದಾರ್ ಕಚೇರಿ ಮುಂದೆ ಕಿಸಾನ್ ಸಂಘದ ರಾಜ್ಯಾಧ್ಯಕ್ಷರಾದ ವಿ.ನಾಗಭೂಷಣರೆಡಿ ಹಮ್ಮಿಕೊಂಡಿದ್ದ ಮೌನಪ್ರತಿಭಟನೆಯಲ್ಲಿ ಮಾತನಾಡುತ್ತಿದ್ದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಜಮೀನಿನಲ್ಲಿ ಕೆಲಸ ಮಾಡುವ ರೈತರಿಗೆ ನರೇಗಾ ಯೋಜನೆಯಡಿಯಲ್ಲಿ ಅವಕಾಶ ಕಲ್ಪಿಸಿದರೆ ನಿರುದ್ಯೋಗ ಸಮಸ್ಯೆ ಹಾಗೂ ವಲಸೆ ಹೋಗುವುದು ತಪ್ಪುಲಿದೆ ಎಂದ ಅವರು, ಶೇಂಗಾ, ಬತ್ತ, ಗೋಧಿ, ಅಡಿಕೆ, ಗುಣಿಗಳ ಕಾರ್ಯ ಮಾಡುವ ರೈತರಿಗೆ ಸರ್ಕಾರಗಳು ನೇರವಾಗಬೇಕೆಂದು ಒತ್ತಾಯಿಸಿದ್ದರು. ಮೌನ ಪ್ರತಿಭಟನೆ ಮನವಿಯನ್ನು ಉಪತಹಸೀಲ್ದಾರ್ ಸುಮತಿಯವರಿಗೆ ನೀಡಿದರು.
ಇದೇ ಪ್ರತಿಭಟನೆಯಲ್ಲಿಗೆ ಕೊಂಚೆ ಶಿವರುದ್ರಪ್ಪ, ಚಂದ್ರಕಲಾ, ಮಂಜುಳ, ರಮೇಶ್ ಬಾಬು ರಾಠೋಡ್, ಸಿ.ಕೆ. ಪುರ ನಾಗರಾಜ ಸ್ವಾಮಿ, ಮಲ್ಲಿಕಾರ್ಜುನ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.
ವರದಿ: ನಂದೀಶ್ ನಾಯ್ಕ ಪಿ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz