ಪಾವಗಡ: ತಾಲೂಕಿನ ಸಿ ಕೆ ಪುರ ಪಂಚಾಯ್ತಿ ವ್ಯಾಪ್ತಿಯ 3 ಹಳ್ಳಿಗಳಲ್ಲಿ ನೇರಳೆ ಕುಂಟೆ ನಾಗೇಂದ್ರ ಕುಮಾರ್ ಅವರ ಮಿಂಚಿನ ಸಂಚಾರ ನಡೆಸಿ, ಗ್ರಾಮದ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಯುವ ಮುಖಂಡರು, ಸಮಾಜ ಸೇವಕರಾಗಿರುವ ನೇರಳೆ ಕುಂಟೆ ನಾಗೇಂದ್ರ ಕುಮಾರ್ ಅವರಿಗೆ ಗ್ರಾಮಸ್ಥರು ಅದ್ದೂರಿಯಾದ ಸ್ವಾಗತವನ್ನು ಕೋರಿದ್ದಾರೆ ಮತ್ತು ಯುವಕರು ಎಲ್ಲಾರು ಸೇರಿ ನೇರಳೆ ಕುಂಟೆ ನಾಗೇಂದ್ರ ಕುಮಾರ್ ಅವರೊಂದಿಗೆ ಪಕ್ಷಾತೀತವಾಗಿ ಜೊತೆಗಿರುತ್ತೇವೆ ಎಂದು ಭರವಸೆ ನೀಡಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಈ ಪಂಚಾಯಿತಿ ವ್ಯಾಪ್ತಿಯ ಹರಿಹರಪುರ ಗ್ರಾಮದಲ್ಲಿ ಇರುವ ಮೂಲಭೂತ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡ ನೇರಳೆ ಕುಂಟೆ ನಾಗೇಂದ್ರ ಕುಮಾರ್, ಸ್ಥಳಕ್ಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಕರೆಸಿ, ಸ್ಥಳದಲ್ಲೇ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಸಿಕೊಡುವುದಾಗಿ ಪಿಡಿಒ ಭರವಸೆ ನೀಡಿದರು. ಬಳಿಕ ಪಂಚಾಯಿತಿ ವ್ಯಾಪ್ತಿಯ ಕೊತ್ತೂರು ಗ್ರಾಮಕ್ಕೆ ಭೇಟಿ ನೀಡಿದ ಗ್ರಾಮಸ್ಥರು ಮತ್ತು ಮುಖಂಡರ ಜತೆ ಸಂವಾದ ನಡೆಸಿದರು. ಇದೇ ವೇಳೆ ಮುಂಬರುವ ಚುನಾವಣೆಯ ಆಗುಹೋಗುಗಳ ಬಗ್ಗೆ ಸಮಾಜ ಸೇವಕರು, ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದರು.
ವರದಿ: ರಾಮಪ್ಪ ಸಿ.ಕೆ.ಪುರ ಪಾವಗಡ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB