ತುಮಕೂರು: ಠಾಣೆಗೆ ಭೇಟಿ ನೀಡಿ, ನೇರವಾಗಿ ದೂರುದಾರರಿಗೆ ಫೋನ್ ಮಾಡಿದ ಗೃಹ ಸಚಿವ ಪರಮೇಶ್ವರ ಅವರು, ಪೊಲೀಸರು ನಿಮ್ಮ ದೂರಿಗೆ ಹೇಗೆ ಸ್ಪಂದಿಸಿದ್ದಾರೆ ಎಂದು ನೇರವಾಗಿ ಮಾಹಿತಿ ಪಡೆದ ಘಟನೆ ಪಾವಗಡ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಈ ಮೂಲಕ ಪೊಲೀಸ್ ಠಾಣೆಯಲ್ಲಿನ ಪೊಲೀಸರ ಕಾರ್ಯವೈಖರಿ ಪರಿಶೀಲಿಸಿದ್ದು, ಸಚಿವರ ನಡೆಯಿಂದ ಪೊಲೀಸ್ ಸಿಬ್ಬಂದಿ ಕ್ಷಣ ಕಾಲ ಗಲಿಬಿಲಿಗೊಂಡರು.
ಪಾವಗಡ ಪೊಲೀಸ್ ಠಾಣೆಗೆ ಏಕಾಏಕಿ ಭೇಟಿ ನೀಡಿದ ಗೃಹ ಸಚಿವ ಪರಮೇಶ್ವರ ಠಾಣೆಯಲ್ಲಿದ್ದ ವಿಸೀಟರ್ ಪುಸ್ತಕ ತೆಗೆದು ನೇರವಾಗಿ ದೂರುದಾರನಿಗೆ ಕರೆ ಮಾಡಿದ್ದಾರೆ.
ಅಕ್ರಮ ಮರಳು ಗಣಿಗಾರಿಕೆ ಬಗ್ಗೆ ಪೊಲೀಸ್ ಠಾಣೆಗೆ ಬಂದು ದೂರುದಾರನು ದೂರು ಕೊಟ್ಟಿದ್ದನು. ಪುಸ್ತಕದಲ್ಲಿದ್ದ ಆತನ ಮೊಬೈಲ್ ನಂಬರ್ ಅನ್ನು ಪರಿಶೀಲಿಸಿದ ಪರಮೇಶ್ವರ್ ಅವರು ಆತನಿಗೆ ನೇರವಾಗಿ ಕರೆ ಮಾಡಿ ಪೊಲೀಸರು ಸ್ಪಂದಿಸಿದ ರೀತಿ ಬಗ್ಗೆ ಮಾಹಿತಿ ಪಡೆದರು.
ಪಾವಗಡ ತಿರುಮಣಿ ಸೋಲಾರ್ ಪಾರ್ಕ್ ಗೆ ಭೇಟಿ ನೀಡಿದ್ದ ಗೃಹ ಸಚಿವ ಪರಮೇಶ್ವರ ಅವರು ಬಳಿಕ ಪಾವಗಡ ಪೊಲೀಸ್ ಠಾಣೆ ಭೇಟಿ ನೀಡಿದ್ದರು.
ಇದೇ ವೇಳೆ ಪಾವಗಡ ಪೊಲೀಸ್ ಠಾಣೆಯ ಕಟ್ಟಡ ಸ್ಥಿತಿ ಪರಿಶೀಲನೆ ನಡೆಸಿದರು. ಈ ವೇಳೆ ಪೊಲೀಸರ ಕಾರ್ಯವೈಖರಿಯನ್ನು ಕೂಡ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಪರಮೇಶ್ವರ್ ಗೆ ತುಮಕೂರು ಎಸ್ಪಿ ರಾಹುಲ್ ಕುಮಾರ್ ಶಹಪೂರ್ ವಾಡ್ ಮಾಹಿತಿ ನೀಡಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA