ತುಮಕೂರು: ಜಿಲ್ಲೆ ಶಿರಾ ತಾಲ್ಲೂಕು ಬುಕ್ಕಾಪಟ್ಟಣ ಹೋಬಳಿ ಹುಯಿಲ್ ದೊರೆ ಶ್ರೀ ಶಾರದಾ ಇಂಟರ್ನ್ಯಾಷನಲ್ ಕೇಂಬ್ರಿಡ್ಜ್ ಶಾಲೆಯ ವಿದ್ಯಾರ್ಥಿಗಳು ಭಾನುವಾರ ಚನ್ನಪಟ್ಟಣದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ಶಿಪ್ ನಲ್ಲಿ ಕಥಾ ವಿಭಾಗದಲ್ಲಿ ಹರ್ಷಿತ್ ಆರ್ , ಮಾರುತಿ, ಶ್ರೀ ಸ್ಕಂದ ಪ್ರಥಮ ಸ್ಥಾನ ಹಾಗೂ ಹಿತೇಶ್ ದ್ವಿತೀಯ ಸ್ಥಾನ ಕುಮಿತೆ ವಿಭಾಗದಲ್ಲಿ ನಿಶ್ಚಿತ್, ಮಾರುತಿ, ಪ್ರಥಮ ಸ್ಥಾನ ಹರ್ಷಿತ್ ಪಿ. ದ್ವಿತೀಯ ಸ್ಥಾನ ಹಾಗೂ ಶ್ರೀ ಸ್ಕಂದ ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ.
ಈ ವಿದ್ಯಾರ್ಥಿಗಳನ್ನು ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ರಂಗನಾಥ್ ಜೆ, ಕಾರ್ಯದರ್ಶಿಗಳಾದ ಬಾಲಕೃಷ್ಣ, ಪ್ರಾಂಶುಪಾಲ ನದೀಮ್ ಅಜ್ಮತ್, ಕರಾಟೆ ತರಬೇತುದಾರರಾದ ಮಧು ವೈ, ಎನ್, ಚಿದಾನಂದ, ಅಭಿಷೇಕ್ ಬಿ.ಆರ್. ಸೇರಿದಂತೆ ಶಾಲೆಯ ಸಹ ಶಿಕ್ಷಕರು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q